ನಟ ಪುನೀತ್ ರಾಜ್ಕುಮಾರ್ ಅವರ ಆಪ್ತರಿಂದ ‘ರತ್ನ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಚಿತ್ರದ ಐದು ಹಾಡುಗಳನ್ನು ಪುನೀತ್ ರಾಜ್ಕುಮಾರ್ ಆಪ್ತರಾದ ಅಪ್ಪು ವೆಂಕಟೇಶ್, ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು, ಪುನೀತ್ ಅಂಗರಕ್ಷಕರಾಗಿದ್ದ ಚಲಪತಿ, ಹುಬ್ಳಳಿಯಿಂದ ಬಂದಿದ್ದ ರಘುಪತಿ ಹಾಗೂ ಮಾರುತಿ ಬಿಡುಗಡೆ ಮಾಡಿದರು.
ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರವಿದು. ಚಿತ್ರಕ್ಕೆ ಸತೀಶ್ ಬಾಬು ಸಂಗೀತ ನೀಡಿದ್ದಾರೆ. ಏ.19 ಚಿತ್ರ ಬಿಡುಗಡೆ ಆಗಲಿದೆ. ಹರ್ಷಲ ಹನಿ, ವರ್ಧನ್, ಆನಂದ್ ಅಪ್ಪು, ನಾಗೇಂದ್ರ ಅರಸ್, ಅಮಿತ್ ರಾವ್, ವಿಜಯ್ ಚಂಡೂರ್, ಮಹೇಶ್ ಬಾಬು, ಸುಚಿತ್ ಚೌವ್ಹಾಣ್, ರಾಮು ಕರೂರ್, ಮಂಜು ದೈವಜ್ಞ, ಜಗದೀಶ್ ಕೊಪ್ಪ ತಾರಾಬಳಗದಲ್ಲಿದ್ದಾರೆ.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.