ಕನ್ನಡಪ್ರಭ ಸಿನಿವಾರ್ತೆ
ವಿಜಯನಗರ ಪೇಟ್ರಿಯಾಟ್ಸ್ನಿಂದ ದುನಿಯಾ ವಿಜಯ್ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ನಿಂದ ಶಿವರಾಜ್ಕುಮಾರ್ ಅವರು ಮುಖಾಮುಖಿ ಆದರು. ವಿಜಯನಗರ ಪೇಟ್ರಿಯಾಟ್ಸ್ ತಂಡದ ವಿಜಯ್ ಭಾರದ್ವಾಜ್ ಹಾಗೂ ಜೆಕೆ ಅವರು ಆರಂಭಿಕ ಆಟಗಾರರಾಗಿ 10 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 73 ರನ್ ದಾಖಲಿಸಿತು. ನಂತರ ಬ್ಯಾಟಿಂಗ್ಗೆ ಇಳಿದ ರಾಷ್ಟ್ರಕೂಟ ತಂಡದ ಸುರೇಶ್ ರೈನಾ 38 ಹಾಗೂ ಪ್ರದೀಪ್ ಅವರು 16 ರನ್ ಮಾಡಿ 5 ಓವರ್ಗಳಿಗೇ ಗೇಮ್ ಮುಗಿಸಿದರು.
ಒಡೆಯರ್ ಚಾರ್ಜರ್ಸ್ ಮೇಲೆ ಗೆದ್ದ ಸುದೀಪ್ ಅವರ ಹೊಯ್ಸಳ ಈಗಲ್ಸ್ ತಂಡ, 142 ರನ್ ಗಳಿಸಿದ ಡಾಲಿ ಧನಂಜಯ್ ಅವರ ಕದಂಬ ಲಯನ್ಸ್ ಮುಂದೆ 69 ರನ್ ಮಾಡಿ 73 ರನ್ಗಳ ಅಂತರದಲ್ಲಿ ಸೋಲು ಕಂಡಿತು. ಬಾಕ್ಸ್ 1ಕೆಸಿಸಿಯ ಮೊದಲ ಶತಕದ ವೀರ
ಕೆಸಿಸಿ ಇತಿಹಾಸದಲ್ಲಿ ಮೊದಲ ಶತಕ ಬಾರಿಸಿದ್ದು ಅಂತಾರಾಷ್ಟ್ರೀಯ ಕ್ರಿಕೆಟಿಗ ಟಿ ದಿಲ್ಶಾನ್ ಅವರು. 40 ಎಸೆತಗಳಲ್ಲಿ 101 ರನ್ಗಳಿಸುವ ಮೂಲಕ ಕೆಸಿಸಿ ಮೊದಲ ಶತಕದ ವೀರ ಎನಿಸಿಕೊಂಡು ಮ್ಯಾನ್ ಆಫ್ ದಿ ಮ್ಯಾಚ್ ಕಿರೀಟಕ್ಕೆ ಪಾತ್ರರಾದರು.ಬಾಕ್ಸ್ 2
ಆಟೋಗ್ರಾಫ್ ಟೋಪಿ ಕೊಟ್ಟ ಶಿವಣ್ಣತಮ್ಮ ಸರದಿ ಕಾಯುತ್ತಾ ನಿಂತಿದ್ದ ಶಿವಣ್ಣ ಅವರು ತಮ್ಮ ತಂಡದ ಜತೆಗೆ ಇಡೀ ಮೈದಾನವನ್ನು ಒಂದು ಸುತ್ತು ಹಾಕಿದರು. ಜತೆಗೆ ತಾವೇ ಆಟೋಗ್ರಾಫ್ ಹಾಕಿದ ಕೆಂಪು ಟೋಪಿಗಳನ್ನು ಗ್ಯಾಲರಿಯತ್ತ ಎಸೆಯುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಬಾಕ್ಸ್ 3
ಶರ್ಟ್ ಬಿಚ್ಚಿ ಮೈದಾನಕ್ಕೆ ನುಗ್ಗಿದ ವಿಜಯ್ ಅಭಿಮಾನಿಅಖಾಡದಲ್ಲಿ ದುನಿಯಾ ವಿಜಯ್ ಫೀಲ್ಡಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮೈದಾನಕ್ಕೆ ನುಗ್ಗಿದ ಇಬ್ಬರು ಅಭಿಮಾನಿಗಳು ದುನಿಯಾ ವಿಜಯ್ ಅವರ ಕಾಲು ಹಿಡಿದುಕೊಂಡರು. ಬೌನ್ಸರ್ಗಳು ಬರುವ ಹೊತ್ತಿಗೆ ಒಬ್ಬ ತನ್ನ ಶರ್ಟ್ ಬಿಚ್ಚಿ ವಿಜಯ್ ಅವರ ಟ್ಯಾಟೂ ಹಾಕಿಸಿಕೊಂಡಿರುವುದು ತೋರಿಸಿದರು. ಕೂಡಲೇ ಪೊಲೀಸರು ಬಂದು ಇಬ್ಬರನ್ನು ವಶಕ್ಕೆ ಪಡೆದುಕೊಂಡರೂ ಸೆಲ್ಫಿ ಫೋಟೋ ಬೇಡಿಕೆ ಇಟ್ಟ ಅಭಿಮಾನಿಗಳಿಬ್ಬರ ಅಭಿಮಾನಕ್ಕೆ ಸೋತು ಇಬ್ಬರ ಜತೆಗೆ ಫೋಟೋಗೆ ಪೋಸು ಕೊಟ್ಟರು ದುನಿಯಾ ವಿಜಯ್. ಬಾಕ್ಸ್ 4
ಮಿಂಚಿದ ತಾರೆಗಳುಬೌಲಿಂಗ್ನಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ ನಿರ್ಮಾಪಕ ಶ್ರೀಕಾಂತ್, ಆಕರ್ಷಿಕ ಫೀಲ್ಡಿಂಗ್ ಮೂಲಕ ನಟರಾದ ಶಿವಣ್ಣ, ಗಣೇಶ್, ಅಮೋಘ ಬ್ಯಾಟಿಂಗ್ನಿಂದ ಡಾರ್ಲಿಂಗ್ ಕೃಷ್ಣ, ಧರ್ಮ ಕೀರ್ತಿರಾಜ್, ಪ್ರದೀಪ್ ಅವರು ಮಿಂಚಿದರು.