ಕನ್ನಡಪ್ರಭ ಸಿನಿವಾರ್ತೆ
ಅಮೋಲ್ ಪಾಟೀಲ್ ಮಾತನಾಡಿ, ‘ಇದು ಸಂಪೂರ್ಣವಾಗಿ ಬಿಜಾಪುರದಲ್ಲಿ ನಡೆಯುವ ಕತೆ. ಮನರಂಜನೆಯೇ ಚಿತ್ರದ ಪ್ರಧಾನ ವಸ್ತು. ಒಂದು ಒಳ್ಳೆಯ ತಂಡದ ಜತೆಗೆ ಸಿನಿಮಾ ಮಾಡುತ್ತಿರುವ ಖುಷಿ ಇದೆ. ಟೂರಿಸ್ಟ್ ಗೈಡ್ ಆಗಿರುವವನ ಸುತ್ತ ಸಾಗುವ ಕತೆ ಇಲ್ಲಿದೆ’ ಎಂದರು.
ಪೃಥ್ವಿ ಶಾಮನೂರ್ ಮಾತನಾಡಿ, ‘ಪದವಿಪೂರ್ವ ಚಿತ್ರದ ನಂತರ ಮತ್ತೊಮ್ಮೆ ಯೋಗರಾಜ್ ಭಟ್ ಅವರ ತಂಡದ ಜತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆ. ನಾನು ಇಲ್ಲಿ ಟೂರಿಸ್ಟ್ ಗೈಡ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು. ಹೃತಿಕಾ ಶ್ರೀನಿವಾಸ್, ಯೋಗರಾಜ್ ಭಟ್ ಹಾಗೂ ರವಿ ಶಾಮನೂರ್ ಸಂಗೀತ ನಿರ್ದೇಶಕ ಚೇತನ್, ಛಾಯಾಗ್ರಾಹಕ ಶಿವಶಂಕರ್ ನೂರಂಬಡ ಹಾಜರಿದ್ದು, ಚಿತ್ರದ ಕುರಿತು ಮಾತನಾಡಿದರು.