ಆಪರೇಷನ್‌ ಸಿಂದೂರಕ್ಕೆ 5 ಉಗ್ರರು ಬಲಿ: ಭಾರತ

Published : May 11, 2025, 05:30 AM IST
Pakistan Terrorists

ಸಾರಾಂಶ

ಮಂಗಳವಾರ ತಡರಾತ್ರಿ ಪಾಕಿಸ್ತಾನದ ಉಗ್ರನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದ ಆಪರೇಷನ್‌ ಸಿಂದೂರದಲ್ಲಿ ಮೃತಪಟ್ಟ ಲಷ್ಕರ್‌ ಮತ್ತು ಜೈಶ್‌ ಸಂಘಟನೆಗೆ ಸೇರಿದ 5 ಉಗ್ರರ ಗುರುತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಇಸ್ಲಾಮಾಬಾದ್‌: ಮಂಗಳವಾರ ತಡರಾತ್ರಿ ಪಾಕಿಸ್ತಾನದ ಉಗ್ರನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದ ಆಪರೇಷನ್‌ ಸಿಂದೂರದಲ್ಲಿ ಮೃತಪಟ್ಟ ಲಷ್ಕರ್‌ ಮತ್ತು ಜೈಶ್‌ ಸಂಘಟನೆಗೆ ಸೇರಿದ 5 ಉಗ್ರರ ಗುರುತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ನ ಭಾವ ಮುದಾಸರ್ ಖಾದಿಯಾನ್ ಖಾಸ್ ಹತರಲ್ಲಿ ಒಬ್ಬನಾಗಿದ್ದಾನೆ.. ಆತನ ಅಂತ್ಯಕ್ರಿಯೆಯನ್ನು, ಜಾಗತಿಕ ಉಗ್ರ ಅಬ್ದುಲ್‌ ರೌಫ್‌ ನೇತೃತ್ವದಲ್ಲಿ, ಯೋಧರ ಉಪಸ್ಥಿತಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗಿದ್ದು ತಿಳಿದುಬಂದಿದೆ.

ಮಸೂದ್‌ ಅಜರ್‌ನ ಹಿರಿಯ ಸಹೋದರ ಹಾಗೂ ಲಷ್ಕರ್‌ನ ಬಹಾವಲ್ಪುರ ಉಸ್ತುವಾರಿಯಾಗಿದ್ದ ಹಫೀಜ್ ಮುಹಮ್ಮದ್ ಜಮೀಲ್, ಕಂದಹಾರ್‌ ವಿಮಾನ ಅಪಹರಣಕಾರರಲ್ಲಿ ಪ್ರಮುಖನಾದ ಮೊಹಮ್ಮದ್ ಯೂಸುಫ್ ಅಜರ್, ಖಾಲಿದ್ ಅಲಿಯಾಸ್ ಅಬು ಆಕಾಶ, ಜೈಶ್‌ನ ಮೊಹಮ್ಮದ್ ಹಸನ್ ಖಾನ್ ಭಾರತದ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ ಎಂದು ಮೂಲಗಳು  

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ