ಖ್ಯಾತ ನಿರ್ದೇಶಕ ರಾಜಮೌಳಿಯಿಂದ ನನ್ನ ಜೀವನ ಹಾಳು : ನಿರ್ಮಾಪಕ ಉಪ್ಪಳಪತಿ ಶ್ರೀನಿವಾಸ್‌ ರಾವ್‌ ಆರೋಪ

KannadaprabhaNewsNetwork |  
Published : Feb 28, 2025, 12:49 AM ISTUpdated : Feb 28, 2025, 06:18 AM IST
ರಾಜಮೌಳಿ | Kannada Prabha

ಸಾರಾಂಶ

  ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರು ತಮಗೆ ಕಿರುಕುಳ ನೀಡಿ ಜೀವನವನ್ನೇ ಹಾಳು ಮಾಡಿದ್ದಾರೆ ಎಂದು ಆರೋಪಿಸಿ, ಕಾರ್ಯನಿರ್ವಾಹಕ ನಿರ್ಮಾಪಕ ಉಪ್ಪಳಪತಿ ಶ್ರೀನಿವಾಸ್‌ ರಾವ್‌ (55) ಅವರು ಮೆಟ್ಟುಗುಡ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಹೈದರಾಬಾದ್‌: ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರು ತಮಗೆ ಕಿರುಕುಳ ನೀಡಿ ಜೀವನವನ್ನೇ ಹಾಳು ಮಾಡಿದ್ದಾರೆ ಎಂದು ಆರೋಪಿಸಿ, ಕಾರ್ಯನಿರ್ವಾಹಕ ನಿರ್ಮಾಪಕ ಉಪ್ಪಳಪತಿ ಶ್ರೀನಿವಾಸ್‌ ರಾವ್‌ (55) ಅವರು ಮೆಟ್ಟುಗುಡ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಈ ಸಂಬಂಧ ಸೆಲ್ಫಿ ವಿಡಿಯೋ ಒಂದನ್ನು ಮಾಡಿದ ರಾವ್‌, ‘1990ರಿಂದ 2007ರ ವರೆಗೆ ರಾಜಮೌಳಿಯೊಂದಿಗೆ ಒಳ್ಳೆ ಸ್ನೇಹವಿತ್ತು. ಬಳಿಕ ಹೆಂಗಸೊಬ್ಬಳ ವಿಚಾರವಾಗಿ ನಮ್ಮ ನಡುವೆ ವಾಗ್ವಾದ ಶುರುವಾಯಿತು. ನಾನು ಒಬ್ಬಾಕೆಯನ್ನು ಪ್ರೀತಿಸುತ್ತಿದ್ದು, ಆಕೆಯಿಂದ ದೂರವಾಗುವಂತೆ ರಾಜಮೌಳಿ ಒತ್ತಾಯಿಸಿದರು. ಮೊದಮೊದಲು ಒಪ್ಪದ ನಾನು ಬಳಿಕ ಒಪ್ಪಿದೆ. 

ಈ ವಿಷಯವನ್ನು ನಾನು ಬೇರೆಯವರೆದುರು ಹೇಳಿರಬಹುದೆಂದು ಶಂಕಿಸಿ ಅವರು ಕಿರುಕುಳ ಕೊಡತೊಡಗಿದರು. ನನ್ನ ವೃತ್ತಿಜೀವನವನ್ನೇ ಹಾಳು ಮಾಡಿದರು. ಅವರಿಂದಾಗಿ ನಾನು ಒಬ್ಬಂಟಿಯಾಗಿ ಬದುಕಬೇಕಾಯಿತು. ಆತ್ಮಹತ್ಯೆ ಬಿಟ್ಟರೆ ನನ್ನ ಬಳಿ ಬೇರೆ ಆಯ್ಕೆಯಿಲ್ಲ’ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಲು ರಾಜಮೌಳಿ ನಿರಾಕರಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ