ಚೆನ್ನೈ: ತಮಿಳುನಾಡಿನಲ್ಲಿ ನೆಲೆಸಿರುವ ತೆಲುಗು ಭಾಷಿಕರು 300 ವರ್ಷ ಹಿಂದೆ ರಾಣಿಯರ ಸೇವೆಗೆ ತಮಿಳುನಾಡಿಗೆ ಬಂದಿದ್ದರು ಎಂಬ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ನಟಿ ಕಸ್ತೂರಿ ಶಂಕರ್, ಆ ಹೇಳಿಕೆಯನ್ನು ಹಿಂಪಡೆದಿರುವುದಾಗಿ ಹೇಳಿದ್ದಾರೆ. ಬ್ರಾಹ್ಮಣರನ್ನು ಬೆಂಬಲಿಸಲು ಹಿಂದೂ ಮಕ್ಕಳ್ ಕಟ್ಚಿ ಆಯೋಜಿಸಿದ್ದ ಚಳಚಳಿಯಲ್ಲಿ ತಾವು ನೀಡಿದ್ದ ಹೇಳಿಕೆಗೆ ಕ್ಷಮೆ ಯಾಚಿಸಿರುವ ಕಸ್ತೂರಿ, ‘ವಿಸ್ತೃತ ತೆಲುಗು ಕುಟುಂಬಗಳಿಗೆ ನೋವುಂಟುಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನ.3ರಂದು ಮಾಡಿದ ಭಾಷಣದಲ್ಲಿ ತೆಲುಗರ ಬಗ್ಗೆ ಆಡಿದ ಮಾತುಗಳನ್ನು ಹಿಂಪಡೆಯುತ್ತೇನೆ’ ಎಂದರು. ಅಂತೆಯೇ, ‘ನನ್ನ ಹೇಳಿಕೆ ಕೆಲ ವ್ಯಕ್ತಿಗಳ ಕುರಿತಾಗಿ ಇತ್ತೇ ಹೊರತು ತೆಲುಗು ಸಮುದಾಯದ ಬಗ್ಗೆಯಲ್ಲ. ಈ ವಿವಾದವು ನಾನು ಉಲ್ಲೇಖಿಸಿದ ಅನ್ಯ ಮುಖ್ಯ ಅಂಶಗಳಿಂದ ಗಮನವನ್ನು ಬೇರೆಡೆ ಸೆಳೆದಿರುವುದು ದುರಾದೃಷ್ಟಕರ’ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ತೆಲಂಗಾಣದಲ್ಲಿ ಜಾತಿ ಗಣತಿ ಶುರು
ಹೈದರಾಬಾದ್: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಸಿಎಂ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಸಮಗ್ರ ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ರಾಜಕೀಯ ಹಾಗೂ ಜಾತಿ ಗಣತಿಯನ್ನು ಬುಧವಾರ ಆರಂಭಿಸಿದೆ.ನ.6ರಿಂದ ನ.8ರ ವರೆಗೆ ಮೊದಲ ಹಂತದಲ್ಲಿ ಮನೆಗಳನ್ನು ಪಟ್ಟಿ ಮಾಡಿ, ನಂತರ ನ.9ರಿಂದ ಪ್ರತಿ ಮನೆಯ ಸಮೀಕ್ಷೆ ನಡೆಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.ಈ ಗಣತಿಯನ್ನು ಸಿಎಂ ರೆಡ್ಡಿ, ತುಳಿತಕ್ಕೊಳಗಾದ ವರ್ಗಗಳಿಗೆ ಸಾಮಾಜಿಕ ನ್ಯಾಯ ಹಾಗೂ ಅವಕಾಶಗಳ ಸಮಾನತೆಯನ್ನು ಒದಗಿಸಲು ನಡೆಸುತ್ತಿರುವ ‘ಯಜ್ಞ’ ಎಂದು ಬಣ್ಣಿಸಿದ್ದು, ರಾಹುಲ್ ಗಾಂಧಿ ನಾಯಕತ್ವದಲ್ಲಿ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಲು ನಡೆಯುತ್ತಿರುವ ಸಾಹಸ ಎಂದು ಎಕ್ಸ್ನಲ್ಲಿ ಪೊಸ್ಟ್ ಮಾಡಿದ್ದಾರೆ.
2025ರ ಕ್ವಾಡ್ ಶೃಂಗ ಭಾರತದಲ್ಲಿ: ಟ್ರಂಪ್ ಭಾಗಿ
==
ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್ನ ನೂತನ ಅಧ್ಯಕ್ಷರಾಗಿ ಬಿ.ಆರ್. ನಾಯ್ಡು ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲ ರಾವ್ ಅವರು ದೇಗುಲದೊಳಗಿನ ಚಿನ್ನದ ಬಾಗಿಲಿನ ಬಳಿ ನಾಯ್ಡು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸಮಾರಂಭದ ನಂತರ ನೂತನ ಅಧ್ಯಕ್ಷರು ಕುಟುಂಬ ಸಮೇತವಾಗಿ ದೇವರ ದರ್ಶನ ಪಡೆದರು.