ವಸಂತ ಪಂಚಮಿ ಪುಣ್ಯಸ್ನಾನ ಬಳಿಕ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿರುವ ಕುಂಭಕ್ಕೆ ಅಖಾಡಗಳ ವಿದಾಯ ಶುರು

KannadaprabhaNewsNetwork |  
Published : Feb 06, 2025, 11:46 PM ISTUpdated : Feb 07, 2025, 05:28 AM IST
ಅಖಾಡಗಳನ್ನು ತೊರೆಯುತ್ತಿರುವ ಸನ್ಯಾಸಿಗಳು | Kannada Prabha

ಸಾರಾಂಶ

ಇಡೀ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿರುವ ಮಹಾಕುಂಭಮೇಳ ಇನ್ನೂ ಭಾರೀ ಪ್ರಮಾಣದಲ್ಲಿ ಭಕ್ತರನ್ನು ಆಕರ್ಷಿಸುತ್ತಿರುವ ಹೊತ್ತಿನಲ್ಲೇ ಕುಂಭಮೇಳದ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾದ 13 ಅಖಾಡಗಳು, ಕುಂಭಮೇಳದಿಂದ ಜಾಗಖಾಲಿ ಮಾಡುವ ಪ್ರಕ್ರಿಯೆ ಆರಂಭಿಸಿವೆ.

ಮಹಾಕುಂಭ ನಗರ: ಇಡೀ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿರುವ ಮಹಾಕುಂಭಮೇಳ ಇನ್ನೂ ಭಾರೀ ಪ್ರಮಾಣದಲ್ಲಿ ಭಕ್ತರನ್ನು ಆಕರ್ಷಿಸುತ್ತಿರುವ ಹೊತ್ತಿನಲ್ಲೇ ಕುಂಭಮೇಳದ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾದ 13 ಅಖಾಡಗಳು, ಕುಂಭಮೇಳದಿಂದ ಜಾಗಖಾಲಿ ಮಾಡುವ ಪ್ರಕ್ರಿಯೆ ಆರಂಭಿಸಿವೆ.

ಒಟ್ಟು 13 ಅಖಾಡಗಳು, ಕುಂಭಮೇಳದಲ್ಲಿನ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಮುಕ್ತಾಯಗೊಳಿಸಿ ಸ್ಥಳ ಖಾಲಿ ಮಾಡುವ ಪ್ರಕ್ರಿಯೆ ಭಾಗವಾಗಿ ಮೊದಲ ಹಂತದಲ್ಲಿ ತಮ್ಮ ತಮ್ಮ ಧ್ವಜಗಳನ್ನು ಕೆಳಗಿಳಿಸಲು ಆರಂಭಿಸಿದ್ದಾರೆ. ಜೊತೆಗೆ ಕೆಲವು ಅಖಾಡಗಳು ಕಢಿ ಪಕೋಡಾ ಭೋಜನ ಕೂಡಾ ಮಾಡುವ ಮೂಲಕ ತೆರುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ವಸಂತ ಪಂಚಮಿಯ ಪವಿತ್ರ ಸ್ನಾನ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ನಾಗಾ ಸಾಧುಗಳು ಕುಂಭಮೇಳ ಯಾತ್ರೆ ಮುಕ್ತಾಯಗೊಳಿಸಿದ್ದಾರೆ.

ಇನ್ನು ಕೆಲವು ನಾಗಾ ಸಾಧುಗಳು ಕಾಶ್ಮೀರ ಪ್ರವಾಸ, ಕಾಶಿ ವಿಶ್ವನಾಥನ ದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕಂಡಿದ್ದಾರೆ. ಜ.13ರಂದು ಆರಂಭವಾದ ಕುಂಭಮೇಳ ಮಾ.26ರವರೆಗೂ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿ.ಜೆ.ರಾಯ್‌ ಕೇಸ್‌ : ಸಚಿವೆ ನಿರ್ಮಲಾಗೆ ಕೇರಳ ಸಿಎಂ ಪತ್ರ
ಭಾರತದ ಮಹಾ ದಿಗ್ವಿಜಯ ಯುರೋಪ್‌ ಬಳಿಕ ಇದೀಗ ಅಮೆರಿಕ ಜತೆಗೂ ಭಾರತದ ಡೀಲ್‌