ಅಸ್ಸಾಂ ಪ್ರವಾಹ: 30 ಜಿಲ್ಲೆಯ 24 ಲಕ್ಷ ಜನ ಬಾಧಿತ

KannadaprabhaNewsNetwork |  
Published : Jul 07, 2024, 01:24 AM ISTUpdated : Jul 07, 2024, 05:41 AM IST
ಅಸ್ಸಾಂ | Kannada Prabha

ಸಾರಾಂಶ

ಅಸ್ಸಾಂನ ಸುರಿಯುತ್ತಿರುವ ವಿಪರೀತ ಮಳೆಗೆ ಪ್ರವಾಹ ಸ್ಥಿತಿ ಗಂಭೀರವಾಗಿದೆ. ಬ್ರಹ್ಮಪುತ್ರಾ ನದಿ ಉಕ್ಕೇರಿರುವ ಕಾರಣ 30 ಜಿಲ್ಲೆಯ 24.5 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ತತ್ತರಿಸಿ ಹೋಗಿದ್ದಾರೆ

ಗುವಾಹಟಿ: ಅಸ್ಸಾಂನ ಸುರಿಯುತ್ತಿರುವ ವಿಪರೀತ ಮಳೆಗೆ ಪ್ರವಾಹ ಸ್ಥಿತಿ ಗಂಭೀರವಾಗಿದೆ. ಬ್ರಹ್ಮಪುತ್ರಾ ನದಿ ಉಕ್ಕೇರಿರುವ ಕಾರಣ 30 ಜಿಲ್ಲೆಯ 24.5 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ತತ್ತರಿಸಿ ಹೋಗಿದ್ದಾರೆ. ರಾಜ್ಯದ ಇನ್ನೂ ಅನೇಕ ಪ್ರಮುಖ ನದಿಗಳು ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.

ಶುಕ್ರವಾರ ತಡರಾತ್ರಿ ದಿಬ್ರುಗಢ ಜಿಲ್ಲೆಯ ಪ್ರವಾಹ ಪರಿಸ್ಥಿಯನ್ನು ಅವಲೋಕಸಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಪ್ರವಾಹ ಪೀಡಿತ ಜನರೊಂದಿಗೆ ಸಂವಾದ ನಡೆಸಿದರು. ಒಟ್ಟು 47,103 ಸಂತ್ರಸ್ತರು 612 ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಹಾಗೂ 4,18,614 ಮಂದಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂಬ ಮಾಹಿತಿ ನೀಡಿದರು.

ಈ ವರ್ಷದಲ್ಲಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿರುವವರ ಸಂಖ್ಯೆ 52ಕ್ಕೇರಿದೆ. ಭೂಕುಸಿತ ಮತ್ತು ಚಂಡಮಾರುತದಿಂದ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ- ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ