ಕೃಷ್ಣಮೃಗ ಬೇಟೆಗೆ ಸಲ್ಮಾನ್‌ ಕ್ಷಮೆ ಕೇಳಿದರೆ ಮನ್ನಿಸುವೆವು: ಬಿಷ್ಣೋಯಿ ಸಮಾಜ ಆಫರ್‌

KannadaprabhaNewsNetwork |  
Published : May 15, 2024, 01:39 AM IST
ಸಲ್ಮಾನ್‌ ಖಾನ್‌ | Kannada Prabha

ಸಾರಾಂಶ

ಕೃಷ್ಣಮೃಗ ಬೇಟೆಯಾಡಿದ್ದಕ್ಕೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಖುದ್ದು ಕ್ಷಮೆ ಕೇಳಿದರೆ ಮನ್ನಿಸುವುದಾಗಿ ಬಿಷ್ಣೋಯಿ ಸಮಾಜ ಆಫರ್‌ ನೀಡಿದೆ.

ಮುಂಬೈ: ಕೃಷ್ಣಮೃಗ ಬೇಟೆಯಾಡಿದ ನಟ ಸಲ್ಮಾನ್ ಖಾನ್‌ ಈ ಕುರಿತು ಬಹಿರಂಗ ಕ್ಷಮೆಯಾಚಿಸಿ ಪ್ರಾಣಿಸಂಕುಲವನ್ನು ರಕ್ಷಿಸುವ ಪಣತೊಟ್ಟರೆ ಅವರನ್ನು ಕ್ಷಮಿಸುತ್ತೇವೆ ಎಂದು ಬಿಷ್ಣೋಯಿ ಸಮಾಜ ಆಫರ್‌ ನೀಡಿದೆ.

ಇತ್ತೀಚೆಗೆ ಸಲ್ಮಾನ್‌ ಅವರ ಮಾಜಿ ಗೆಳತಿ ಸೋಮಿ ಅಲಿ ಸಂದರ್ಶನವೊಂದರಲ್ಲಿ ಸಲ್ಮಾನ್‌ ಅವರ ಪರವಾಗಿ ಬಿಷ್ಣೋಯಿ ಸಮಾಜದ ಕ್ಷಮೆ ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಬಿಷ್ಣೋಯಿ ಸಮಾಜದ ಅಧ್ಯಕ್ಷ ದೇವೇಂದ್ರ ಬುಡಿಯಾ, ‘ಸ್ವತಃ ಸಲ್ಮಾನ್‌ ಅವರೇ ತಪ್ಪೊಪ್ಪಿಕೊಂಡರೆ ನಮ್ಮ ಧಾರ್ಮಿಕ ನಿಯಮ ಹೇಳುವಂತೆ ಅವರನ್ನು ಕ್ಷಮಿಸುತ್ತೇವೆ’ ಎಂದಿದ್ದಾರೆ.

1998ರಲ್ಲಿ ಸಲ್ಮಾನ್‌ ಚಿತ್ರೀಕರಣದ ವೇಳೆ ಕೃಷ್ಣಮೃಗವನ್ನು ಬೇಟೆಯಾಡಿದ ಬಳಿಕ ಬಿಷ್ಣೋಯಿ ಸಮಾಜ ಅವರ ಮೇಲೆ ಸದಾ ಕೊಲೆ ಯತ್ನ ನಡೆಸುತ್ತಿದ್ದು, 2018ರಲ್ಲಿ ಸಲ್ಮಾನ್‌ ಖಾನ್‌ಗೆ ಪ್ರಕರಣದಲ್ಲಿ ಶಿಕ್ಷೆಯೂ ಆಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಫಾಸ್ಟ್ಯಾಗ್‌ ದಂಡದಲ್ಲಿ ಕರ್ನಾಟಕ ನಂ.1
ರೈಲ್ವೆ ಟಿಕೆಟ್‌ ದರ ಅಲ್ಪ ಹೆಚ್ಚಳ