ರಸಗೊಬ್ಬರ, ಅಪರೂಪದ ಲೋಹ, ಸುರಂಗ ಯಂತ್ರ ಪೂರೈಕೆ ಭರವಸೆ
ನವದೆಹಲಿ: ಗಲ್ವಾನ್ ಸಂಘರ್ಷದ ಬಳಿಕ ಸಂಪೂರ್ಣ ಹದಗೆಟ್ಟಿದ್ದ ಭಾರತ ಮತ್ತು ಚೀನಾ ಸಂಬಂಧ ಸುಧಾರಿಸುತ್ತಿರುವ ಹೊತ್ತಿನಲ್ಲೇ, ಸೋಮವಾರ ಉಭಯ ದೇಶಗಳ ವಿದೇಶಾಂಗ ಸಚಿವರೊಂದಿಗೆ ನಡೆದ ಸಭೆ ಯಶಸ್ವಿಯಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಚೀನಾದ ವಾಂಗ್ ಯಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತಕ್ಕೆ ಲಾಭದಾಯಕವಾದ ಕೆಲ ಹೆಜ್ಜೆಗಳನ್ನು ಇಡಲಾಗಿದೆ.
ಭಾರತಕ್ಕೆ ಅತಿದೊಡ್ಡ ರಸಗೊಬ್ಬರ ರಫ್ತುದಾರನಾಗಿದ್ದ ಚೀನಾ, ಇದೀಗ ಅದರ ಪೂರೈಕೆಯ ನಿಯಮಗಳನ್ನು ಸರಳಿಸಲು ಒಪ್ಪಿಕೊಂಡಿದೆ. ಅಂತೆಯೇ, ಭೂಮಿಯಡಿ ಸಿಗುವ ದುರ್ಲಭ ಖನಿಜ ಮತ್ತು ಸುರಂಗ ಕೊರೆಯುವ ಯಂತ್ರಗಳ ಬೇಡಿಕೆಗೂ ಸ್ಪಂದಿಸಲು ಒಪ್ಪಿಕೊಂಡಿದೆ.ಭಾರತದ ರೈತರು ಬಳಸುವ ರಸಗೊಬ್ಬರದಲ್ಲಿ ಶೇ.30ರಷ್ಟುಪಾಮದಾಗುತ್ತಿರುವುದು ಚೀನಾದಿಂದ. ಹೀಗಿರುವಾಗ, ಇದರ ರಫ್ತಿನ ಮೇಲೆ ವರ್ಷದ ಹಿಂದೆ ಹೇರಲಾಗಿದ್ದ ನಿರ್ಬಂಧವನ್ನು ಸಡಿಲಿಸಲಾಗಿದೆ. ಅತ್ತ ವಿದ್ಯುತ್ ಚಾಲಿತ ವಾಹನಗಳು, ಡ್ರೋನ್, ಬ್ಯಾಟರಿ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಸಲಾಗುವ ಕೆಲ ಉಪಕರಣಗಳ ತಯಾರಿಗೆ ಈ ಅಪರೂಪದ ಖನಿಜಗಳು ಅಗತ್ಯ. ಇದು ಚೀನಾದಲ್ಲಿ ಹೇರಳವಾಗಿದೆ. ಈಗ ಅವುಗಳ ಪೂರೈಕೆಗೆ ಚೀನಾ ಒಪ್ಪಿಕೊಂಡಿರುವುದರಿಂದ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯ ಬಲವರ್ಧನೆಯಾಗಲಿದೆ.
ದೋವಲ್ ಭೇಟಿ: