ಹಣಕ್ಕಾಗಿ ಅಣ್ಣ-ತಂಗಿ, ಪತಿ-ಪತ್ನಿಯೇ ಮದುವೆ: ಹಾತ್ರಸ್‌ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ

KannadaprabhaNewsNetwork |  
Published : Oct 08, 2024, 01:01 AM ISTUpdated : Oct 08, 2024, 04:55 AM IST
ಮದುವೆ  | Kannada Prabha

ಸಾರಾಂಶ

ಸರ್ಕಾರಿ ಸಾಮೂಹಿಕ ವಿವಾಹದಲ್ಲಿ ಹಣ ಪಡೆಯಲು ಅಣ್ಣ-ತಂಗಿ ಮತ್ತು ಈಗಾಗಲೇ ಮದುವೆಯಾಗಿದ್ದ ಪತಿ-ಪತ್ನಿಗಳು ಮತ್ತೆ ಮದುವೆಯಾಗಿರುವ ಆಘಾತಕಾರಿ ಘಟನೆ ಹಾತ್ರಸ್‌ನಲ್ಲಿ ಬೆಳಕಿಗೆ ಬಂದಿದೆ. ದೂರಿನ ಅನ್ವಯ ಉಪ ವಿಭಾಗೀಯ ನ್ಯಾಯಾಧೀಶರು ತನಿಖೆಗೆ ಆದೇಶಿಸಿದ್ದಾರೆ.

ಹಾತ್ರಸ್‌ (ಉ.ಪ್ರ.): ಸರ್ಕಾರ ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆ ಆದರೆ ಸಿಗುವ ಹಣಕ್ಕಾಗಿ ಅಣ್ಣ-ತಂಗಿ, ಪತಿ-ಪತ್ನಿಯೇ ಮದುವೆಯಾದ ಆಘಾತಕಾರಿ ಘಟನೆ ಉತ್ತರಪ್ರದೇಶದ ಹಾತ್ರಸ್‌ನಲ್ಲಿ ನಡೆದಿದೆ. ಈ ಬಗ್ಗೆ ಸ್ಥಳೀಯರಿಂದ ದೊರೆತ ದೂರಿನ ಅನ್ವಯ ಉಪ ವಿಭಾಗೀಯ ನ್ಯಾಯಾಧೀಶರು ಕ್ರಮ ಕೈಗೊಂಡಿದ್ದು, ತನಿಖೆಗೆ ಆದೇಶಿಸಿದ್ದಾರೆ.

ಏನಿದು ಪ್ರಕರಣ?: ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯ ಅಡಿಯಲ್ಲಿ ವಧುವಿನ ಬ್ಯಾಂಕ್‌ ಖಾತೆಗೆ 35,000 ರು. ಜಮೆ ಮಾಡಿ, ಅಗತ್ಯ ವಸ್ತುಗಳ ಖರೀದಿಗೆ 10,000 ರು. ಹಾಗೂ ಮದುವೆ ಖರ್ಚಿಗೆ 6,000 ರು. ನೀಡಲಾಗುವುದು. ಈ ಹಣದ ಆಸೆಯಿಂದ ಸಿಕಂದರಾರಾವ್‌ನ ಈಗಾಗಲೇ ಮದುವೆಯಾಗಿದ್ದ ಎರಡು ಜೋಡಿ ಮತ್ತು ಒಂದು ಅಣ್ಣ-ತಂಗಿ ಜೋಡಿ ಮದುವೆಯಾಗಿರುವುದು ಕಂಡುಬಂದಿದೆ.

ಯೋಜನೆಯ ಲಾಭ ಪಡೆಯುವ ಸಲುವಾಗಿ ಪುರಸಭೆ ಸಿಬ್ಬಂದಿ ಈ ಮದುವೆ ಮಾಡಿಸಿದ್ದಾರೆ ಎಂದು ಹೇಳಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸ್ಟಾರ್‌ವಾರ್‌ ರೀತಿ ಲೇಸರ್‌ ಅಸ್ತ್ರ ರಾಜ್ಯದಲ್ಲಿ ಅಭಿವೃದ್ಧಿ!
ಗೌರಿ ಲಂಕೇಶ್‌ ಹತ್ಯೆ ಆರೋಪಿ ಮಹಾರಾಷ್ಟ್ರ ಪಾಲಿಕೆ ಚುನಾವಣೆಗೆ