ಪೂಂಛ್‌ ದಾಳಿ ಬಿಜೆಪಿ ಸ್ಟಂಟ್‌: ಪಂಜಾಬ್‌ ಮಾಜಿ ಸಿಎಂ ಚನ್ನಿ ವಿವಾದ

KannadaprabhaNewsNetwork |  
Published : May 06, 2024, 12:40 AM ISTUpdated : May 06, 2024, 05:23 AM IST
ಚರಣ್‌ಜಿತ್‌ ಸಿಂಗ್‌ ಚನ್ನಿ | Kannada Prabha

ಸಾರಾಂಶ

ಪೂಂಛ್‌ ದಾಳಿ ಬಿಜೆಪಿ ಸ್ಟಂಟ್‌ ಎಂಬುದಾಗಿ ಪಂಜಾಬ್‌ ಮಾಜಿ ಸಿಎಂ ಚನ್ನಿ ವಿವಾದ ಸೃಷ್ಟಿಸಿದ್ದು, ಚುನಾವಣೆ ವೇಳೆ ಜನರ ಜೀವದ ಜತೆ ಬಿಜೆಪಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.

ನವದೆಹಲಿ: ಕಾಶ್ಮೀರದ ಪೂಂಛ್‌ ಪ್ರದೇಶದಲ್ಲಿ ಭಾರತೀಯ ವಾಯುಸೇನಾ ಯೋಧರ ಮೇಲೆ ನಡೆದ ಉಗ್ರರ ದಾಳಿ ಬಗ್ಗೆ ಪಂಜಾಬ್‌ ಮಾಜಿ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ವಿವಾದಿತ ಹೇಳಿಕೆ ನೀಡಿದ್ದಾರೆ. ಇದು ಚುನಾವಣಾ ನಿಮಿತ್ತ ಬಿಜೆಪಿಯಿಂದ ಮಾಡಿಸಲಾದ ಪೂರ್ವ ನಿಯೋಜಿತ ಸ್ಟಂಟ್‌ ಆಗಿದೆ ಎಂದು ಆರೋಪಿಸಿದ್ದಾರೆ.

ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಪ್ರತಿಬಾರಿ ಚುನಾವಣೆ ಬಂದಾಗಲೂ ಈ ರೀತಿ ಪೂರ್ವ ನಿಯೋಜಿತ ದಾಳಿ ನಡೆಸಿ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತದೆ. ಅದರಂತೆ ಶನಿವಾರ ನಡೆದ ಪೂಂಛ್‌ ದಾಳಿಯೂ ಬಿಜೆಪಿ ಮಾಡಿಸಿರುವ ಸ್ಟಂಟ್‌ ಆಗಿದ್ದು, ಅದನ್ನು ಉಗ್ರಕೃತ್ಯವೆಂದು ಬಿಂಬಿಸಲಾಗುತ್ತಿರುವುದು ಶುದ್ಧ ಸುಳ್ಳು’ ಎಂದು ವಾಗ್ದಾಳಿ ನಡೆಸಿದರು.

ಶನಿವಾರ ಪೂಂಛ್‌ ಪ್ರದೇಶದಲ್ಲಿ ಭಾರತೀಯ ವಾಯುಸೇನಯ ಯೋಧರೊಬ್ಬರನ್ನು ಉಗ್ರರು ಅಮಾನುಷವಾಗಿ ದಾಳಿ ಮಾಡಿ ಹತ್ಯೆ ಮಾಡಿ ನಾಲ್ಬರು ಯೋಧರನ್ನು ಗಾಯಗೊಳಿಸಿದ್ದರು. ದುಷ್ಕರ್ಮಿಗಳಿಗಾಗಿ ಶೋಧ ಮುಂದುವರೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಣಾಗೆ ಏಮ್ಸ್‌ನಲ್ಲಿ ದಯಾಮರಣ ಪ್ರಕ್ರಿಯೆ ಆರಂಭ
‘ಒನ್‌ ಬ್ಯಾಟಲ್‌ ಆಫ್ಟರ್‌ ಅನದರ್‌’ಗೆ ‘ಅತ್ಯುತ್ತಮ ಚಿತ್ರ’ ಆಸ್ಕರ್‌ ಗೌರವ