ಅಭಿಮಾನಿಗಳ ಶಿಸ್ತು ನಟರ ಕೆಲಸ, ನಿಯಮ ಉಲ್ಲಂಘನೆ ಸಹಿಸಲ್ಲ : ತೆಲಂಗಾಣದ ಮುಖ್ಯಮಂತ್ರಿ ಸಿಎಂ ರೇವಂತ್‌

KannadaprabhaNewsNetwork |  
Published : Dec 27, 2024, 12:46 AM ISTUpdated : Dec 27, 2024, 04:57 AM IST
ರೇವಂತ್‌ ರೆಡ್ಡಿ | Kannada Prabha

ಸಾರಾಂಶ

‘ತಮ್ಮ ಅಭಿಮಾನಿಗಳು ಶಿಸ್ತಿನಿಂದ ವರ್ತಿಸುವಂತೆ ಮಾಡುವುದು ನಟರ ಹೊಣೆ. ಒಂದು ವೇಳೆ ಯಾವುದೇ ಅನಾಹುತವಾದರೆ ಕಾನೂನು ನಿರ್ವಹಣೆ ಬಗ್ಗೆ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ತೆಲುಗು ಚಿತ್ರರಂಗಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಹೈದರಾಬಾದ್‌ : ‘ತಮ್ಮ ಅಭಿಮಾನಿಗಳು ಶಿಸ್ತಿನಿಂದ ವರ್ತಿಸುವಂತೆ ಮಾಡುವುದು ನಟರ ಹೊಣೆ. ಒಂದು ವೇಳೆ ಯಾವುದೇ ಅನಾಹುತವಾದರೆ ಕಾನೂನು ನಿರ್ವಹಣೆ ಬಗ್ಗೆ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ತೆಲುಗು ಚಿತ್ರರಂಗಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಟಾಲಿವುಡ್‌ ಜನಪ್ರಿಯ ನಟ ಅಲ್ಲು ಅರ್ಜುನ್‌ರ ಬಂಧನ, ಬಿಡುಗಡೆ ಪ್ರಹಸನದಲ್ಲಿ ಸರ್ಕಾರದ ಕೈವಾಡದ ಕುರಿತು ಭಾರೀ ಪರ- ವಿರೋಧ ಚರ್ಚೆ ನಡೆದ ಬೆನ್ನಲ್ಲೇ, ಚಿತ್ರರಂಗದ ಪ್ರಮುಖರು ಗುರುವಾರ ಸಿಎಂ ರೇವಂತ್‌ ರೆಡ್ಡಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಚಿತ್ರೋದ್ಯಮಕ್ಕೆ ಇರಬೇಕಾದ ಸಾಮಾಜಿಕ ಹೊಣೆಗಾರಿಕೆ ಅಗತ್ಯತೆಯ ಬಗ್ಗೆ ರೇವಂತ್‌ ರೆಡ್ಡಿ ಪಾಠ ಮಾಡಿದ್ದಾರೆ. ಆದರೆ ಚಿತ್ರರಂಗದ ಅಭಿವೃದ್ಧಿಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಸಿಎಂ ಭರವಸೆ ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೈಸೂರು ಸ್ಯಾಂಡಲ್ ಸೋಪು ಉತ್ಪನ್ನ : ದಾಖಲೆ ಬರೆದ ಕೆಎಸ್‌ಡಿಎಲ್‌
ಮೇಘಾಲಯ ಮೇಲಿಲ್ಲ ಬಾಂಗ್ಲಾ ಸಂಘರ್ಷ ಪರಿಣಾಮ : ವಿಜಯ್‌