ಸಂಪತ್ತಿನ ಹಂಚಿಕೆ: ಬಿಜೆಪಿ ವಿರುದ್ಧ ಆಯೋಗಕ್ಕೆ ಕೈ ದೂರು

KannadaprabhaNewsNetwork |  
Published : Apr 24, 2024, 02:19 AM IST
ಕಾಂಗ್ರೆಸ್‌   | Kannada Prabha

ಸಾರಾಂಶ

ಬಿಜೆಪಿಯು ಕಾಂಗ್ರೆಸ್‌ ಪ್ರಣಾಳಿಕೆಯ ಕುರಿತು ಮಧ್ಯಮ ವರ್ಗದ ಜನತೆ ಹಾಗೂ ವೇತನದಾರರಲ್ಲಿ ಗೊಂದಲ ಹುಟ್ಟಿಸುವಂತಹ ಹೇಳಿಕೆಯನ್ನು ನಿಗ್ರಹಿಸಿ ಅಂತಹ ಹೇಳಿಕೆ ನೀಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ನವದೆಹಲಿ: ಬಿಜೆಪಿಯು ಕಾಂಗ್ರೆಸ್‌ ಪ್ರಣಾಳಿಕೆಯ ಕುರಿತು ಮಧ್ಯಮ ವರ್ಗದ ಜನತೆ ಹಾಗೂ ವೇತನದಾರರಲ್ಲಿ ಗೊಂದಲ ಹುಟ್ಟಿಸುವಂತಹ ಹೇಳಿಕೆಯನ್ನು ನಿಗ್ರಹಿಸಿ ಅಂತಹ ಹೇಳಿಕೆ ನೀಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಈ ಕುರಿತು ಅಖಿಲ ಭಾರತ ವೃತ್ತಿಪರ ಕಾಂಗ್ರೆಸ್‌ ಅಧ್ಯಕ್ಷ ಪ್ರವೀಣ್‌ ಚಕ್ರವರ್ತಿ ದೂರು ನೀಡಿದ್ದು, ಬಿಜೆಪಿಯ ನಾಯಕರೊಬ್ಬರು ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಜವಹರ್‌ಲಾಲ್‌ ನೆಹರೂ ರಾಷ್ಟ್ರೀಯ ಆದಾಯ ಮರುಹಂಚಿಕೆ ಯೋಜನೆ ಎಂಬ ಹೆಸರಿನಲ್ಲಿ ಎಲ್ಲರ ಬಳಿಯಿರುವ ಮೂರನೇ ಎರಡರಷ್ಟು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ವ್ಯಾಟ್ಸಾಪ್‌ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಅಪ್ಪಟ ಸುಳ್ಳಾಗಿದ್ದು, ಆ ನಾಯಕನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ದೆಹಲಿ ಪೊಲೀಸ್‌ ಮತ್ತು ಮೆಟಾ ಇಂಡಿಯಾ ಬಳಿಯೂ ದೂರು ನೀಡುವುದಾಗಿ ಪ್ರವೀಣ್‌ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ