ಕಳೆದ ವಾರ ಕೆಂಪುಕೋಟೆಯಲ್ಲಿ ಜೈನ ಸಮುದಾಯದ ಕಾರ್ಯಕ್ರಮ ನಡೆವ ವೇಳೆ ಕೋಟಿ ರು. ಮೌಲ್ಯದ ಚಿನ್ನದ ಕಳಶವನ್ನು ಕದ್ದಿದ್ದ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. 760 ಗ್ರಾಂ ಚಿನ್ನ, 150 ಗ್ರಾಂ ವಜ್ರ, ರತ್ನಗಳಿಂದ ಮಾಡಲ್ಪಟ್ಟ 1 ಕೋಟಿ ರು. ಮೌಲ್ಯದ ಕಳಶವನ್ನು ಪೊಲೀಸರು ಮರುವಶಪಡಿಸಿಕೊಂಡಿದ್ದಾರೆ.
ನವದೆಹಲಿ: ಕಳೆದ ವಾರ ಕೆಂಪುಕೋಟೆಯಲ್ಲಿ ಜೈನ ಸಮುದಾಯದ ಕಾರ್ಯಕ್ರಮ ನಡೆವ ವೇಳೆ ಕೋಟಿ ರು. ಮೌಲ್ಯದ ಚಿನ್ನದ ಕಳಶವನ್ನು ಕದ್ದಿದ್ದ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. 760 ಗ್ರಾಂ ಚಿನ್ನ, 150 ಗ್ರಾಂ ವಜ್ರ, ರತ್ನಗಳಿಂದ ಮಾಡಲ್ಪಟ್ಟ 1 ಕೋಟಿ ರು. ಮೌಲ್ಯದ ಕಳಶವನ್ನು ಪೊಲೀಸರು ಮರುವಶಪಡಿಸಿಕೊಂಡಿದ್ದಾರೆ.
ಬಂಧಿತ ಭೂಷಣ್ ವರ್ಮಾ ಉತ್ತರ ಪ್ರದೇಶದ ಹಾಪುರ್ ಮೂಲದವನಾಗಿದ್ದು, ಈ ಹಿಂದೆ ಹಲವು ಬಾರಿ ಕೆಂಪುಕೋಟೆಗೆ ಬಂದು ಸ್ಥಳಾನ್ವೇಷಣೆ ನಡೆಸಿದ್ದ. ಸೆ.3ರಂದು ಎಲ್ಲರೂ ಸ್ಪೀಕರ್ ಓಂ ಬಿರ್ಲಾ ಅವರನ್ನು ಸ್ವಾಗತಿಸುತ್ತಿದ್ದಾಗ, ಈತ ಕಳಶವನ್ನು ಕದ್ದು ಪರಾರಿಯಾಗಿದ್ದ. ತನಿಖೆ ಆರಂಭಿಸಿದ ಪೊಲೀಸರು ಭೂಷಣ್ನನ್ನು ಬಂಧಿಸಿದ್ದಾರೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.