ಪಕ್ಷಗಳಿಗೆ ಭರವಸೆ ನೀಡುವ, ಮತದಾರರಿಗೆ ಈಡೇರಿಕೆ ರೀತಿ ತಿಳಿವ ಹಕ್ಕಿದೆ: ಚು. ಆಯೋಗ

KannadaprabhaNewsNetwork |  
Published : Feb 25, 2024, 01:46 AM ISTUpdated : Feb 25, 2024, 11:34 AM IST
ರಾಜೀವ್ | Kannada Prabha

ಸಾರಾಂಶ

ಜನರಿಗೆ ರಾಜಕೀಯ ಪಕ್ಷಗಳು ಘೋಷಿಸುವ ಭರವಸೆಗಳಿಗೆ ಸಂಪನ್ಮೂಲಹೊಂದಿಸುವ ಕುರಿತು ಹಕ್ಕಿದೆ. ಆದರೆ ಈ ವಿಷಯ ನ್ಯಾಯಾಲಯದಲ್ಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ತಿಳಿಸಿದ್ದಾರೆ.

ಪಿಟಿಐ ಚೆನ್ನೈ

ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಮೂಲಕ ಮತದಾರರಿಗೆ ಭರವಸೆಗಳನ್ನು ನೀಡುವ ಹಕ್ಕು ರಾಜಕೀಯ ಪಕ್ಷಗಳಿಗೆ ಇದೆ. 

ಅದೇ ರೀತಿ ಆ ಭರವಸೆಗಳು ನೈಜವೇ ಹಾಗೂ ಅವನ್ನು ಈಡೇರಿಸಲು ಯಾವ ರೀತಿ ಸಂಪನ್ಮೂಲ ಹೊಂದಿಸಲಾಗುತ್ತದೆ ಎಂಬುದನ್ನು ತಿಳಿಯುವ ಹಕ್ಕು ಕೂಡ ಮತದಾರರಿಗೆ ಇದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ. ಆದರೆ ಈ ವಿಚಾರ ಸದ್ಯ ಕೋರ್ಟ್‌ನಲ್ಲಿದೆ ಎಂದೂ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಭರವಸೆಗಳನ್ನು ಘೋಷಣೆ ಮಾಡಲು ರಾಜಕೀಯ ಪಕ್ಷಗಳಿಗಾಗಿ ಆಯೋಗ ಅರ್ಜಿಯೊಂದನ್ನು ಸಿದ್ಧಪಡಿಸಿದೆ. 

ಆದರೆ ಆ ವಿಷಯವೂ ಕೋರ್ಟ್‌ನಲ್ಲಿರುವ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದರು.ಚುನಾವಣೆ ಸಂದರ್ಭದಲ್ಲಿ ಕಟ್ಟೆಚ್ಚರದಿಂದ ಇರುವಂತೆ ಹಾಗೂ ನಗದು- ಉಡುಗೊರೆಗಳ ವಿತರಣೆ ತಡೆಯುವಂತೆ ಕಾನೂನು ಅನುಪಾಲನಾ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. 

ಆನ್‌ಲೈನ್‌ ವಹಿವಾಟುಗಳ ಮೇಲೆ ನಿಗಾ ಇಡುವಂತೆ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೋರೆಷನ್‌ ಆಫ್‌ ಇಂಡಿಯಾಗೆ ಹೊಣೆ ವಹಿಸಲಾಗಿದೆ ಎಂದು ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ
ಇಂದು ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ