ವಾಯುಪಡೆಯ ತಪರಾಕಿ ಬೆನ್ನಲ್ಲೇಸೇನೆಗೆ ತೇಜಸ್ ಯುದ್ಧವಿಮಾನ

KannadaprabhaNewsNetwork |  
Published : Jun 04, 2025, 12:40 AM IST
ತೇಜಸ್ | Kannada Prabha

ಸಾರಾಂಶ

ರಕ್ಷಣಾ ಉಪಕರಣಗಳ ಪೂರೈಕೆಯಲ್ಲಾಗುತ್ತಿರುವ ವಿಳಂಬದ ಕುರಿತು ಇತ್ತೀಚೆಗೆ ಭಾರತೀಯ ವಾಯುಪಡೆ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಅತೃಪ್ತಿ ಹೊರಹಾಕಿದ ಬೆನ್ನಲ್ಲೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಜೂನ್ ಅಂತ್ಯದ ವೇಳೆಗೆ ತನ್ನ ನಾಸಿಕ್ ಘಟಕದಿಂದ ಮೊದಲ ತೇಜಸ್ ಎಂಕೆ-1ಎ ಯುದ್ಧವಿಮಾನವನ್ನು ಹಸ್ತಾಂತರಿಸಲು ಸಜ್ಜಾಗಿದೆ.

ಈ ಮಾಸಾಂತ್ಯದ ವೇಳೆಗೆ ಎಚ್‌ಎಎಲ್‌ನಿಂದ ಹಸ್ತಾಂತರ ಸಾಧ್ಯತೆ

ಪೂರೈಕೆ ವಿಳಂಬಕ್ಕೆ ವಾಯುಪಡೆ ಮುಖ್ಯಸ್ಥರಿಂದ ಅತೃಪ್ತಿ ಬೆನ್ನಲ್ಲೆ ಕ್ರಮ

==

ನವದೆಹಲಿ: ರಕ್ಷಣಾ ಉಪಕರಣಗಳ ಪೂರೈಕೆಯಲ್ಲಾಗುತ್ತಿರುವ ವಿಳಂಬದ ಕುರಿತು ಇತ್ತೀಚೆಗೆ ಭಾರತೀಯ ವಾಯುಪಡೆ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಅತೃಪ್ತಿ ಹೊರಹಾಕಿದ ಬೆನ್ನಲ್ಲೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಜೂನ್ ಅಂತ್ಯದ ವೇಳೆಗೆ ತನ್ನ ನಾಸಿಕ್ ಘಟಕದಿಂದ ಮೊದಲ ತೇಜಸ್ ಎಂಕೆ-1ಎ ಯುದ್ಧವಿಮಾನವನ್ನು ಹಸ್ತಾಂತರಿಸಲು ಸಜ್ಜಾಗಿದೆ.

ಫೆ.2021ರಲ್ಲಿ ಭಾರತೀಯ ವಾಯುಪಡೆಯು 83 ತೇಜಸ್ ಎಂಕೆ -1ಎ ಜೆಟ್‌ಗಳಿಗಾಗಿ ಎಚ್‌ಎಎಲ್‌ನೊಂದಿಗೆ 48,000 ಕೋಟಿ ರು. ಒಪ್ಪಂದಕ್ಕೆ ಸಹಿ ಹಾಕಿತ್ತು. 2024ರ ಮಾ.31ರೊಳಗೆ ಮೊದಲ ವಿಮಾನ ಒದಗಿಸುವುದಾಗಿ ಎಚ್‌ಎಎಲ್‌ ತಿಳಿಸಿತ್ತು. ಆದರೆ ಅಮೆರಿಕ ಮೂಲದ ಜಿಇ ಏರೋಸ್ಪೇಸ್‌ನಿಂದ ಎಫ್ 404 ಎಂಜಿನ್‌ಗಳ ಪೂರೈಕೆಯಲ್ಲಿ ವಿಳಂಬವಾದ ಕಾರಣ ಜೆಟ್‌ಗಳ ಪೂರೈಕೆಯೂ 1 ವರ್ಷಕ್ಕೂ ಅಧಿಕ ಕಾಲ ವಿಳಂಬವಾಯಿತು.

ಎಚ್‌ಎಎಲ್‌ನ 2 ಘಟಕಗಳು ಬೆಂಗಳೂರಿನಲ್ಲಿ ಹಾಗೂ 1 ಘಟಕ ಪುಣೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಘಟಕವೂ ವರ್ಷಕ್ಕೆ ಗರಿಷ್ಠ 8 ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿವೆ. ಪ್ರಯೋಗ ಯಶಸ್ವಿಯಾದ ಕೂಡಲೇ ನಾಸಿಕ್ ಘಟಕವು ತನ್ನ ಮೊದಲ ವಿಮಾನವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ವಾಯುಪಡೆ ಮುಖ್ಯಸ್ಥ ಸಿಂಗ್, ‘ಕಾಲಮಿತಿ ನಮ್ಮ ಮುಂದಿರುವ ಬಹುದೊಡ್ಡ ಸಮಸ್ಯೆ. ಒಪ್ಪಂದಕ್ಕೆ ಸಹಿ ಹಾಕಿದ ಒಂದೇ ಒಂದು ಪ್ರಾಜೆಕ್ಟ್ ಈವರೆಗೆ ಕಾಲಮಿತಿಯೊಳಗೆ ಪೂರ್ಣಗೊಂಡಿಲ್ಲ’ ಎಂದು ಬೇಸರಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಹಿಂಸಾಪೀಡಿತ ಮಣಿಪುರಕ್ಕೆ 1 ವರ್ಷದ ಬಳಿಕ ಸರ್ಕಾರ
ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು