ಆಂಧ್ರ ರೈಲು ಅಪಘಾತಕ್ಕೆ ಚಾಲಕರ ಎಡವಟ್ಟೇ ಕಾರಣ

KannadaprabhaNewsNetwork |  
Published : Oct 31, 2023, 01:16 AM IST
ಆಂಧ್ರ ಪ್ರದೇಶ ರೈಲು ದುರಂತ | Kannada Prabha

ಸಾರಾಂಶ

ಆಂಧ್ರಪ್ರದೇಶದಲ್ಲಿ ಭಾನುವಾರ ಸಂಭವಿಸಿದ ರೈಲು ಅಪಘಾತಕ್ಕೆ ರಾಯಗಢ ಪ್ಯಾಸೆಂಜರ್ ರೈಲಿನ ಲೋಕಪೈಲಟ್‌ಗಳೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. 2 ಸಿಗ್ನಲ್‌ಗಳನ್ನು ಜಂಪ್‌ ಮಾಡಿ ಈ ರೈಲು ಮತ್ತೊಂದು ಪ್ಯಾಸೆಂಜರ್‌ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನವದೆಹಲಿ: ಆಂಧ್ರಪ್ರದೇಶದಲ್ಲಿ ಭಾನುವಾರ ಸಂಭವಿಸಿದ ರೈಲು ಅಪಘಾತಕ್ಕೆ ರಾಯಗಢ ಪ್ಯಾಸೆಂಜರ್ ರೈಲಿನ ಲೋಕಪೈಲಟ್‌ಗಳೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. 2 ಸಿಗ್ನಲ್‌ಗಳನ್ನು ಜಂಪ್‌ ಮಾಡಿ ಈ ರೈಲು ಮತ್ತೊಂದು ಪ್ಯಾಸೆಂಜರ್‌ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಪಘಾತದ ಸ್ಥಳ ಶೋಧನೆ, ಲಭ್ಯವಿರುವ ಸಾಕ್ಷ್ಯಗಳ ಪರಿಶೀಲನೆ, ಸಂಬಂಧಪಟ್ಟ ಅಧಿಕಾರಿಗಳ ಹೇಳಿಕೆಗಳನ್ನು ಆಧರಿಸಿ 7 ಮಂದಿಯ ತಂಡ ಪ್ರಾಥಮಿಕ ವರದಿಯನ್ನು ಸಲ್ಲಿಕೆ ಮಾಡಿದೆ. ರಾಯಗಢ ಪ್ಯಾಸೆಂಜರ್‌ ರೈಲು 2 ದೋಷಪೂರಿತ ಆಟೋ ಸಿಗ್ನಲ್‌ಗಳನ್ನು ದಾಟಿದೆ. ನಿಯಮಗಳ ಪ್ರಕಾರ ಆಟೋ ಸಿಗ್ನಲ್‌ಗಳು ದೋಷಪೂರಿತವಾಗಿದ್ದರೆ ಪ್ರತಿ ಸಿಗ್ನಲ್‌ ಬಳಿಯೂ 10 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಿ, ಬಳಿಕ ಗಂಟೆಗೆ 10 ಕಿ.ಮೀ. ವೇಗದಲ್ಲಿ ಮುಂದುವರೆಯಬೇಕು. ಆದರೆ ರಾಯಗಢ ರೈಲಿನ ಲೋಕೋ ಪೈಲಟ್‌ಗಳು ಈ ನಿಯಮವನ್ನು ಪಾಲಿಸದ ಕಾರಣ ಅಪಘಾತ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಈ ದುರಂತದಲ್ಲಿ ಇಬ್ಬರು ಲೋಕೋಪೈಲಟ್‌ಗಳು ಸಹ ಮೃತ ಪಟ್ಟಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶೀಘ್ರದಲ್ಲೇ ಆಲ್ಕೋಹಾಲ್‌ನಿಂದ ಓಡಾಡಲಿವೆ ಭಾರತದ ಕಾರುಗಳು
ಪುರುಷರ ಕೋಣೆಗೆ ಹೋಗ್ದೆ ಸ್ತ್ರೀ ರಾಜಕಾರಣಿಗಳು ಯಶಸ್ವಿ ಆಗಲ್ಲ: ಪಪ್ಪು