ಜ.26ರಂದು ಪಂಜಾಬ್‌ ಸಿಎಂ, ಡಿಜಿಪಿ ಹತ್ಯೆ: ಪನ್ನು ಬೆದರಿಕೆ

KannadaprabhaNewsNetwork |  
Published : Jan 17, 2024, 01:46 AM ISTUpdated : Jan 17, 2024, 01:17 PM IST
ಗುರುಪತ್ವಂತ್‌ ಸಿಂಗ್‌ ಪನ್ನೂನ್‌ | Kannada Prabha

ಸಾರಾಂಶ

ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಜ.26ರ ಗಣರಾಜ್ಯೋತ್ಸವದಂದು ಪಂಜಾಬ್‌ ಮುಖ್ಯಮಂತ್ರಿ ಮತ್ತು ಪೊಲೀಸ್‌ ಮಹಾನಿರ್ದೇಶಕರನ್ನು ಕೊಲ್ಲುವ ಬೆದರಿಕೆ ಹಾಕಿದ್ದಾನೆ.

ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಜ.26ರ ಗಣರಾಜ್ಯೋತ್ಸವದಂದು ಪಂಜಾಬ್‌ ಮುಖ್ಯಮಂತ್ರಿ ಮತ್ತು ಪೊಲೀಸ್‌ ಮಹಾನಿರ್ದೇಶಕರನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ. ಈ ಕುರಿತು ವಿಡಿಯೋ ಸಂದೇಶ ಮಾಡಿರುವ ಪನ್ನೂನ್‌, ‘ಗಣರಾಜ್ಯೋತ್ಸವದಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್ ಮಾನ್‌ ಮತ್ತು ಪೊಲೀಸ್‌ ಮಹಾನಿರ್ದೇಶಕರಾದ ಗೌರವ್‌ ಯಾದವ್‌ರನ್ನು ಸಂಘಟನೆಯ ಸದಸ್ಯರೆಲ್ಲ ಒಗ್ಗೂಡಿ ದಾಳಿ ಮಾಡಿ ಸಾಯಿಸಬೇಕು’ ಎಂದು ಕರೆ ನೀಡಿದ್ದಾನೆ. 

ಭಾರತ ಸರ್ಕಾರದಿಂದ 2020ರಲ್ಲೇ ವೈಯಕ್ತಿಕ ಉಗ್ರ ಎಂದು ಘೋಷಿಸಲ್ಪಟ್ಟಿರುವ ಗುರುಪತ್ವಂತ್‌ ಸಿಂಗ್‌, ವಿದೇಶದಲ್ಲಿ ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಯನ್ನು ಸ್ಥಾಪಿಸಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದಾನೆ. 

ಇದಕ್ಕೂ ಮೊದಲು ಭಾರತದ ಹಲವಾರು ಮಹತ್ವದ ಸ್ಥಳಗಳು ಮತ್ತು ವ್ಯಕ್ತಿಗಳ ಮೇಲೆ ದಾಳಿ ಮಾಡುವುದಾಗಿ ಹುಸಿ ಬೆದರಿಕೆ ಕರೆ ಒಡ್ಡಿದ್ದ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಷೇರಿಗಿಂತ ಚಿನ್ನ ಬೆಳ್ಳಿ ಹೂಡಿಕೆಯೇ ಹೆಚ್ಚು ಲಾಭ
‘ಚೈನೀಸ್’ ಎಂದು ಬೈದು ತ್ರಿಪುರದ ಯುವಕನ ಹತ್ಯೆ