ಹಳೇ ನಟ​ರಿಂದ ಯುವ ನಟ​ರಿಗೆ ಚಾನ್ಸ್‌ ಮಿಸ್‌: ರಜ​ನಿಗೆ ತಮಿ​ಳು​ನಾ​ಡಿನ ಹಿರಿ​ಯ ಸಚಿವ ದುರೈ​ಮು​ರು​ಗನ್‌ ಟಾಂಗ್‌

KannadaprabhaNewsNetwork |  
Published : Aug 26, 2024, 01:33 AM ISTUpdated : Aug 26, 2024, 04:47 AM IST
ಮುರಗನ್‌ | Kannada Prabha

ಸಾರಾಂಶ

‘ಹ​ಳೆಯ, ಗಡ್ಡ ಬಿಟ್ಟ ಹಾಗೂ ಹಲ್ಲು ಬಿದ್ದಿ​ರುವ ನಟ​ರಿಂದ ಯುವ ನಟ​ರಿಗೆ ಅವಕಾ​ಶವೇ ಸಿಗ​ದಂತಾ​ಗಿ​ದೆ ಎಂದು ತಮಿ​ಳು​ನಾ​ಡಿನ ಹಿರಿ​ಯ ಸಚಿವ ದುರೈ​ಮು​ರು​ಗನ್‌ ಹೇಳಿ​ದ್ದಾರೆ.

ಚೆನ್ನೈ: ‘ಹ​ಳೆಯ, ಗಡ್ಡ ಬಿಟ್ಟಹಾಗೂ ಹಲ್ಲು ಬಿದ್ದಿ​ರುವ ನಟ​ರಿಂದ ಯುವ ನಟ​ರಿಗೆ ಅವಕಾ​ಶವೇ ಸಿಗ​ದಂತಾ​ಗಿ​ದೆ ಎಂದು ತಮಿ​ಳು​ನಾ​ಡಿನ ಹಿರಿ​ಯ ಸಚಿವ ದುರೈ​ಮು​ರು​ಗನ್‌ ಹೇಳಿ​ದ್ದಾರೆ. ನಟ ರಜ​ನೀ​ಕಾಂತ್‌ ರನ್ನು ಉದ್ದೇ​ಶಿ​ಸಿಯೇ ಅವರು ಹೀಗೆ ಹೇಳಿ​ದ್ದಾರೆ ಎಂದು ವಿಶ್ಲೇ​ಷಿ​ಸ​ಲಾ​ಗಿದೆ. ಇತ್ತೀ​ಚೆಗೆ ರಜನಿ ಅವರು ಸಿಎಂ ಎಂ.ಕೆ. ಸ್ಟಾಲಿ​ನ್‌​ರನ್ನು ಹೊಗಳಿ ಅವರ ಸುತ್ತ​ಲಿನ ಹಿರಿಯ ಸಚಿ​ವ​ರನ್ನು ತೆಗ​ಳಿ​ದ್ದರು. ಹೀಗಾಗಿ ದುರೈ​ಮು​ರು​ಗನ್‌ ರಜನಿ ಹಿರಿ​ ತನ ಉದ್ದೇ​ಶಿಸಿ ಟಾಂಗ್‌ ನೀಡಿ​ದ್ದಾರೆನ್ನ​ಲಾ​ಗಿದೆ.

ಬಿಡುಗಡೆಯಾದ 10 ದಿನಕ್ಕೇ ₹500 ಕೋಟಿ ಬಾಚಿಕೊಂಡ ‘ಸ್ತ್ರೀ-2’

ನವದೆಹಲಿ: ರಾಜ್‌ಕುಮಾರ್‌ ರಾವ್ ಮತ್ತು ಶ್ರದ್ಧಾ ಕಪೂರ್‌ ಅಭಿನಯದ ಹಾರರ್‌ ಕಾಮಿಡಿ ಚಿತ್ರ ‘ಸ್ತ್ರೀ-2’ ಬಿಡುಗಡೆಯಾದ 10 ದಿನಗಳಲ್ಲಿ ವಿಶ್ವಾದ್ಯಂತ ₹500 ಕೋಟಿ ಬಾಚಿಕೊಂಡಿದೆ.ಭಾರತದಲ್ಲಿ ₹426 ಕೋಟಿ ಹಾಗೂ ವಿದೇಶದಲ್ಲಿ ₹78.5 ಕೋಟಿ ಕಲೆಕ್ಷನ್‌ ಮಾಡಿದೆ. ಮದ್ದೊಕ್‌ ಫಿಲ್ಮ್ಸ್‌ ನಿರ್ಮಾಣದಲ್ಲಿ ಅಮರ್‌ ಕೌಶಿಕ್ ನಿರ್ದೇಶನದಲ್ಲಿ ಆ.15 ರಂದು ತೆರೆಕಂಡ ಈ ಚಿತ್ರವು 2018 ರಲ್ಲಿ ಬಿಡುಗಡೆಯಾದ ‘ಸ್ತ್ರೀ’ ಚಿತ್ರದ ಮುಂದುವರೆದ ಭಾಗವಾಗಿದೆ.

ಈ ಕುರಿತು ಮದ್ದೊಕ್‌ ಫಿಲ್ಮ್ಸ್‌ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ, ‘ಸ್ತ್ರೀ-2’ ಚಿತ್ರ ಬಿಡುಗಡೆಯಾದ 10 ದಿನಗಳಲ್ಲಿ 500 ಕೋಟಿ ರು. ಸಂಪಾದಿಸಿ ದಾಖಲೆ ನಿರ್ಮಿಸಿದೆ. ಸಿನಿ ಪ್ರೇಕ್ಷಕರ ಪ್ರೀತಿ ಹಾಗೂ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಫೋಸ್ಟ್‌ ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗೌರಿ ಲಂಕೇಶ್‌ ಹತ್ಯೆ ಆರೋಪಿ ಮಹಾರಾಷ್ಟ್ರ ಪಾಲಿಕೆ ಚುನಾವಣೆಗೆ
ನಮ್ಮ ಯುದ್ಧ ವಿಮಾನಕ್ಕೆ ಭಾರೀ ಡಿಮ್ಯಾಂಡ್‌, ಸಾಲ ಬೇಡ : ಪಾಕ್‌