ಉತ್ತರಾಖಂಡಲ್ಲಿ ಭೀಭತ್ಸ ಕೃತ್ಯ । ಯುವಕ ಸಾವು
ತೆಹ್ರಿ ಗರ್ವಾಲ್: ಮೇಲ್ವರ್ಗದ ಬಾಲಕಿಯೊಬ್ಬಳ ಸ್ನೇಹ ಮಾಡಿದ್ದಕ್ಕೆ ದಲಿತ ಸಮುದಾಯಕ್ಕೆ ಸೇರಿದ 18 ವರ್ಷದ ಯುವಕನೊಬ್ಬನಿಗೆ ಚಿತ್ರಹಿಂಸೆ ನೀಡಲಾಗಿದ್ದು, ಆತ ಮೃತಪಟ್ಟಿರುವ ಘಟನೆ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಮನೆಯವರ ಹಿಂಸೆಯಿಂದ ಕೇತನ್ ಲಾಲ್ ಮೃತಪಟ್ಟಿರುವುದಾಗಿ ಅವನ ಕುಟುಂಬ ಆರೋಪಿಸಿದ್ದು, ನ್ಯಾಯಕ್ಕೆ ಆಗ್ರಹಿಸಿದೆ.
ಆಗಿದ್ದೇನು?:6 ತಿಂಗಳ ಹಿಂದೆ ಕೇತನ್ಗೆ ಅಪ್ರಾಪ್ತೆಯ ಪರಿಚಯವಾಗಿತ್ತು. ಆಕೆ ಭಾನುವಾರ ಕರೆ ಮಾಡಿ ಕರೆದಳೆಂದು ಕೇತನ್ ತನ್ನ ಸ್ನೇಹಿತ ದಿವಾಕರ್ ದಿಮ್ರಿ ಜತೆ ಅವಳ ಹಳ್ಳಿಗೆ ಹೋಗಿದ್ದ. ಅಲ್ಲಿ ಬಾಲಕಿಯ ಮನೆಯವರು ಕೇತನ್ ಮತ್ತು ದಿವಾಕರ್ನನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಕೇತನ್ ಮೃತಪಟ್ಟಿದ್ದು, ದಿವಾಕರ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅತ್ತ, ‘ಇಕ್ಕಳದಿಂದ ಮಗನ ಉಗುರು ಕಿತ್ತು, ಪಾದಕ್ಕೆ ಮೊಳೆ ಹೊಡೆದಿದ್ದಾರೆ. ಜನನಾಂಗಗಳಿಗೆ ತೀವ್ರ ಗಾಯ ಮಾಡಿದ್ದಾರೆ’ ಎಂದು ಕೇತನ್ ತಂದೆ ದೂರಿದ್ದಾರೆ.