ನಿರೀಕ್ಷೆಯಂತೆ ವಿಶ್ವಾಸ ಮತ ಗೆದ್ದ ಸಿಎಂ ನಿತೀಶ್‌ ಕುಮಾರ್‌

KannadaprabhaNewsNetwork |  
Published : Feb 13, 2024, 12:46 AM ISTUpdated : Feb 13, 2024, 07:29 AM IST
ನಿತೀಶ್‌ ಕುಮಾರ್‌ | Kannada Prabha

ಸಾರಾಂಶ

ಇಂಡಿಯಾ ಮೈತ್ರಿಕೂಟದಿಂದ ಹೊರಬಂದು ಎನ್‌ಡಿಎ ಜತೆಗೂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ನೇತೃತ್ವದ ಜೆಡಿಯು- ಬಿಜೆಪಿ ಮೈತ್ರಿ ಸರ್ಕಾರ ಸೋಮವಾರ ನಿರೀಕ್ಷೆಯಂತೆ ಸಂಪೂರ್ಣ ವಿಶ್ವಾಸಮತ ಸಾಬೀತು ಮಾಡಿದೆ.

ಪಟನಾ: ಇಂಡಿಯಾ ಮೈತ್ರಿಕೂಟದಿಂದ ಹೊರಬಂದು ಎನ್‌ಡಿಎ ಜತೆಗೂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ನೇತೃತ್ವದ ಜೆಡಿಯು- ಬಿಜೆಪಿ ಮೈತ್ರಿ ಸರ್ಕಾರ ಸೋಮವಾರ ನಿರೀಕ್ಷೆಯಂತೆ ಸಂಪೂರ್ಣ ವಿಶ್ವಾಸಮತ ಸಾಬೀತು ಮಾಡಿದೆ. 

ಧ್ವನಿಮತದ ಮೂಲಕ ವಿಶ್ವಾಸಮತ ಅಂಗೀಕರಿಸಲಾಗಿದ್ದು, ಒಟ್ಟು 243 ಬಲದ ವಿಧಾನಸಭೆಯಲ್ಲಿ 129 ಶಾಸಕರು ನಿತೀಶ್‌ ಅವರ ಪರವಾಗಿ ಮತ ಚಲಾಯಿಸಿದ್ದಾರೆ. ಈ ವೇಳೆ ವಿಪಕ್ಷಗಳ ಸದಸ್ಯರು ಸದನದಿಂದ ಹೊರ ನಡೆದರು.

ಇನ್ನು ವಿಶ್ವಾಸಮತ ಯಾಚನೆ ವೇಳೆ ಮಾತನಾಡಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ‘ನಾನು ಯಾವಾಗಲೂ ನಿತೀಶ್‌ ಕುಮಾರ್‌ ಅವರನ್ನು ತಂದೆಯ ಸ್ಥಾನದಲ್ಲಿರುವ ವ್ಯಕ್ತಿ ಎಂದು ನೋಡುತ್ತಿದ್ದೆ. ಅವರನ್ನು ನಾನು ದಶರಥ ಎಂದು ಪರಿಗಣಿಸಿದ್ದೇನೆ. 

ಯಾವ ಕಾರಣಕ್ಕೆ ಅವರು ಇಂಡಿಯಾ ಕೂಟ ತೊರೆದರು ಎಂದು ನನಗೆ ಗೊತ್ತಿಲ್ಲ. ಅವರು ಎನ್‌ಡಿಎಗೆ ಮರಳಿದ್ದು ನನಗೆ ಆಶ್ಚರ್ಯವಾಗಿದೆ’ ಎಂದರು.

ಈ ಹಿಂದೆ ಬಿಹಾರದಲ್ಲಿ ಆರ್‌ಜೆಡಿ- ಜೆಡಿಯು ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಈ ಎರಡೂ ಪಕ್ಷಗಳು ಇಂಡಿಯಾ ಕೂಟದ ಭಾಗವಾಗಿದ್ದವು. 

ಆದರೆ ದಿಢೀರನೇ ನಿತೀಶ್‌ ಇಂಡಿಯಾ ತೊರೆದು ತಮ್ಮ ಹಳೆಯ ಪಾಲುದಾರ ಎನ್‌ಡಿಎ ಜತೆ ಕೈಗೂಡಿಸಿ, ಆರ್‌ಜೆಡಿಯೊಂದಿಗೆ ಮೈತ್ರಿ ಮುರಿದುಕೊಂಡು ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ