ಪತ್ನಿ ಅಸ್ಥಿ ವಿಸರ್ಜನೆಗೆ ಬಂದಿದ್ದ ಪತಿಯೂ ಬಲಿ

KannadaprabhaNewsNetwork |  
Published : Jun 14, 2025, 12:41 AM ISTUpdated : Jun 14, 2025, 04:52 AM IST
ಅರ್ಜುನ್  | Kannada Prabha

ಸಾರಾಂಶ

ಗುಜರಾತ್‌ ವಿಮಾನ ದುರಂತದಲ್ಲಿ ಮಡಿದ ಪ್ರತಿಯೊಬ್ಬರದ್ದೂ ಒಂದೊಂದು ದುರಂತ ಕಥೆ. ವಾರದ ಹಿಂದಷ್ಟೇ ಲಂಡನ್‌ನಲ್ಲಿ ಸಾವನ್ನಪ್ಪಿದ್ದ ಪತ್ನಿ ಚಿತಾಭಸ್ಮ ವಿಸರ್ಜನೆಗೆ ಭಾರತಕ್ಕೆ ಬಂದಿದ್ದ ಅರ್ಜುನ್ ಭಾಯ್ ಹಿಂದಿರುಗುವ ವೇಳೆ ಅವಘಢದಲ್ಲಿ ಬಲಿಯಾಗಿದ್ದಾರೆ.  

 ಅಹಮದಾಬಾದ್‌: ಗುಜರಾತ್‌ ವಿಮಾನ ದುರಂತದಲ್ಲಿ ಮಡಿದ ಪ್ರತಿಯೊಬ್ಬರದ್ದೂ ಒಂದೊಂದು ದುರಂತ ಕಥೆ. ವಾರದ ಹಿಂದಷ್ಟೇ ಲಂಡನ್‌ನಲ್ಲಿ ಸಾವನ್ನಪ್ಪಿದ್ದ ಪತ್ನಿ ಚಿತಾಭಸ್ಮ ವಿಸರ್ಜನೆಗೆ ಭಾರತಕ್ಕೆ ಬಂದಿದ್ದ ಅರ್ಜುನ್ ಭಾಯ್ ಹಿಂದಿರುಗುವ ವೇಳೆ ಅವಘಢದಲ್ಲಿ ಬಲಿಯಾಗಿದ್ದಾರೆ. ವಾರದ ಅಂತರದಲ್ಲಿ ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡು ಪುಟ್ಟ ಕಂದಮ್ಮಗಳು ಅನಾಥರಾಗಿದ್ದಾರೆ.

ಅಮ್ರೇಲಿ ನಿವಾಸಿ ಅರ್ಜುನ್ ಭಾಯ್‌ ಪತ್ನಿ ಭಾರತಿ ಬೆನ್‌ ಲಂಡನ್‌ನಲ್ಲಿ ನಿಧನರಾಗಿದ್ದರು. ಪತ್ನಿ ಆಸೆಯಂತೆ ಅಸ್ಥಿ ವಿಸರ್ಜನೆಗಾಗಿ ಅರ್ಜುನ್ ಭಾರತಕ್ಕೆ ಬಂದು ಅಮ್ರೇಲಿ ಕೊಳ ಮತ್ತು ನದಿಯಲ್ಲಿ ವಿಸರ್ಜಿಸಿದ್ದರು. ಬಳಿಕ ಅವರು ಲಂಡನ್‌ಗೆ ಹಿಂದಿರುಗಲು ವಿಮಾನವನ್ನೇರಿದ್ದ ಸಂದರ್ಭದಲ್ಲಿ ದುರಂತಕ್ಕೆ ಬಲಿಯಾಗಿದ್ದಾರೆ. ದುಃಖದ ಸಂಗತಿಯೆಂದರೆ ವಿಧಿಯಾಟಕ್ಕೆ ದಂಪತಿಯ 8, 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ವಾರದಲ್ಲಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಳ್ಳುವಂತಾಗಿದೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ