ಹಿಂದು-ಮುಸ್ಲಿಂ ರಾಜಕೀಯ ಮಾಡಿದರೆ ನಾನು ಸಾರ್ವಜನಿಕ ಬದುಕಿಗೆ ಯೋಗ್ಯನಲ್ಲ: ಮೋದಿ

KannadaprabhaNewsNetwork |  
Published : May 15, 2024, 01:33 AM IST
ಮೋದಿ | Kannada Prabha

ಸಾರಾಂಶ

ದಿಗ್ಬಂಧನದ ಸಂಭಾವ್ಯತೆ ಎದುರಿಸಬೇಕಾಗುತ್ತದೆ. ಇರಾನ್‌ ದೇಶದ ಜತೆ ಯಾರೂ ವ್ಯವಹರಿಸುವಂತಿಲ್ಲ ಎಂದು ಅಮೆರಿಕ ಭಾರತಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ.

ಆಸ್ತಿ ಹಂಚಿಕೆ ಹೇಳಿಕೆ ನೀಡುವಾಗ ಮುಸ್ಲಿಂ ಪದ ಬಳಸಿಲ್ಲ. ಹಿಂದು-ಮುಸ್ಲಿಂ ಭೇದ ಮಾಡೋದಿಲ್ಲ, ಇದು ನನ್ನ ಸಂಕಲ್ಪ ಎಂದು ಹೇಳಿ ವಾರಾಣಸಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ಮಾಡಿದರು.

ವಾರಾಣಸಿ: ‘ನಾನು ಎಂದು ಹಿಂದೂ-ಮುಸ್ಲಿಂ ರಾಜಕೀಯ ಮಾಡಲು ಪ್ರಾರಂಭ ಮಾಡುವೆನೋ ಅದೇ ದಿನ ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯನಲ್ಲ. ನಾನು ಎಂದೂ ಹಿಂದೂ-ಮುಸ್ಲಿಂ ರಾಜಕೀಯ ಮಾಡಲ್ಲ. ಇದು ನನ್ನ ಸಂಕಲ್ಪ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಮಂಗಳವಾರ ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಗಂಗಾ ನದಿಯಲ್ಲಿ ದೋಣಿ ವಿಹಾರ ನಡೆಸುತ್ತ ಟೀವಿ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡಿದ ಮೋದಿ, ತಾವು ಇತ್ತೀಚೆಗೆ ನೀಡಿದ ‘ಹೆಚ್ಚು ಮಕ್ಕಳ ಹೆರುವವರಿಗೆ ಕಾಂಗ್ರೆಸ್‌ ಪಕ್ಷವು ದೇಶದ ಜನರ ಆಸ್ತಿ ಜಪ್ತಿ ಮಾಡಿಕೊಂಡು ಪಾಲು ನೀಡಲಿದೆ’ ಎಂಬ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದರು ಹಾಗೂ ಆ ಮಾತು ಹೇಳುವಾಗ ಈ ಮೇಲಿನಂತೆ ನುಡಿದರು.‘ಹೆಚ್ಚು ಮಕ್ಕಳ ಹೆರುವವರಿಗೆ ದೇಶದ ಆಸ್ತಿ ಹಂಚಿಕೆಯಾಗಲಿದೆ ಎಂದು ನಾನು ಹೇಳುವಾಗ ಎಲ್ಲೂ ಮುಸ್ಲಿಂ ಎಂಬ ಪದ ಬಳಸಿಲ್ಲ. ಮುಸ್ಲಿಮರನ್ನು ಉದ್ದೇಶಿಸಿಯೇ ನಾನು ಹೇಳಿಕೆ ನೀಡಿದೆ ಎಂಬ ವರದಿಗಳನ್ನು ನೋಡಿ ನಾನು ಅವಾಕ್ಕಾಗಿದ್ದೇನೆ. 11 ಮಕ್ಕಳಿದ್ದಾರೆ ಎಂಬ ಹೇಳಿಕೆ ಬಂದಾಗ ಏಕೆ ಅದನ್ನು ಮುಸ್ಲಿಮರಿಗೇ ಜೋಡಿಸುತ್ತೀರಿ? ಏಕೆ ಮುಸಲ್ಮಾನರಿಗೆ ಅನ್ಯಾಯ ಮಾಡುತ್ತೀರಿ ನೀವು? ಇಲ್ಲಿನ ಬಡ ಕುಟುಂಬಗಳಲ್ಲೂ ಇದೇ ಪರಿಸ್ಥಿತಿ ಇದೆ. ಅವರಿಗೆ ಮಕ್ಕಳನ್ನು ಓದಿಸಲೂ ಆಗುತ್ತಿಲ್ಲ. ಯಾವುದೇ ಸಮಾಜ ಇರಲಿ. ಎಲ್ಲಿ ಬಡತನ ಇದೆಯೋ ಅಲ್ಲಿ ಮಕ್ಕಳೂ ಹೆಚ್ಚಿದ್ದಾರೆ. ನಾನು ಎಲ್ಲೂ ಹಿಂದೂ-ಮುಸ್ಲಿಂ ಎಂದಿಲ್ಲ. ನಾನು ಹೇಳಿದ್ದೇನು ಎಂದರೆ ‘ಎಷ್ಟು ಮಕ್ಕಳನ್ನು ನೀವು ಹೊಂದಿದ್ದೀರೋ ಆ ಮಕ್ಕಳ ಪಾಲನೆ-ಪೋಷಣೆ ಮಾಡಬೇಕು. ಸರ್ಕಾರವು ಆ ಮಕ್ಕಳನ್ನು ಪಾಲನೆ ಮಾಡುವಂಥ ಪರಿಸ್ಥಿತಿ ಸೃಷ್ಟಿಸಬಾರದು’ ಎಂಬುದಾಗಿತ್ತು’ ಎಂದರು.ಆಗ ಪತ್ರಕರ್ತೆಯು, ‘ನಿಮಗೆ ಮುಸ್ಲಿಮರು ಮತ ಹಾಕುತ್ತಾರಾ?’ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಮೋದಿ, ‘ನನ್ನ ದೇಶದ ಜನ ನನಗೆ ಮತ ಹಾಕುವರು ಎಂಬ ವಿಶ್ವಾಸವಿದೆ. ಯಾವತ್ತು ನಾನು ಹಿಂದೂ-ಮುಸಲ್ಮಾನ ಎಂದು (ಭೇದ-ಭಾವ) ಮಾಡುತ್ತೇನೋ ಅಂದಿನಿಂದ ನಾನು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯನಲ್ಲ. ನಾನು ಹಿಂದೂ-ಮುಸಲ್ಮಾನ ಎಂದು (ಭೇದ-ಭಾವ) ಮಾಡುವುದಿಲ್ಲ. ಇದು ನನ್ನ ಸಂಕಲ್ಪ’ ಎಂದರು.

‘ಒಂದು ಊರಿನಲ್ಲಿ 200 ಮನೆಗಳಿವೆ ಎಂದುಕೊಳ್ಳೋಣ. ಆಗ ಸರ್ಕಾರದ ಯೋಜನೆ ಎಲ್ಲರಿಗೂ ಮುಟ್ಟಬೇಕು ಎಂದು ನಾನು ಕೆಲಸ ಮಾಡುತ್ತೇನೇ ವಿನಾ, ಆಗ ಆ ಧರ್ಮದವ ಯಾರು? ಈ ಧರ್ಮದವ ಯಾರು ಎಂದು ನೋಡಲು ಹೋಗುವುದಿಲ್ಲ. ಅಲ್ಲಿ 60 ಲಾಭಾರ್ಥಿಗಳು ಇದ್ದರೆ ಎಲ್ಲರಿಗೂ ಜಾತಿ ಭೇದವಿಲ್ಲದೇ ಯೋಜನೆಗಳ ಲಾಭ ತಲುಪಿಸುತ್ತೇನೆ’ ಎಂದರು.‘ನಾನು ಯಾವತ್ತೂ ಮುಸ್ಲಿಮರ ಮೇಲೆ ಪ್ರೀತಿ ಹೊಂದಿದ್ದೇನೆ ಎಂಬ ಹೇಳಿಕೆ ನೀಡುತ್ತ ಅದನ್ನು ಮಾರ್ಕೆಟಿಂಗ್‌ (ಪ್ರಚಾರ) ಮಾಡಲು ಇಷ್ಟಪಡುವುದಿಲ್ಲ. ಯಾವತ್ತು ಪ್ರಚಾರ ಮಾಡಲು ಇಷ್ಟಪಡುವೆನೋ ಅಂದು ನಾನು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯ ಎನ್ನಿಸಿಕೊಳ್ಳಲ್ಲ. ನಾನು ಮತ ಬ್ಯಾಂಕ್‌ಗಾಗಿ ಕೆಲಸ ಮಾಡುವುದಿಲ್ಲ. ನಾನು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅನ್ನು ನಂಬುತ್ತೇನೆ’ ಎಂದು ಮೋದಿ ಸ್ಪಷ್ಟಪಡಿಸಿದರು.ನನ್ನ ಮನೆಗೆ ಮುಸ್ಲಿಮರ ಊಟ:‘ನೀವು ಮುಸ್ಲಿಮರ ವಿರುದ್ಧ ಇಲ್ಲ ಎಂಬ ಗ್ರಹಿಕೆಯನ್ನು ಮುರಿಯುವಲ್ಲಿ ಏಕೆ ಯಶಸ್ವಿಯಾಗಲಿಲ್ಲ?’ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ‘ಇದು ಮುಸಲ್ಮಾನರ ಪ್ರಶ್ನೆಯಲ್ಲ. 2002ರ ನಂತರ ನನ್ನ ಇಮೇಜ್ ಗೆ ಧಕ್ಕೆಯಾಯಿತು’ ಎಂದು ಹೇಳಿದರು ಹಾಗೂ ತಾವು ಮತ್ತು ತಮ್ಮ ಕುಟುಂಬ ಹೇಗೆ ಬಾಲ್ಯದಲ್ಲಿ ಮುಸ್ಲಿಮರ ಜತೆ ಅನ್ಯೋನ್ಯವಾಗಿತ್ತು ಎಂಬ ಕೆಲವು ಪ್ರಸಂಗಗಳನ್ನು ವಿವರಿಸಿದರು.‘ನನ್ನ ಮನೆಯಲ್ಲಿ, ನನ್ನ ಸುತ್ತಲೂ ಎಲ್ಲಾ ಮುಸ್ಲಿಂ ಕುಟುಂಬಗಳಿದ್ದವು. ನಮ್ಮ ಮನೆಯಲ್ಲೂ ಈದ್ ಆಚರಿಸುತ್ತಿದ್ದರು. ಈದ್ ದಿನದಂದು ನಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ನನ್ನ ಮನೆಗೆ ಎಲ್ಲಾ ಮುಸ್ಲಿಂ ಕುಟುಂಬಗಳಿಂದ ಆಹಾರ ಬರುತ್ತಿತ್ತು. ಮೊಹರಂ ಪ್ರಾರಂಭವಾದಾಗ, ನಾವು ತಾಜಿಯಾ ಅಡಿಯಲ್ಲಿ ನಡೆದುಕೊಂಡು ಸಾಗಲು ನಮಗೆ ಕಲಿಸಲಾಗಿತ್ತು. ನಾನು ಆ ಜಗತ್ತಿನಲ್ಲಿ ಬೆಳೆದೆ. ಇಂದಿಗೂ ನನ್ನ ಅನೇಕ ಸ್ನೇಹಿತರು ಮುಸ್ಲಿಮರಾಗಿದ್ದಾರೆ’ ಎಂದು ಹೇಳಿದರು.‘2002ರ ನಂತರ (ಗುಜರಾತ್‌ ಗಲಭೆ ನಂತರ) ನನ್ನ ಇಮೇಜ್‌ಗೆ ಧಕ್ಕೆಯಾದಾಗ ನೆಲದ ವಾಸ್ತವತೆಯನ್ನು ಅರಿಯಲು ಸಮೀಕ್ಷೆ ನಡೆಸಿದ್ದೆ’ ಎಂದ ಪ್ರಧಾನಿ ಆ ಸಮೀಕ್ಷೆಯಲ್ಲಿ ಏನಾಯಿತೆಂಬ ಸ್ವಾರಸ್ಯಕರ ಮಾಹಿತಿ ಬಿಚ್ಚಿಟ್ಟರು.‘ಅಹಮದಾಬಾದ್‌ನಲ್ಲಿ ಮಾಣೆಕ್ ಚೌಕ್ ಎಂಬ ಸ್ಥಳವಿದೆ. ಅಲ್ಲಿ ಜನರು ಸಂಜೆ ತಿಂಡಿ ತಿನ್ನಲು ಹೋಗುತ್ತಾರೆ. ಅಲ್ಲಿನ ಎಲ್ಲ ವ್ಯಾಪಾರಿಗಳು ಮುಸ್ಲಿಮರು ಮತ್ತು ಎಲ್ಲಾ ಖರೀದಿದಾರರು ಹಿಂದೂಗಳು. 2002ರಲ್ಲಿ ಆ ಮಾರುಕಟ್ಟೆಯಲ್ಲಿ ಸಮೀಕ್ಷೆ ನಡೆಸಲು ಕೆಲವರನ್ನು ಕಳುಹಿಸಿದ್ದೆ. ಸಮೀಕ್ಷೆ ಮಾಡುವವರಲ್ಲಿ ಒಬ್ಬ ವ್ಯಕ್ತಿ ನನ್ನ ವಿರುದ್ಧ ಮಾತನಾಡಿದ. ಆಗ ಅಂಗಡಿಯವನು ಅವನನ್ನು ತಡೆದು ‘ಮೋದಿ ವಿರುದ್ಧ ಒಂದು ಮಾತು ಹೇಳಬೇಡಿ. ಇಂದು ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ ಎಂದರೆ ಅದು ಮೋದಿಯವರಿಂದಾಗಿ’ ಎಂದ. ಸುಮಾರು ಶೇ.90 ಅಂಗಡಿ ಮಾಲೀಕರು ಇದೇ ಮಾತು ಹೇಳಿದರು’ ಎಂದು ಮೋದಿ ವಿವರಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!