ರಾಮ ಮಂದಿರ ಅಪವಿತ್ರ, ಯಾರೂ ಹೋಗಬೇಡಿ: ಟಿಎಂಸಿ ಶಾಸಕ

KannadaprabhaNewsNetwork |  
Published : Mar 06, 2024, 02:16 AM IST
ರಾಮೇಂದು ಸಿನ್ಹಾ ರಾಯ್‌ | Kannada Prabha

ಸಾರಾಂಶ

ರಾಮಮಂದಿರ ಕೇವಲ ತೋರಿಕೆಗೆ ನಿರ್ಮಿಸಿದ್ದು, ಅಲ್ಲಿಗೆ ತೆರಳಿದಲ್ಲಿ ಜನರು ಅಪವಿತ್ರರಾಗುವುದಾಗಿ ಟಿಎಂಸಿ ಶಾಸಕ ರಾಮೇಂದು ಸಿನ್ಹ ರಾಯ್‌ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಕೋಲ್ಕತಾ: ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ರಾಮೇಂದು ಸಿಂಹ ರಾಯ್ ಅವರು ಅಯೋಧ್ಯೆಯ ರಾಮಮಂದಿರವನ್ನು ‘ಅಪವಿತ್ರ’ ಮತ್ತು ‘ಶೋ ಪೀಸ್’ ಎಂದು ಕರೆದಿದ್ದು, ಭಾರೀ ವಿವಾದ ಹುಟ್ಟುಹಾಕಿದ್ದಾರೆ.

ಸಮಾರಂಭವೊಂದರಲ್ಲಿ ಭಾಷಣ ಮಾಡಿದ ಅವರು, ‘ನನ್ನ ಅಭಿಪ್ರಾಯದಲ್ಲಿ ಯಾವುದೇ ಭಾರತೀಯ ಹಿಂದೂ ವ್ಯಕ್ತಿಯು ಪೂಜೆ ಸಲ್ಲಿಸಲು ‘ಅಪವಿತ್ರ’ ರಾಮಮಂದಿರಕ್ಕೆ ಭೇಟಿ ನೀಡಬಾರದು.

ಅಲ್ಲಿ (ಅಯೋಧ್ಯೆ) ಕೇವಲ ‘ಶೋ ಪೀಸ್‌’ ಮಾತ್ರ ನಿರ್ಮಿಸಲಾಗಿದೆ’ ಎಂದು ಹೇಳಿದ್ದಾರೆ, ಈ ವಿಡಿಯೋವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ‘ರಾಯ್ ಅವರ ಮಾತುಗಳು ಭಗವಾನ್ ರಾಮನ ಬಗ್ಗೆ ಟಿಎಂಸಿ ನಾಯಕತ್ವ ಹೊಂದಿರುವ ಗೌರವವನ್ನು ತೋರಿಸುತ್ತದೆ’ ಎಂದು ಟೀಕಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ