ಗಣಿಗಾರಿಕೆ ನಡೆಸುವ ಪ್ರದೇಶಗಳಲ್ಲಿ ಭೂಮಿ ತೋಡುವ ಕಾರ್ಮಿಕರನ್ನು ನೀವು ನೋಡಿರಬಹುದು. ನೀಲಿ ಬಟ್ಟೆಗಳನ್ನು ಧರಿಸಿ ತಲೆ ಮೇಲೆ ಹೆಲ್ಮೆಟ್ ಹಾಕಿಕೊಂಡು ಸದಾ ತಮ್ಮ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರಿವರು.
ಅಂದರೆ ಕಚ್ಚಾ ಉಕ್ಕು ಹಾಗೂ ಕಬ್ಬಿಣದ ಅದಿರುಗಳನ್ನು ತೋಡುವುದು. ಗುಡ್ಡೆ ಮಾಡಿದ ಅದಿರನ್ನು ಹೊತ್ತುಕೊಂಡು ಬೇರೆಡೆ ಸಾಗಿಸುವುದು. ಅಷ್ಟೇ ಅಲ್ಲ ಸುಡುವ ಕುಲುಮೆಗಳ ಬಳಿ ನಿಂತು ಕಾರ್ಮಿಕರಂತೆಯೇ ಮತ್ತೊಬ್ಬ ಕಾರ್ಮಿಕನ ರೀತಿ ಅದಿರು ಸಂಸ್ಕರಣೆ ಕೆಲಸ ಮಾಡಿದ್ದರು ರತನ್ ಟಾಟಾ. ಕೋಟಿಕೋಟಿ ಲೆಕ್ಕದಲ್ಲಿ ಬಂಡವಾಳ ಹೂಡಿ ಉದ್ದಿಮೆ ನಡೆಸುತ್ತಿರುವ ಮಾಲೀಕರ ಮಗ ತಮ್ಮದೇ ಕಂಪೆನಿಯಲ್ಲಿ ಮೊದಲಿಗೆ ಕಾರ್ಮಿಕರಂತೆ ದುಡಿದಿದ್ದರು ಎಂದರೆ ಅಂದರೆ ಎಂಥವರಿಗೂ ನಂಬುವುದಕ್ಕೆ ಕಷ್ಟ. ಆದರೆ ಇದು ನಿಜ.