5 ಲಕ್ಷ ಕೋಟಿ ಸಾಲದಲ್ಲಿ ಕೇರಳ : ಆರ್ಥಿಕ ಪರಿಸ್ಥಿತಿ ಬಲು ಗಂಭೀರ

KannadaprabhaNewsNetwork |  
Published : Jun 05, 2026, 03:15 AM IST
Kerala

ಸಾರಾಂಶ

ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್‌ ವಿಧಾನಸಭೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತ ಶ್ವೇತಪತ್ರ ಮಂಡಿಸಿದ್ದಾರೆ. ಅದರಲ್ಲಿ ರಾಜ್ಯ 5 ಲಕ್ಷ ಕೋಟಿ ರು. ಸಾಲದಲ್ಲಿದ್ದು, ಒಟ್ಟಾರೆ ಆದಾಯದಲ್ಲಿ ಶೇ.30ರಷ್ಟು ವೇತನ ಪಾವತಿಗೆ, ಶೇ.20.9ರಷ್ಟು ಸಾಲದ ಬಡ್ಡಿಗೆ ವ್ಯಯವಾಗುತ್ತಿದೆ ಎಂಬ ಗಂಭೀರ ಅಂಕಿ ಅಂಶಗಳಿವೆ

 ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್‌ ವಿಧಾನಸಭೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತ ಶ್ವೇತಪತ್ರ ಮಂಡಿಸಿದ್ದಾರೆ. ಅದರಲ್ಲಿ ರಾಜ್ಯ 5 ಲಕ್ಷ ಕೋಟಿ ರು. ಸಾಲದಲ್ಲಿದ್ದು, ಒಟ್ಟಾರೆ ಆದಾಯದಲ್ಲಿ ಶೇ.30ರಷ್ಟು ವೇತನ ಪಾವತಿಗೆ, ಶೇ.20.9ರಷ್ಟು ಸಾಲದ ಬಡ್ಡಿಗೆ ವ್ಯಯವಾಗುತ್ತಿದೆ ಎಂಬ ಗಂಭೀರ ಅಂಕಿ ಅಂಶಗಳಿವೆ

ರಾಜ್ಯದ ಬಾಹ್ಯ ಸಾಲ 5.07 ಲಕ್ಷ ಕೋಟಿ ರು

ವರದಿ ಅನ್ವಯ, ರಾಜ್ಯದ ಬಾಹ್ಯ ಸಾಲ 5.07 ಲಕ್ಷ ಕೋಟಿ ರು.ನಷ್ಟಿದೆ. ಇದು ರಾಜ್ಯದ ಒಟ್ಟು ಸಮಗ್ರ ಉತ್ಪನ್ನದ ಶೇ.35ರಷ್ಟಿದೆ (ರಾಷ್ಟ್ರೀಯ ಸರಾಸರಿ ಶೇ.29). ರಾಜ್ಯದ ಒಟ್ಟು ಆದಾಯದಲ್ಲಿ ಶೇ.77ರಷ್ಟು ಹಣ ಕಡ್ಡಾಯವಾಗಿ ಮಾಡಲೇಬೇಕಾದ ಖರ್ಚುವೆಚ್ಚಗಳಿಗೆ (ರಾಷ್ಟ್ರೀಯ ಸರಾಸರಿ ಶೇ.46) ಹೋಗುತ್ತಿದೆ.  

ಉಳಿಯುವುದು ಶೇ.23ರಷ್ಟು ಹಣ ಮಾತ್ರ.

ಹೀಗಾಗಿ ಒಟ್ಟು ಆದಾಯದಲ್ಲಿ ಅಭಿವೃದ್ಧಿ, ಮೂಲಸೌಕರ್ಯ, ಕಲ್ಯಾಣ ಯೋಜನೆಗೆ ಉಳಿಯುವುದು ಶೇ.23ರಷ್ಟು ಹಣ ಮಾತ್ರ. ಜೊತೆಗೆ ರಾಜ್ಯದ ಒಟ್ಟು ಬಂಡವಾಳ ವೆಚ್ಚವು ರಾಜ್ಯದ ಒಟ್ಟು ಆದಾಯದಲ್ಲಿ ಕೇವಲ ಶೇ.1.3ರಷ್ಟು ಮಾತ್ರವೇ ಇದೆ. ಇದು ದೇಶದಲ್ಲೇ ಅತ್ಯಂತ ಕಡಿಮೆ ಎಂದು ವರದಿ ಹೇಳಿದೆ.ಸರ್ಕಾರದ ಈ ಆರ್ಥಿಕ ಪರಿಸ್ಥಿತಿಯು, ಚುನಾವಣೆ ವೇಳೆ ಕರ್ನಾಟಕದ ಮಾದರಿ ಹಲವು ಉಚಿತ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಕೇರಳದ ಕಾಂಗ್ರೆಸ್‌ ಸರ್ಕಾರಕ್ಕೆ ದೊಡ್ಡ ಸವಾಲಾಗುವ ನಿರೀಕ್ಷೆ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸೋಲಾರ್‌ ಸಾಮರ್ಥ್ಯ ವೃದ್ಧಿಯಲ್ಲಿಅಮೆರಿಕ ಹಿಂದಿಕ್ಕಿದ ಭಾರತ ನಂ.2
₹15 ಲಕ್ಷ ಕೋಟಿ ಇಲ್ಲದ ಆದಾಯತೋರಿಸಿದ ರಾಜೇಶ್‌ ಎಕ್ಸ್‌ಪೋರ್ಟ್‌