ಬಿಜೆಪಿ ರಾಜಕೀಯ ವೇಶ್ಯಾಗೃಹ ನಡೆಸುತ್ತಿದೆ: ಸಂಸದ ರಾವುತ್‌ ಕೀಳು ಹೇಳಿಕೆ

KannadaprabhaNewsNetwork |  
Published : Feb 19, 2024, 01:32 AM IST
ಸಂಜಯ್‌ ರಾವುತ್‌ | Kannada Prabha

ಸಾರಾಂಶ

ತನಗೆ ಸಂಪೂರ್ಣ ಬಹುಮತದ ಕಾರಣ ಬಿಜೆಪಿಯು ರಾಜಕೀಯ ವೇಶ್ಯಾಗೃಹ ಪ್ರಾರಂಭಿಸಿ ಇತರ ಪಕ್ಷದವರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ ಎಂದು ಸಂಜಯ್‌ ರಾವುತ್‌ ತಮ್ಮ ಅಂಕಣದಲ್ಲಿ ಟೀಕಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕರ ಬಿಜೆಪಿ ವಲಸೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಸಂಸದ ಸಂಜಯ್‌ ರಾವುತ್‌, ರಾಜ್ಯದಲ್ಲಿ ಬಿಜೆಪಿ ರಾಜಕೀಯ ವೇಶ್ಯಾಗೃಹ ನಡೆಸುತ್ತಿದೆ ಎಂಬ ಕೀಳು ಹೇಳಿಕೆ ನೀಡಿದ್ದಾರೆ.

ಆರ್‌ಎಸ್‌ಎಸ್‌ನ ಸಮೀಕ್ಷೆ ಅನ್ವಯ ಬಿಜೆಪಿ ಈ ಬಾರಿ ದೇಶಾದ್ಯಂತ ಕೇವಲ 190 ಸ್ಥಾನ ಗೆಲ್ಲಲಿದೆ.

ಹೀಗಾಗಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಬೇರೆ ಬೇರೆ ಪಕ್ಷಗಳ ನಾಯಕರನ್ನು ತನ್ನತ್ತ ಸೆಳೆಯುವ ಮೂಲಕ ರಾಜಕೀಯ ವೇಶ್ಯಾಗೃಹ ಆರಂಭಿಸಿದೆ ಎಂದು ಪಕ್ಷದ ಮುಖವಾಣಿ ಸಾಮ್ನಾದ ‘ರೋಕ್‌ತೋಕ್‌’ ಅಂಕಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇ.ಡಿ.ರೇಡ್‌ ಖಂಡಿಸಿ ದೀದಿ, ಟಿಎಂಸಿ ಸಂಸದರು ಬೀದಿಗೆ
ಶಬರಿಮಲೆ ಚಿನ್ನಕ್ಕೆ ಕನ್ನ: ಪ್ರಧಾನ ಅರ್ಚಕ ಸೆರೆ