ಮಂಜಿನ ಮುಸುಕು ಹೊದ್ದ ಉತ್ತರ ಭಾರತ

KannadaprabhaNewsNetwork |  
Published : Jan 16, 2024, 01:51 AM ISTUpdated : Jan 16, 2024, 01:36 PM IST
ಚಳಿ | Kannada Prabha

ಸಾರಾಂಶ

ಉತ್ತರ ಭಾರತದ ಹಲವೆಡೆ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಅದರಲ್ಲೂ ಪಂಜಾಬ್‌ ಮತ್ತು ಹರ್ಯಾಣದಲ್ಲಿ ಶೂನ್ಯದ ಆಸುಪಾಸಿಗೆ ಉಷ್ಣಾಂಶ ಇಳಿದಿದೆ. ಅಲ್ಲದೆ ಶ್ರೀನಗರದಲ್ಲಿ - 4.3 ಡಿಗ್ರಿ, ದಿಲ್ಲೀಲಿ 3.9 ಡಿಗ್ರಿ ತಾಪ ದಾಖಲಾಗಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರ ಚಳಿ, ಶೀತಗಾಳಿ ಮುಂದುವರೆದಿದ್ದು ದೆಹಲಿಯಲ್ಲಿ ಸೋಮವಾರ ತಾಪಮಾನ 3.9 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. 

ಇದೇ ವೇಳೆ ಮತ್ತೆ ದೆಹಲಿಯ ಗಾಳಿಯ ಗುಣಮಟ್ಟ ಕುಸಿಯುತ್ತಿದ್ದು ವಾಯುಗುಣಮಟ್ಟ ಸೂಚ್ಯಂಕ 359ರಷ್ಟು ದಾಖಲಾಗಿದೆ. ಈ ನಡುವೆ ದಟ್ಟ ಮಂಜಿನಿಂದ ಗೋಚರತೆ ಪ್ರಮಾಣವು ಕುಸಿದಿದೆ.

ಇನ್ನು ಜಮ್ಮು ಕಾಶ್ಮೀರದಲ್ಲಿ ಹಲವು ಕಡೆ ತಾಪಮಾನ ಶೂನ್ಯಕ್ಕಿಂತ ಕೆಳಕ್ಕಿಳಿದಿದ್ದು, ಶ್ರೀನಗರದಲ್ಲಿ - 4.3 ಮತ್ತು ಪಹಲ್ಗಾಂನಲ್ಲಿ -5.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಇನ್ನು ಚಂಡೀಗಢದಲ್ಲೂ ತಾಪಮಾನ 0.2ರಷ್ಟು ದಾಖಲಾಗಿದೆ. 

ಅಲ್ಲದೆ ಪಂಜಾಬ್‌ನ ಲುಧಿಯಾನಾದಲ್ಲಿ 1 ಡಿಗ್ರಿ ಸೆಲ್ಸಿಯಸ್‌ ಮತ್ತು ಹರ್‍ಯಾಣದಲ್ಲಿ ಈ ಚಳಿಗಾಲದ ಕನಿಷ್ಠ 1.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ರಾಜಸ್ಥಾನದ ಸಿಕಾರ್‌ನಲ್ಲಿ 0.9 ಡಿಗ್ರಿ ಮತ್ತು ಜಾರ್ಖಂಡ್‌ನ ಛಾತ್ರಾದಲ್ಲಿ 1.2 (ರಾಜ್ಯದ ಕನಿಷ್ಠ) ಡಿಗ್ರಿ ತಾಪಮಾನ ದಾಖಲಾಗಿದೆ. ಇನ್ನು ಮಂಗಳವಾರವೂ ಇದೇ ರೀತಿ ತಾಪಮಾನ ಮುಂದುವರೆಯುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶಬರಿಮಲೆ ಚಿನ್ನಕ್ಕೆ ಕನ್ನ: ದೇವಸ್ವಂ ಮಾಜಿ ಸದಸ್ಯ ಸೆರೆ
ಷೇರಿಗಿಂತ ಚಿನ್ನ ಬೆಳ್ಳಿ ಹೂಡಿಕೆಯೇ ಹೆಚ್ಚು ಲಾಭ