ಅಕ್ರಮವೆಸಗಿದರೆ ಆತ್ಮಹತ್ಯೆ: ರಕ್ತದಲ್ಲಿ ಮುಚ್ಚಳಿಕೆ ಬರೆದ ಬ್ಯಾಂಕ್‌ ಸಿಬ್ಬಂದಿ!

KannadaprabhaNewsNetwork |  
Published : Nov 27, 2024, 01:04 AM IST
ಜಪಾನ್‌ | Kannada Prabha

ಸಾರಾಂಶ

ಹಣಕಾಸು ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಜಪಾನ್‌ನ ಶಿಕೋಕು ಬ್ಯಾಂಕ್‌ ವಿಚಿತ್ರ ಹಾಗೂ ವಿಭಿನ್ನ ಕ್ರಮಕ್ಕೆ ಮುಂದಾಗಿದೆ.

ಟೋಕಿಯೋ: ಹಣಕಾಸು ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಜಪಾನ್‌ನ ಶಿಕೋಕು ಬ್ಯಾಂಕ್‌ ವಿಚಿತ್ರ ಹಾಗೂ ವಿಭಿನ್ನ ಕ್ರಮಕ್ಕೆ ಮುಂದಾಗಿದೆ. ಇದರ ಪ್ರಕಾರ ಬ್ಯಾಂಕಿನ ಎಲ್ಲಾ ಉದ್ಯೋಗಿಗಳಿಂದ, ‘ಅಕ್ರಮದಲ್ಲಿ ತೊಡಗಿದರೆ ಆ ಮೊತ್ತವನ್ನು ಕೈಯ್ಯಾರೆ ಭರಿಸಿ ನಂತರ ಆತ್ಮಹತ್ಯೆಗೆ ಶರಣಾಗುತ್ತೇವೆ’ ಎಂಬ ಪ್ರತಿಜ್ಞೆಗೆ ರಕ್ತದಲ್ಲಿ ಸಹಿ ಮಾಡಿಸಿಕೊಳ್ಳಲಾಗಿದೆ. ಈ ಪ್ರತಿಜ್ಞೆಯ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರ ಗಮನ ಸೆಳೆಯುತ್ತಿದೆ.

ಈಗಾಗಲೇ ಶಿಕೋಕು ಬ್ಯಾಂಕ್‌ನ ಪೂರ್ವವರ್ತಿಯಾದ ಥರ್ಟಿ- ಸವೆಂತ್‌ ನ್ಯಾಷನಲ್‌ ಬ್ಯಾಂಕ್‌ನ ಅಧ್ಯಕ್ಷ ಮಿಯುರಾ ಸೇರಿದಂತೆ ಸೇರಿದಂತೆ ಎಲ್ಲಾ 23 ಉದ್ಯೋಗಿಗಳು ಈ ಪ್ರತಿಜ್ಞೆಗೆ ಸಹಿ ಮಾಡಿರುವುದಾಗಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ ಮಾಹಿತಿ ನೀಡಿದೆ. ಜೊತೆಗೆ, ‘ಬ್ಯಾಂಕ್‌ ಉದ್ಯೋಗಿಯಾಗಿ ಮಾತ್ರವಲ್ಲದೆ ಸಮಾಜದಲ್ಲಿ ಒಬ್ಬರಾಗಿರುವ ನಮ್ಮ ನೈತಿಕತೆ ಮತ್ತು ಜವಾಬ್ದಾರಿಯನ್ನು ಇದು ಪ್ರತಿಬಿಂಬಿಸುತ್ತದೆ. ಅಂತೆಯೇ, ಇದನ್ನು ಶಿಕೋಕು ಬ್ಯಾಂಕ್‌ನ ಆಸ್ತಿಯಂತೆ ಮುಂದುವರೆಸಿಕೊಂಡು ಹೋಗಲಾಗುತ್ತದೆ’ ತಿಳಿಸಲಾಗಿದೆ.

ಬ್ಯಾಂಕ್‌ನ ಈ ನಿರ್ಧಾರದಿಂದ ಜನ ಬೆರಗಾಗಿದ್ದು, ಇದರಿಂದಲೇ ಆ ಬ್ಯಾಂಕ್‌ನಲ್ಲಿ ಅಷ್ಟೊಂದು ಹಣ ಇಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ
ಭಾರತಕ್ಕೆ ಬೇಕಿದ್ದ ಪಾಕ್‌ ಉಗ್ರ ಅನಾಮಿಕ ವ್ಯಕ್ತಿ ಗುಂಡಿಗೆ ಬಲಿ