ಕಾಂಬೋಡಿಯ-ಥಾಯ್‌ ಕದನ ವಿರಾ​ಮಕ್ಕೆ ಒಪ್ಪಿ​ಗೆ

KannadaprabhaNewsNetwork |  
Published : Jul 26, 2025, 12:00 AM ISTUpdated : Jul 26, 2025, 05:03 AM IST
ಕಾಂಬೋಡಿಯ | Kannada Prabha

ಸಾರಾಂಶ

ಗಡಿಯಲ್ಲಿರುವ ಹಿಂದೂ ಶಿವ ದೇವ​ಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಆರಂಭವಾಗಿದ್ದ ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ಸಮ​ರ​ಕ್ಕೆ 2ನೇ ದಿನ​ವಾದ ಶುಕ್ರ​ವಾರ ಬ್ರೇಕ್‌ ಬಿದ್ದಿದ್ದು, ಕದನ ವಿರಾ​ಮಕ್ಕೆ ಉಭಯ ದೇಶ​ಗಳು ಸಮ್ಮ​ತಿ​ಸಿವೆ.

 ಸುರಿನ್‌: ಗಡಿಯಲ್ಲಿರುವ ಹಿಂದೂ ಶಿವ ದೇವ​ಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಆರಂಭವಾಗಿದ್ದ ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ಸಮ​ರ​ಕ್ಕೆ 2ನೇ ದಿನ​ವಾದ ಶುಕ್ರ​ವಾರ ಬ್ರೇಕ್‌ ಬಿದ್ದಿದ್ದು, ಕದನ ವಿರಾ​ಮಕ್ಕೆ ಉಭಯ ದೇಶ​ಗಳು ಸಮ್ಮ​ತಿ​ಸಿವೆ.

ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾ​ಹಿಂ ಅವರು ಕಾಂಬೋ​ಡಿಯಾ ಪ್ರಧಾನಿ ಹುನ್‌ ಮಾನೆಟ್‌ ಹಾಗೂ ಥಾಯ್ಲೆಂಡ್‌ ಪ್ರಧಾನಿ ವೆಚಾ​ಯಾಯೈ ಜತೆ ಫೋನ್‌ ಮಾತು​ಕತೆ ನಡೆ​ಸಿ​ದರು. ಬಳಿಕ ಉಭಯ ದೇಶ​ಗಳು ಕದ​ನಕ್ಕೆ ಸಮ್ಮ​ತಿ​ಸಿ​ದರು. 

ಈ ವಿಷ​ಯ​ವನ್ನು ಖುದ್ದು ಇಬ್ರಾಹಿಂ ಬಹಿ​ರಂಗ​ಪ​ಡಿ​ಸಿ​ದ್ದಾರೆ. ಆದರೆ ನಮಗೆ ಸಮರ ನಿಲ್ಲಿ​ಸಲು ಸಮ್ಮತಿ ಇದೆ. ಕಾಂಬೋ​ಡಿಯಾ ಕೂಡ ಕದ​ನ​ವಿ​ರಾ​ಮಕ್ಕೆ ಬದ್ಧತೆ ವ್ಯಕ್ತ​ಪ​ಡಿ​ಸ​ಬೇಕು ಎಂದು ಥಾಯ್ಲೆಂಡ್‌ ಸ್ಪಷ್ಟ​ಪ​ಡಿ​ಸಿ​ದೆ.

ಸೇನಾ ಕಾನೂ​ನು: ಇದಕ್ಕೂ ಮುನ್ನ ಥಾಯ್ಲೆಂಡ್‌ನ ಈಶಾನ್ಯ ಗಡಿಯ 8 ಜಿಲ್ಲೆ​ಗಳಲ್ಲಿ ಸಮರ ಕಾನೂನು ಘೋಷಿಸಲಾಗಿತ್ತು. ಇದರರ್ಥ, ಥಾಯ್‌ ಸರ್ಕಾರವು ಸೇನೆಗೆ ಕಾಂಬೋಡಿಯಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರ ನೀಡಿತ್ತು.16 ಸಾವು: ಇದರ ನಡುವೆ, ಗಡಿಭಾಗದ ಎರಡೂ ದೇಶಗಳ 1.38 ಲಕ್ಷ ಜನ ಗುಳೆ ಹೋಗಿದ್ದಾರೆ. ಸಮರದಲ್ಲಿ ಎರಡೂ ದೇಶಗಳ ಒಟ್ಟಾರೆ ಮೃತರ ಸಂಖ್ಯೆ 16ಕ್ಕೇರಿದೆ. ಇದ​ರಲ್ಲಿ ಕಾಂಬೋ​ಡಿ​ಯಾದ ನಾಲ್ವರು ಥಾಯ್ಲೆಂಡ್‌ನ 14 ಜನರು ಇದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ