ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ತಾಪಂ ಆವರಣದಲ್ಲಿ ಜಿಪಂ, ತಾಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಯ ಇಲಾಖೆ ಹಾಗೂ ರಾಜ್ಯ ಗ್ರಾಮೀಣ ಬಲವರ್ಧನೆ ಸಂಸ್ಥೆ ಸಹಯೋಗದಲ್ಲಿ ನಿರ್ಮಿಸಿದ್ದ ಕಾರ್ಯಕ್ರಮದಲ್ಲಿ ‘ಅಕ್ಕಕೆಫೆ’ಯನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳಾ ಸಬಲೀಕರಣದ ಭಾಗವಾಗಿ ಪಟ್ಟಣದಲ್ಲಿ ನೂತನವಾಗಿ ‘ಅಕ್ಕಕೆಫೆ’ ಆರಂಭಿಸಲಾಗಿದೆ. ಶಂಭೂನಹಳ್ಳಿ ಸ್ವಸಹಾಯ ಸಂಘದ ಗುಂಪಿನ 6 ಮಂದಿ ಮಹಿಳಾ ಸದಸ್ಯರು ಇದರ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಇಂತಹ ‘ಅಕ್ಕಕೆಫೆ’ಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.
ಮಹಿಳಾ ಸಬಲೀಕರಣ ಮಾಡಬೇಕು ಎಂಬ ಉದ್ದೇಶದಿಂದ ‘ಅಕ್ಕಕೆಫೆ’ ನಿರ್ಮಾಣ ಮಾಡಲಾಗಿದೆ. ಹಾಗೆಯೇ ನಮ್ಮ ಹಳ್ಳಿಹಳ್ಳಿಗಳಲ್ಲೂ ಸಹ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಾವು ಬೆಳೆಯುವ ಬೆಳೆಗಳನ್ನು ಹೇಗೆ ಸ್ಥಳೀಯವಾಗಿ ಉಪಯೋಗಿಸಿಕೊಂಡು ಬಳಿಕ ಮಾರುಕಟ್ಟೆಗೆ ತರುವ ಬಗ್ಗೆ ಚಿಂತನೆ ಮಾಡಬೇಕು ಎಂದರು.ಪಾಂಡವಪುರ ಸಾವಯವ ತಾಲೂಕು ಎಂಬುದಾಗಿ ಘೋಷಣೆಯಾಗಿದೆ. ರಾಸಾಯನಿಕ ಕೃಷಿಯಿಂದ ತಿನ್ನುವ ಆಹಾರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ ಎಲ್ಲರು ಸಾವಯವ ಕೃಷಿಯ ಕಡೆಗೆ ಮುಂದಾಗಬೇಕು ಎಂದರು.
ಮಂಡ್ಯ ಜಿಲ್ಲೆಯಲ್ಲಿ ‘ಅಕ್ಕನ ಮನೆ ಮೀನೂಟ’ ಎಂಬ ಕಾರ್ಯಕ್ರಮ ಆರಂಭಿಸಿ ಯಶಸ್ಸು ಕಂಡಿದ್ದೇವೆ. ಜಿಲ್ಲೆಗೆ ಬರೋಬ್ಬರು 12 ‘ಅಕ್ಕನ ಮನೆ ಮೀನೂಟ’ ಕ್ಯಾಂಟಿನ್ಗಳನ್ನು ಇಲಾಖೆ ಕಾರ್ಯುದರ್ಶಿಗಳು ಮಂಜೂರು ಮಾಡಿಕೊಟ್ಟಿದ್ದರು ಅಷ್ಟು ಸಂಖ್ಯೆಯಲ್ಲಿ ಮಂಜೂರಾದ ಏಕೈಕ ಜಿಲ್ಲೆಯಾಗಿತ್ತು. ಇದೀಗ ‘ಅಕ್ಕಕೆಫೆ’ ಆರಂಭಿಸಲಾಗಿದೆ ಎಂದರು.
ಶೀಘ್ರವೇ ಉಳಿದ ಎರಡು ತಾಲೂಕುಗಳಲ್ಲೂ ಚಾಲನೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ತಾಲೂಕುಗಳಲ್ಲೂ ‘ಅಕ್ಕಕೆಫೆ’ ಆರಂಭಿಸಲಾಗುವುದು, ಅಧಿಕಾರಿಗಳು ಸರ್ಕಾರ ಮಾರ್ಗಸೂಚಿಯ ಅನುಸಾರ ಪಾಲನೆ ಮಾಡಿದ್ದಾರೆ ಹಾಗಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ವೇಳೆ ತಾಪಂ ವೀಣಾ, ಜಿಪಂ ಯೋಜನಾ ನಿರ್ದೇಶಕ ಸುಂದರ್ ರಾಜ್, ಕೆಆರ್ಐಡಿಎಲ್ ಕಾರ್ಯಹಪಾಲಕ ಅಭಿಯಂತರ ಕೆ.ಸೋಮಶೇಖರ್, ಎಇಇ ಚೈತ್ರ, ಟಿಎಚ್ಒ ಡಾ.ಸಿ.ಎ.ಅರವಿಂದ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರು ಹಾಜರಿದ್ದರು.