ಕನ್ನಡಪ್ರಭ ವಾರ್ತೆ ಯರಗಟ್ಟಿ
ಶ್ರೀಬನಶಂಕರಿ ಸಾವಯವ ಕೃಷಿ ಸಂಶೋಧನೆ ಮತ್ತು ಗೋವು ಸಂವರ್ಧನೆ ಕೇಂದ್ರ ಮುಖ್ಯಸ್ಥ ಶಿವಾನಂದ ದೇಸಾಯಿ ಮಾತನಾಡಿ, ಈಚೆಗೆ ದಿನಗಳಲ್ಲಿ ಶಿಕ್ಷಣ ಕೇಂದ್ರಗಳು ವ್ಯಾಪಾರೀಕರಣವಾಗಿದೆ. ಕೆಲವೇ ಕೆಲವು ಸಂಸ್ಥೆಗಳಲ್ಲಿ ಗುಣಮಟ್ಟ ಹಾಗೂ ನೈತಿಕ ಮೌಲ್ಯಗಳ ಶಿಕ್ಷಣ ಸಿಗುತ್ತಿದೆ. ವಿದ್ಯಾರ್ಥಿಗಳು ಮೋಬೈಲ್ನಿಂದ ಅಂತರ ಕಾಯ್ದು ಕೊಂಡು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ಮುಖ್ಯಶಿಕ್ಷಕ ಬಸನಗೌಡ ಅಣ್ಣಿಗೇರಿ ಮಾತನಾಡಿ, ಮಕ್ಕಳಿಗೆ ಶಿಕ್ಷಕರು ಮೊದಲು ಗುರುವಾದರೆ ಪೋಷಕರು 2ನೇ ಗುರುವಾಗಿ ಅವರನ್ನು ತಿದ್ದುವ ಕೆಲಸ ಮಾಡಿದಾಗ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.ವೇಂಕಟೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಲಕ್ಷ್ಮಿ ಎಲ್ ಕಳ್ಳಿಗುದ್ದಿ ಅಧ್ಯಕ್ಷತೆ ವಹಿಸಿದ್ದರು, ಯರಗಟ್ಟಿ ಜಿಪಂ ಮಾಜಿ ಸದಸ್ಯ ಅಜೀತಕುಮಾರ ದೇಸಾಯಿ, ಸವದತ್ತಿ ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಶಿವು ನಂದಗಾನ, ವಸುದಾ ದೇಸಾಯಿ, ಕಮಲಾಕ್ಷಿದೇವಿ ದೇಸಾಯಿ, ಸುಶಿಲಾ ಕಳ್ಳಿಗುದ್ದಿ, ಕಾಂತು ಕಳ್ಳಿಗುದ್ದಿ, ಶಿಕ್ಷಕಿ ಸವಿತಾ ದೆವರೆಡ್ಡಿ, ಲಕ್ಷ್ಮಿ ಗುನಕಿ, ಕಮಲಾ ಕಳಗಿಮಠ, ಪ್ರೀಯಾಂಕಾ ರಾಯರ, ರುದ್ರಪ್ಪ ಗಸ್ತಿ, ಕೃಷ್ಣಾಜಿ ಇಂಗಳೆ, ರೂಪಾ ಕತ್ತಿ, ಶಿಲ್ಪಾ ಪತ್ತಾರ, ಶ್ರದ್ಧಾ ಬಾಳಿ, ನಿಲೋಪರ್ ತೊಟಗಿ, ಸುಮೇಶಾಲ, ಅಡ್ಲಿನ್ ಲಿಯೋನಡಾದ, ಈರಮ್ಮ ಬಾಳಿಕಾಯಿ, ಸಕ್ಕೂಬಾಯಿ ದಾಸರ ಸೇರಿದಂತೆ ವಿದ್ಯಾರ್ಥಿಗಳು ಸಿಬ್ಬಂದಿ ಇದ್ದರು.