ಕನ್ನಡಪ್ರಭ ವಾರ್ತೆ ಅಥಣಿ
ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಅಡಿಗಲ್ಲು ಸಮಾರಂಭದ ಪೂರ್ವಭಾವಿ ಸಭೆ ತಾಲೂಕಿನ ಕೊಟ್ಟಲಗಿ ಭಾಗದಲ್ಲಿ ಕಾಂಗ್ರೆಸ್ ಮುಖಂಡರಿಂದ ಜರುಗಿತು. ಈ ವೇಳೆ ಮಾತನಾಡಿದ ಅವರು, ಚುನಾವಣೆಯಲ್ಲಿ ಈ ಭಾಗದ ರೈತರಿಗೆ ನೀರಾವರಿ ಕಲ್ಪಿಸುವ ಭರವಸೆ ಮೇಲೆ ಆಯ್ಕೆಯಾಗಿ 5 ವರ್ಷ ಕಾಲಹರಣ ಮಾಡಿದಿರಿ. ಆದರೆ, ಕಳೆದ ಚುನಾವಣೆಯಲ್ಲಿ ನೀರಾವರಿ ಯೋಜನೆ ಘೋಷಣೆಯ ನಾಟಕ ಮಾಡಿದಕ್ಕಾಗಿ ಜನರು ನಿಮ್ಮನ್ನು ಸೋಲಿಸಿ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಂದ ನಿಗದಿಯಾಗುವ ದಿನಾಂಕದಂದು ಕೊಟ್ಟಲಗಿ ಗ್ರಾಮದಲ್ಲಿ ಚಾಲನೆ ದೊರೆಯಲಿರುವ ಅಮ್ಮಾಜೇಶ್ವರಿ ನೀರಾವರಿ ಯೋಜನೆಗೆ ಅಡಿಗಲ್ಲು ಕಾರ್ಯಕ್ರಮ ವಿಜೃಂಭಣೆಯಿಂದ ಮಾಡೋಣ. ಈ ಹಿಂದೆ ಅದೆಷ್ಟೋ ಜನ ಅಥಣಿ ಪೂರ್ವಭಾಗದ ನೀರಾವರಿಗಾಗಿ ಭೂಮಿ ಪೂಜೆಯ ನಾಟಕವಾಡಿದ್ದನ್ನು ನೋಡಿದ್ದೇವೆ. ನಾನೇ ಮಾಡಿದ್ದು ಅಂತ ಹೇಳಿಕೊಳ್ಳುವರರನ್ನು ಈಗಲೂ ನೋಡುತ್ತಲೇ ಇದ್ದೇವೆ. ಆದರೆ, ಸರ್ಕಾರದ ಮಟ್ಟದಲ್ಲಿ ಹೋರಾಡಿ ಅನುದಾನ ಬಿಡುಗಡೆಗೊಳಿಸಿ ಕರಿಮಸೂತಿ ನೀರಾವರಿ ಪೂರ್ಣಗೊಳಿಸಲು ಲಕ್ಷ್ಮಣ ಸವದಿಯವರೇ ಬರಬೇಕಾಯಿತು ಎಂದರು.ಕಾಂಗ್ರೆಸ್ ಯುವ ಮುಖಂಡ ಶಿವು ಗುಡ್ಡಾಪೂರ ಮಾತನಾಡಿ, ಅಂದು ಮಹೇಶ ಕುಮಟಳ್ಳಿ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ರಮೇಶ ಜಾರಕಿಹೊಳಿ ಸಚಿವರಾಗಿದ್ದರು. ಅಂದು ಸಿದ್ದರಾಮಯ್ಯವರು ಮುಖ್ಯಮಂತ್ರಿಗಳಾಗಿದ್ದಾಗ ಈ ಭಾಗಕ್ಕೆ ಕೆರೆ ತುಂಬುವ ಯೋಜನೆ ಮಂಜೂರಾಗಿತ್ತು. ಈ ವೇಳೆ ಲಕ್ಷ್ಮಣ ಸವದಿ ಬಿಜೆಪಿ ಶಾಸಕರಾಗಿದ್ದರು. ಕೆರೆ ತುಂಬುವ ಯೋಜನೆ ಅಡಿಗಲ್ಲು ಸಮಾರಂಭ ಮಾಡಿದರೆ ಇದರ ಲಾಭ ಸವದಿ ಅವರಿಗೆ ಸಲ್ಲುತ್ತದೆ ಎಂದು ಭಾವಿಸಿ ಸಮಾರಂಭ ಮಾಡಲೇ ಇಲ್ಲ. ಇದಕ್ಕೆ ಅಡ್ಡಿ ಮಾಡಿದ್ದು ಮಹೇಶ ಕುಮಟಳ್ಳಿ. ಇದು ಸುಳ್ಳು ಅಂತಾದರೆ ಅಥಣಿ ಸಿದ್ದೇಶ್ವರ ದೇವಸ್ಥಾನ ಏರೋಣ ಬನ್ನಿ, ತಾಕತ್ತಿದ್ದರೆ ನಮ್ಮ ಸವಾಲಿಗೆ ಉತ್ತರಕೊಡಿ ಎಂದು ಸವಾಲು ಹಾಕಿದರು.
ಸಭೆಯಲ್ಲಿ ಕೊಟ್ಟಲಗಿ ಗ್ರಾಮದ ಸುತ್ತ ಮುತ್ತಲಿನ ಜನರು ಹಾಜರಿದ್ದರು.ಈ ತಿಂಗಳಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಅಡಿಗಲ್ಲು ಸಮಾರಂಭದ ಪೂರ್ವತಯಾರಿಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
----------ಕೋಟ್
- ಅಮೋಘ ಖೊಬ್ರಿ. ಕಾಂಗ್ರೆಸ್ ಮುಖಂಡ ಅಥಣಿ.