ಎಲ್.ಎಸ್. ಶ್ರೀಕಾಂತ್ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಮಹೋತ್ಸವದ ಉದ್ಘಾಟನೆ ದಿನದಂದು ವನರಂಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಈ ಉತ್ಸವಕ್ಕೆ ಚಾಲನೆ ನೀಡಿದರು.
ನಂತರ ನಡೆದ ರಂಗ ಉತ್ಸವದಲ್ಲಿ ರಾಜ್ಯ ವಿವಿಧ ಜಿಲ್ಲೆಗಳ ಕಲಾವಿದರು ತಮ್ಮ ವಿಶಿಷ್ಟ ಕಲೆಗಳನ್ನು ಪ್ರದರ್ಶಿಸಿ, ರಂಗಾಸಕ್ತರಿಂದ ಚಪ್ಪಾಳೆ ಗಿಟ್ಟಿಸಿದರು.ಮೈಸೂರು ಗುರುರಾಜ್ ಮತ್ತು ತಂಡ ಮಂಟೇಸ್ವಾಮಿ ಕಾವ್ಯ, ಬಳ್ಳಾರಿಯ ಸಂಗನಕಲ್ಲು ಸಂಕಮೇಶ್ವರ ನಾಟಕ ಮಂಡಳಿಯ ರೇಣುಕಾ ಮಹಾತ್ಮೆ ಬಯಲಾಟ, ಹಾಸನ ಜಿಲ್ಲೆಯ ಹೂವಿನಹಳ್ಳಿ ಕಾವಲಿನ ಮಾಯಾವಿ ಇಂದ್ರಜಿತ್ ಅವರಿಂದ ಶ್ರೀ ರಾಜಾರಾಮ ತೊಗಲುಗೊಂಬೆ ಮೇಳ, ಬೆಳಗಾವಿ ಜಿಲ್ಲೆಯ ಸವದಿಯ ಶ್ರೀ ವೀರಭದ್ರೇಶ್ವರ ಕಲಾ ಸಂಘದ ಹಾಗೂ ಶ್ರೀ ಕೃಷ್ಣ ಪಾರಿಜಾತ ಕಂಪನಿಯಿಂದ ಶ್ರೀ ಕೃಷ್ಣ ಪಾರಿಜಾತ, ಕುಂದಾಪುರ ಕೊಂಡದಕುಳಿ, ಅಶ್ವಿನಿ ಕೊಂಡದಕುಳಿ ಮತ್ತು ತಂಡದಿಂದ ನರಕಾಸು ವಧೆ (ಯಕ್ಷಗಾನ).
ಉತ್ಸವದ ಕಡೆ ದಿನ ಅ. 11ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಸೂತ್ರದ ಬೊಂಬೆ ಮೇಳ, ಶ್ರೀ ರಾಮೇಶ್ವರ ಕೃಪಾಪೋಷಿತ ಯಕ್ಷಗಾನದಿಂದ ಸತ್ಯ ಹರಿಶ್ಚಂದ್ರ ಪ್ರಸ್ತುತಪಡಿಸುವರು.
ಮೈಸೂರಿನ ನೀಲಗಾರ ಜನಪದ ಗಾಯಕ ಡಾ. ಮೈಸೂರು ಗುರುರಾಜ್, ಬಳ್ಳಾರಿ ಜಿಲ್ಲೆಯ ಹಿರಿಯ ಬಯಲಾಟ ಕಲಾವಿದರಾದ ಶ್ರೀ ವೀರನಗೌಡ ಮುದ್ದಟನೂರು, ಹಾಸನ ಜಿಲ್ಲೆಯ ಹಿರಿಯ ಕಲಾವಿದೆ ತೊಗಲು ಗೊಂಬೆಯಾಟದ ದಾಕ್ಷಾಯಿಣಿ, ಹಾಸನ ಜಿಲ್ಲೆಯ ಹಿರಿಯ ಕಲಾವಿದ ತೆಗಲುಗೊಂಬೆಯಾಟದ ಪ್ರಭಾವತಿ, ಬೆಳಗಾವಿ ಜಿಲ್ಲೆಯ ಶ್ರೀ ಕೃಷ್ಣ ಪಾರಿಜಾತ ಹಿರಿಯ ಕಲಾವಿದ ವಿಠಲ ಗೋವಿಂದ ಗುರುವ, ಕುಂದಾಪುರ ಕೊಂಡದಕುಳಿ ಯಕ್ಷಗಾನದ ಹಿರಿಯ ಕಲಾವಿದ ರಾಮಚಂದ್ರ ಗಣೇಶ ಹೆಗಡೆ, ಬೆಳಗಾವಿ ಜಿಲ್ಲೆಯ ಸಣ್ಣಾಟದ ಹಿರಿಯ ಕಲಾವಿದ ಡಾ. ಲಕ್ಷ್ಮೀಬಾಯಿ ಮಾದಾರ, ತಿಪಟೂರಿನ ಕೊನೆಹಳ್ಳಿಯ ಮೂಡಲಪಾಯ ಯಕ್ಷಗಾನ ಹಿರಿಯ ಕಲಾವಿದ ಎ.ಬಿ. ಶಂಕರಪ್ಪ, ಮೈಸೂರಿನ ವೃತ್ತಿರಂಗಭೂಮಿ ಹಿರಿಯ ಕಲಾವಿದೆ ಸರಸ್ವತಿ ಉರುಫ್ ಜುಲೇಖಾ ಬೇಗಂ ಅವರನ್ನು ಸನ್ಮಾನಿಸಲಾಯಿತು.
ಪ್ರತಿದಿನ ಸಂಜೆ ವನರಂಗದಲ್ಲಿ ಅಂತಾರಾಜ್ಯ ಕಲಾತಂಡಗಳಿಂದ ಜಾನಪದ ನೃತ್ಯ ಪ್ರದರ್ಶಿಸಿದರು.