ಕನ್ನಡಪ್ರಭ ವಾರ್ತೆ ಚಿಕ್ಕೋಡಿದಾದಿಯರ ವೃತ್ತಿಯಲ್ಲಿ ಶುಶ್ರೂಷಾ ಕೌಶಲ್ಯಗಳನ್ನು ಸಮರ್ಪಕವಾಗಿ ರೂಢಿಸಿಕೊಂಡು ಜನಸೇವೆಗೆ ಬದ್ದರಾಗಬೇಕು, ನರ್ಸಿಂಗ್ ವೃತ್ತಿ ನೊಬೆಲ್ ಪ್ರೋಪೇಶನ್ ಎಂದು ಡಾ.ಸಂಧ್ಯಾ ಪಾಟೀಲ ಹೇಳಿದರು.
ಅಧ್ಯಕ್ಷತೆ ವಹಿಸಿದ ಸಿಎಲ್ಇ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಕವಟಗಿಮಠ ಮಾತನಾಡಿ, ಅತ್ಯಂತ ಗೌರವದ ದಾದಿಯರ ವೃತ್ತಿಗೆ ಪುವೇಶಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ನಿಮ್ಮ ಶೈಕ್ಷಣಿಕ ಪಯಣ ಯಶಸ್ವಿಯಾಗಿ ಪೂರೈಸಿ, ವೃತ್ತಿಯಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ.
ಸಿಎಲ್ಇ ಸಂಸ್ಥೆ ಯಾವಾಗಲೂ ಗುಣಾತ್ಮಕ ಹಾಗೂ ಶಿಸ್ತಿನ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ ಎಂದರು.ಎಸ್.ಬಿ. ತುಪ್ಪದ ಬಸವರಾಜ ಹುಕ್ಕೇರಿ ಅವರು ಉದಯೋನ್ಮುಖ ದಾದಿಯರಿಗೆ ನೈಟೆಂಗಿಲ್ ಪ್ರತಿಜ್ಞೆ ಭೋಧಿಸಿದರು. ಸಿಎಲ್ಇ ಸಂಸ್ಥೆಯ ಆಡಳಿತಾಧಿಕಾರಿ ಸಾಗರ ಬೀಸ್ಕೋಪ್, ಡಾ.ಸುರೇಶ ಉಕ್ಕಲಿ, ಎಸ್.ಎಸ್. ಮೆಟಗುಡ್ಡ, ಎಸ್.ಕೆ. ಕೊಟ್ರೆ, ಸ್ಮೀತಾ ಶಿಂಧೆ ಇದ್ದರು. ಸಿಎಲ್ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಸಿ.ಎಸ್.ಮಠಪತಿ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ಕೋಳಿ ವಂದಿಸಿದರು.