ವೃದ್ಧಾಶ್ರಮಕ್ಕೆ 1 ಎಕರೆ ಜಮೀನು

KannadaprabhaNewsNetwork |  
Published : Aug 01, 2024, 01:48 AM IST
31ಶಿರಾ1: ಶಿರಾ ತಾಲ್ಲೂಕು ಗಾಣದಹುಣಸೆ ಗ್ರಾಮದ ಬಳಿ ಇರುವ ಆಶ್ರಯ ನಿರಾಶ್ರಿತರ ವೃದ್ದಾಶ್ರಮಕ್ಕೆ ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ.ಜಯಚಂದ್ರ ಅವರು ತಮ್ಮ 75ನೇ ಹುಟ್ಟು ಹಬ್ಬದ ಪ್ರಯುಕ್ತ ಭೇಟಿ ನೀಡಿ ಅಲ್ಲಿನ ನಿರಾಶ್ರಿತರಿಗೆ ಆಹಾರ ಸಾಮಗ್ರಿ ಹಾಗೂ ಸಹಾಯ ಧನ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ದೃವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಆಶ್ರಯ ನಿರಾಶ್ರಿತರ ವೃದ್ಧಾಶ್ರಮಕ್ಕೆ ಶಿರಾ ಬಳಿ 1 ಎಕರೆ ಜಮೀನು ಮಂಜೂರಿಗೆ ಕ್ರಮ

ಕನ್ನಡಪ್ರಭ ವಾರ್ತೆ ಶಿರಾ ತಾಲೂಕಿನ ಗಾಣದಹುಣಸೆ ಗ್ರಾಮದ ಬಳಿ ಖಾಸಗಿ ಜಮೀನಿನಲ್ಲಿರುವ ಆಶ್ರಯ ನಿರಾಶ್ರಿತರ ವೃದ್ಧಾಶ್ರಮಕ್ಕೆ ಶಿರಾ ಬಳಿ 1 ಎಕರೆ ಜಮೀನು ನೀಡಿ ಕಟ್ಟಡವನ್ನೂ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು. ತಮ್ಮ 75ನೇ ಹುಟ್ಟು ಹಬ್ಬದ ಪ್ರಯುಕ್ತ ನಗರಸಭಾ ಸದಸ್ಯರಾದ ಧ್ರುವಕುಮಾರ್ ವೃದ್ಧಾಶ್ರಮದ ವಾಸಿಗಳಿಗೆ ಸಿಹಿ ಊಟದ ವ್ಯವಸ್ಥೆ ಹಾಗೂ ದಿನಸಿ ಪದಾರ್ಥಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ವೃದ್ಧಾಶ್ರಮದಲ್ಲಿರುವ ನಿರಾಶ್ರಿತರನ್ನು ನೋಡಿದರೆ ಮನುಷ್ಯನ ಜನ್ಮ ಇಷ್ಟೆ ಎಂದು ಅರಿವಾಗುತ್ತದೆ. ಇಂತಹ ಕಾರ್ಯ ಮಾಡುತ್ತಿರುವ ವೃದ್ಧಶ್ರಮದ ಮುಖ್ಯಸ್ಥರಾದ ಗೀತಾ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಶಿರಾ ಬಳಿ ೧ ಎಕರೆ ಜಮೀನು ನೀಡಿ ಕಟ್ಟಡ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳುತ್ತೇನೆ ಎಂದರು. ನಗರಸಭಾ ಸದಸ್ಯ ವಿ.ಜಿ.ಧ್ರುವಕುಮಾರ್ ಮಾತನಾಡಿ ಆಶ್ರಯ ನಿರಾಶ್ರಿತರ ವೃದ್ದಾಶ್ರಮ ಶಿರಾ ನಗರ ಪ್ರದೇಶದಿಂದ ಸುಮಾರು 18 ರಿಂದ 20 ಕಿ.ಮೀ. ದೂರವಿರುವುದರಿಂದ ಆಶ್ರಮದಲ್ಲಿ ಇರುವ ನಿರಾಶ್ರಿತರಿಗೆ ಅನಾರೋಗ್ಯವಾದಂತಹ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಯಾವುದೇ ಆಸ್ಪತ್ರೆ ಇಲ್ಲ ಹಾಗೂ ಅಗತ್ಯ ಸೇವೆಗಳಿಗೆ ತೊಂದರೆಯಾಗುತ್ತಿದೆ. ಇದನ್ನು ಪರಿಗಣಿಸಿ ಭೂಮಿ ನೀಡುವ ಭರವಸೆ ನೀಡಿರುವ ಶಾಸಕರಿಗೆ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ಕನಕ ಬ್ಯಾಂಕ್ ನಿರ್ದೇಶಕರಾದ ಭಾನುಪ್ರಕಾಶ್, ಶಿವು ಚಂಗಾವರ, ಕೊಟ್ಟಿ ಕೆ.ಸಿ.ಲೋಕೇಶ್, ಹಾರೋಗೆರೆ ಮಹೇಶ್, ಟಿಸಿಎಸ್ ಕುಮಾರ್ ನಾಯಕ್, ದೊಡ್ಡಬಾಣಗೆರೆ ರಾಜಣ್ಣ, ಹೊಸೂರು ಚಿದಾನಂದ್, ಹಂದಿಕುಂಟೆ ನಾರಾಯಣಪ್ಪ, ಪೂಜಾರ ಮುದ್ದನಹಳ್ಳಿ ಪಿ.ಬಿ. ನರಸಿಂಹಯ್ಯ, ಕಲ್ಲಿಗಾನಹಟ್ಟಿ ಶಿವಕುಮಾರ್, ಶರತ್ ಪಾಳೇಗಾರ್, ಕಲ್ಲಹಳ್ಳಿ ಮಹೇಂದ್ರ, ತಾವರೇಕೆರೆ ಶಾಂತಮ್ಮ, ದ್ವಾರಾಳು ಮಾರುತಿ, ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು