)
-ದುಬಾರಿ ಶುಲ್ಕ ನೀಡಲಾಗದೇ ಮಳೆ, ಬಿಸಿಲಲ್ಲೇ ಹಲವರಿಂದ ಪ್ರತಿಭಟನೆ-ಜನರ ಉಪಯೋಗಕ್ಕೆ ಬಾರದ ಕಟ್ಟಡ । ಪುಂಡು ಪೋಕರಿಗಳಿಗೆ ವಾಸಸ್ಥಾನಉಮಾಶಂಕರ ಕಾರ್ಯ
2018ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಯಾದ ಈ ಕಟ್ಟಡದಲ್ಲಿ ಶೌಚಾಲಯ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತದೆ. ದುಬಾರಿ ಶುಲ್ಕ ನೀಡಿ ಜಾತಿ ಸಮಾವೇಶ ಮಾಡುವವರಿಗಾಗಿ ತಿಂಗಳಿಗೆ ಅಥವಾ 2 ತಿಂಗಳಿಗೊಮ್ಮೆ ಈ ಕಟ್ಟಡವನ್ನು ಸ್ವಚ್ಛಗೊಳಿಸಲಾಗುತ್ತದೆ. ಪ್ರತಿಭಟನಾಕಾರರು, ಹೋರಾಟಗಾರರು ಮಳೆ, ಬಿಸಿಲಿನಿಂದ ಪಾರಾಗುವ ಉದ್ದೇಶದಿಂದ ಈ ಕಟ್ಟಡ ನಿರ್ಮಿಸಲಾಗಿತ್ತು. ಆದರೆ, ಕಟ್ಟಡ ನಿರ್ಮಾಣವಾಗಿ ಐದಾರು ವರ್ಷಗಳೇ ಕಳೆದಿದ್ದರೂ ಪಾಲಿಕೆಯ ಅಧಿಕಾರಿಗಳು ಈ ಕಟ್ಟಡವನ್ನು ಪ್ರತಿಭಟನಾಕಾರರಿಗೆ ಬಾಡಿಗೆಗೆ ನೀಡುತ್ತಿಲ್ಲ.
ಬೆಂಗಳೂರಿನ ಹಲವು ಕಡೆ ನಡೆಯುತ್ತಿದ್ದ (ಮೌರ್ಯ ಸರ್ಕಲ್, ಬನ್ನಪ್ಪ ಪಾರ್ಕ್, ಎಂಜಿ ಪ್ರತಿಮೆ ಬಳಿ. ಟೌನ್ ಹಾಲ್ ಬಳಿ) ಪ್ರತಿಭಟನೆಗಳನ್ನು ಒಂದು ನಿರ್ದಿಷ್ಟ ಜಾಗದಲ್ಲಿ ನಡೆಸಿದರೆ ಸೂಕ್ತ, ಸಂಚಾರ ಸಮಸ್ಯೆ ಇರುವುದಿಲ್ಲ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಆಗ ಸರ್ಕಾರ ಸ್ವಾತಂತ್ರ್ಯ ಉದ್ಯಾನವನ್ನು ಆಯ್ಕೆ ಮಾಡಿತು. ಫ್ರೀಡಂಪಾರ್ಕ್ ನ ಒಟ್ಟು ವಿಸ್ತೀರ್ಣ 21 ಎಕರೆ, ಇದರಲ್ಲಿ 16 ಎಕರೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಇರಿಸಿದ್ದ ಜೈಲಿನ ಬ್ಯಾರಕ್, ಕ್ಲಾಕ್ ಟವರ್ ಹಾಗೂ ಉದ್ಯಾನವನ ನಿರ್ಮಿಸಲಾಗಿದೆ. ಉಳಿದ 5 ಎಕರೆ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಮೀಸಲಿಡಲಾಗಿದೆ ಎಂದು ತಿಳಿಸಲಾಗಿತ್ತು.ಆದರೆ, ವಾಸ್ತವ ಸ್ಥಿತಿಯೇ ಬೇರೆಯಾಗಿದೆ. ಪ್ರಜಾಸತ್ತಾತ್ಮಕ ಹೋರಾಟಗಳಿಗಾಗಿ ಸಂಘ, ಸಂಸ್ಥೆಗಳು ಈ ಜಾಗ ಕೇಳಿದರೆ ಗುತ್ತಿಗೆದಾರರು ಈ ಕಟ್ಟಡವನ್ನು ಪಾಲಿಕೆಗೆ ಇನ್ನೂ ನೀಡಿಲ್ಲ ಎಂಬ ಸಮಜಾಯಿಷಿಯನ್ನು ಜಿಬಿಎ ಅಧಿಕಾರಿಗಳು ನೀಡುತ್ತಾರೆ. ಒಂದು ವೇಳೆ ಈ ಕಟ್ಟಡವನ್ನು ಪಾಲಿಕೆಗೆ ಗುತ್ತಿಗೆದಾರ ವರ್ಗಾಯಿಸಿದರೂ ಇಷ್ಟು ಮೊತ್ತದ ಹಣವನ್ನು ನೀಡಿ ಪ್ರತಿಭಟನೆ ಮಾಡಲು ಯಾವುದೇ ರಾಜಕೀಯ ಪಕ್ಷಗಳಾಗಲಿ, ಸಂಘ ಸಂಸ್ಥೆಗಳಾಗಲಿ ಮುಂದೆಬರುವುದಿಲ್ಲ.
ನೆರಳು, ಶೌಚಾಲಯ ಇರುವ ಆ ಶೆಡ್ ಗೆ 1 ಲಕ್ಷ ಬಾಡಿಗೆ ನಿಗದಿ ಮಾಡಿರುವುದು ಅತ್ಯಂತ ದುಬಾರಿಯಾಗಿದೆ. ಪ್ರಜಾಸತ್ತಾತ್ಮಕ ಹೋರಾಟ, ಚಳವಳಿಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡುವುದು ಅಕ್ಷಮ್ಯ, ಚಳವಳಿಗಾರರಿಗೆ ನೀರು, ನೆರಳು ಶೌಚಾಲಯ ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಪ್ರತಿಭಟನೆ ಸಮಯದಲ್ಲಿ ಪರದಾಟ ತಪ್ಪಿಲ್ಲ