ಕನ್ನಡಪ್ರಭ ವಾರ್ತೆ ಬೆಳಗಾವಿ
ಇಲ್ಲಿನ ಗಾಂಧಿನಗರದ ಸಂಕಮ ಹೊಟೇಲ್ ಸಭಾಭವನದಲ್ಲಿ ಸೋಮವಾರ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಆಯೋಜಿಸಲಾದ ಬೆಳಗಾವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧಿಕಾರಿ, ಸಿಬ್ಬಂದಿಗೆ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚನ್ನಪಟ್ಟಣದಲ್ಲಿ ನಿತ್ಯವೂ ಲಕ್ಷಾಂತರ ಲೀಟರ್ ಹಾಲು ಉತ್ಪಾದನೆ ಇದೆ. ಬೆಳಗಾವಿಯಲ್ಲೂ ಸಹ ಹೆಚ್ಚಿನ ಹಾಲು ಉತ್ಪಾದಿಸಲು ಗುರಿ ಹೊಂದಬೇಕು. ಗುಣಮಟ್ಟದ ಹಾಲು ಪೂರೈಕೆ ಮಾಡಿ, ಡೈರಿ ಹಾಗೂ ಒಕ್ಕೂಟದ ಪ್ರಗತಿಗೆ ಹಾಲು ಉತ್ಪಾದಕ ರೈತರು ಸಹಕರಿಸಿ, ಹೆಚ್ಚಿನ ಲಾಭ ಪಡೆದುಕೊಳ್ಳಬೇಕು ಎಂದರು.ಕೋರಾನಾ ಸಂದರ್ಭದಲ್ಲಿ ರೈತರಿಗೆ ಸಹಕಾರ ನೀಡಿದ್ದು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಖಾಸಗಿ ಉತ್ಪಾದಕರು ಕೈ ಚೆಲ್ಲಿದರು. ಅವಾಗ ರೈತರಿಗೆ ನೆರವಾಗಿದ್ದು ನಾವು. ಹೀಗಾಗಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕೆಎಂಎಪ್ಗೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ ಹಾಲನ್ನು ಪೂರೈಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಯೂನಿಯನ್ ಅಧ್ಯಕ್ಷ ಬಸಗೌಡ ಡಿ. ಪಾಟೀಲ ಉಪಾಧ್ಯಕ್ಷ ಸಂಜು ಸೊನ್ನಪ್ಪನವರ, ನಿರ್ದೇಶಕರಾದ ಈಶ್ವರಚಂದ್ರ ಬ. ಇಂಗಳಗಿ, ಬಸಪ್ಪ ಸಂತಿ, ಶಂಕರಗೌಡ ದೊಡ್ಡಗೌಡರ, ಬಸಗೌಡ ಪಾಟೀಲ, ವರ್ಧಮಾನ ಭೋಳಿ, ಸಂತೋಷ ಸಹಕಾರ ಸಂಘಗಳ ಜಂಟಿ ನಿಬಂಧಕರು ಡಾ.ಸುರೇಶಗೌಡ, ಸಹಕಾರ ಸಂಘಗಳ ಉಪನಿಬಂಧಕರು ರವೀಂದ್ರ ಪಾಟೀಲ್, ಚಂದ್ರಶೇಖರ, ಎಸ್.ಎಸ್.ಅಂಗಡಿ, ಡಾ. ರಾಕೇಶ ಕೊಣ್ಣೂರ, ಡಾ.ರಾಕೇಶ ಸಿ.ಎಂ, ಮುಜಾಹಿದ್ ಪೀರಜಾದೆ, ಯೂನಿಯನ್ ಸಿಇಒ ಹಾಲಪ್ಪ ಜಗ್ಗಿನವರ ಸ್ವಾಗತಿಸಿದರು. ಶ್ರೀಶೈಲ ಯಡಹಳ್ಳಿ ನಿರೂಪಿಸಿ, ವಂದಿಸಿದರು.