ನಗರದ ಹನುಮಂತಪ್ಪ ವೃತ್ತದಿಂದ ತಾಲೂಕು ಕಚೇರಿ ಆವರಣದಿಂದ ಅಜಾದ್ ಪಾಕ್ ವರೆಗೆ ಯಾತ್ರೆ
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶಭಕ್ತರ ಬಳಗದಿಂದ ಬುಧವಾರ ಚಿಕ್ಕಮಗಳೂರು ನಗರದಲ್ಲಿ 100 ಮೀ. ಉದ್ದದ ತ್ರಿವರ್ಣ ಧ್ವಜಯಾತ್ರೆ ನಡೆಯಿತು.
ಇದು ದೇಶ ಭಕ್ತಿಯ ಜಾಗೃತಿ ಮತ್ತು ರಾಷ್ಟ್ರೀಯ ಭಾವೈಕ್ಯತೆ ಸಂದೇಶ ಹೊತ್ತು ನಗರದ ಹನುಮಂತಪ್ಪ ವೃತ್ತದಿಂದ ತಾಲೂಕು ಕಚೇರಿ ಆವರಣದಿಂದ ಯಾತ್ರೆ ಎಂ.ಜಿ. ರಸ್ತೆಯ ಮೂಲಕ ಸಾಗಿ ಅಜಾದ್ ಪಾಕ್ ವರೆಗೆ ಸಾಗಿತು. ನೂರಾರು ಮಂದಿ ತ್ರಿವರ್ಣ ಧ್ವಜ ಹಿಡಿದು ಭಾರತ ಮಾತಾ ಕೀ ಜೈ, ವಂದೇ ಮಾತರಂ ಎಂಬ ಘೋಷ ವಾಕ್ಯದೊಂದಿಗೆ ಸಾಗಿದರು.ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ತಿರಂಗಾ ಯಾತ್ರೆ ದೇಶಭಕ್ತಿ ಜಾಗರಣೆ ಮತ್ತು ಜನಜಾಗೃತಿ ಸಂಕಲ್ಪ ದೊಂದಿಗೆ ನಡೆಯುತ್ತಿರುವ ಪುಟ್ಟ ಪ್ರಯತ್ನ ಎಂದರು.ರಾಷ್ಟ್ರಕ್ಕೆ ಒಂದೇ ಧ್ವಜ ಅದು ತ್ರಿವರ್ಣಧ್ವಜ. ವಿವಿಧ ಸಂಘಟನೆಗಳು, ಪಕ್ಷಗಳು, ಜಾತಿ-ಸಮುದಾಯಗಳು ತಮ್ಮದೇ ಧ್ವಜಗಳನ್ನು ಹೊಂದಿರ ಬಹುದು. ಆದರೆ,ಇಡೀ ದೇಶವನ್ನು ಪ್ರತಿನಿಧಿಸುವ ಧ್ವಜ ರಾಷ್ಟ್ರಧ್ವಜ ಒಂದೇ. ಎಲ್ಲ ಧ್ವಜಗಳಿಗಿಂತ ಶ್ರೇಷ್ಠ ಧ್ವಜ, ರಾಷ್ಟ್ರಧ್ವಜ. ಅದಕ್ಕಿಂತ ಮಿಗಿಲಾದ ಧ್ವಜ ಮತ್ತೊಂದಿಲ್ಲ ಎಂಬ ಭಾವನೆ ಪ್ರತಿಯೊಬ್ಬ ಭಾರತೀಯನಲ್ಲೂ ಇರಬೇಕು ಎಂದರು.ದೇಶದ ಪ್ರತಿಯೊಬ್ಬರಿಗೂ ವಿಭಿನ್ನ ಧಾರ್ಮಿಕ ಗ್ರಂಥಗಳು ಇರಬಹುದು. ಆದರೆ ಭಾರತದ ಸಂವಿಧಾನವೇ ದೇಶದ ಪರಮ ಕಾನೂನು ಮತ್ತು ಎಲ್ಲ ಭಾರತೀಯರನ್ನು ಒಂದೇ ಚೌಕಟ್ಟಿನಡಿ ಜೋಡಿಸುವ ಶಕ್ತಿ. ರಾಷ್ಟ್ರಧ್ವಜ, ಸಂವಿಧಾನ ಮತ್ತು ರಾಷ್ಟ್ರಗೀತೆಗಳು ದೇಶದ ೧೪೦ ಕೋಟಿ ಗೂ ಅಧಿಕ ಜನರನ್ನು ಒಗ್ಗೂಡಿಸುವ ರಾಷ್ಟ್ರೀಯ ಸಂಕೇತಗಳಾಗಿವೆ ಎಂದರು.ಭಾರತೀಯ ಸೈನಿಕರು ದೇಶದ ಗಡಿಗಳನ್ನು ರಕ್ಷಿಸುವಲ್ಲಿ ಹಲವು ಸಂದರ್ಭಗಳಲ್ಲಿ ತಮ್ಮ ಪರಾಕ್ರಮ ಪ್ರದರ್ಶಿಸಿದ್ದಾರೆ. ೧೯೪೮, ೧೯೬೫ ಮತ್ತು ೧೯೭೧ರ ಯುದ್ಧಗಳಲ್ಲಿ ಭಾರತೀಯ ಸೇನೆ ಸಾಹಸ ಸ್ಮರಿಸಿದ ಅವರು, ೧೯೭೧ರಲ್ಲಿ ೯೩ ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಶರಣಾಗು ವಂತೆ ಮಾಡಿದ ಭಾರತದ ಸೇನೆ ಸಾಧನೆ ಐತಿಹಾಸಿಕ ಎಂದು ಹೇಳಿದರು.ಕಾರ್ಗಿಲ್ಯುದ್ಧದ ಸಂದರ್ಭದಲ್ಲಿ ಕ್ಯಾಪ್ಟನ್ ವಿಕ್ರಂ ಬಾತ್ರ ಅವರ ಶೌರ್ಯ ಉಲ್ಲೇಖಿಸಿದ ಅವರು ಅತ್ಯಂತ ಕಠಿಣ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಯಲ್ಲೂ ಭಾರತೀಯ ಸೈನಿಕರು ಶತ್ರುಗಳ ವಿರುದ್ಧ ಹೋರಾಡಿ ವಿಜಯ ಸಾಧಿಸಿದರು ಎಂದು ಹೇಳಿದರು.
ದೇಶವನ್ನು ಸುರಕ್ಷಿತವಾಗಿಡುವುದು ಕೇವಲ ಸೈನಿಕರ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಭಾರತೀಯನೂ ದೇಶದ ಭದ್ರತೆ ಮತ್ತು ಏಕತೆ ಬಗ್ಗೆ ಎಚ್ಚರವಾಗಿರಬೇಕು. ದೇಶ ದುರ್ಬಲಗೊಳಿಸುವ ಯಾವುದೇ ಪ್ರಯತ್ನದ ವಿರುದ್ಧ ರಾಷ್ಟ್ರೀಯ ಏಕತೆಯನ್ನುಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.