ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಅ. ೧೭ರಿಂದ ೨೧ರ ವರೆಗೆ ಹಮ್ಮಿಕೊಂಡಿರುವ ಕುಮಟಾ ವೈಭವ ಕಾರ್ಯಕ್ರಮದಲ್ಲಿ ಈ ಬಾರಿ ಜಿಲ್ಲೆಯ ಗೌಳಿಗರ ಕುಣಿತ, ಸಿದ್ಧಿ ಕುಣಿತ, ಕೋಲಾಟ, ಟಿಬೇಟಿಯನ್ ನೃತ್ಯ, ಭಜನೆ ಪದ ಇನ್ನಿತರ ಸ್ಥಳೀಯ ಕಲೆಗೆ ವಿಶೇಷ ಒತ್ತು ನೀಡಲಾಗಿದೆ. ಜತೆಗೆ ರಾಜ್ಯದ ವಿವಿಧೆಡೆಯಿಂದ ಹೆಸರಾಂತ ಕಲಾವಿದರ ತಂಡವೂ ಪ್ರತಿನಿತ್ಯ ಮನರಂಜನೆಯೊಟ್ಟಿಗೆ ರಸದೌತಣ ನೀಡಲಿದೆ ಎಂದು ತಾಂಡವ ಕಲಾನಿಕೇತನದ ಸಂಸ್ಥಾಪಕ ಮಂಜುನಾಥ ನಾಯ್ಕ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ತಂದೆ ದಿ. ಲಿಂಗಪ್ಪ ನಾಯ್ಕ ಸ್ಮರಣೆಯಲ್ಲಿ ತಾಂಡವ ಕಲಾನಿಕೇತನದ ಅಡಿಯಲ್ಲಿ ೭ನೇ ಕುಮಟಾ ವೈಭವ ಕಾರ್ಯಕ್ರಮವನ್ನು ಈ ಬಾರಿ ವಿಭಿನ್ನವಾಗಿ ಪ್ರಸ್ತುತಪಡಿಸುವ ಗುರಿ ಹೊಂದಿದ್ದೇವೆ. ಸರಿಗಮಪ ಖ್ಯಾತಿಯ ತಂಡ ಹಾಗೂ ಹೆಸರಾಂತ ಕಲಾವಿದರಿಂದ ನಮ್ಮ ನಾಡಿನ ಮಾತ್ರವಲ್ಲದೇ ದೇಶವಿದೇಶದ ಕಲೆ, ಸಂಗೀತ, ನೃತ್ಯದ ಪ್ರದರ್ಶನವೂ ಮೇಳೈಸಿದ್ದೇವೆ. ಮಿಮಿಕ್ರಿ ದಯಾನಂದ, ರಿಚರ್ಡ್ ಲೂಯಿಸ್ ಮುಂತಾದ ಹಾಸ್ಯ ಕಲಾವಿದರಿಂದ ನಗೆಹಬ್ಬವೂ ಇರಲಿದೆ ಎಂದರು.ಕುಮಟಾ ವೈಭವ ಸಮಿತಿ ಅಧ್ಯಕ್ಷ ಆರ್.ಎಚ್. ನಾಯ್ಕ ಮಾತನಾಡಿ, ಅ. ೧೭ರಂದು ಸಂಜೆ ೮.೩೦ಕ್ಕೆ ದಿ. ಲಿಂಗಪ್ಪ ನಾಯ್ಕ ವೇದಿಕೆಯಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿವೇದಿತ್ ಆಳ್ವಾ ಚಾಲನೆ ನೀಡಲಿದ್ದಾರೆ ಎಂದರು.
15ರಂದು ಸಿದ್ದಾಪುರದಲ್ಲಿ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಸಮಾವೇಶ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಯೋಜನೆಗಳು ಜಾರಿಗೊಳಿಸಲಾಗುತ್ತಿದೆ. ತಾಲೂಕಿನ 2228 ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘಗಳಿದ್ದು, 14347 ಸದಸ್ಯರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 68 ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದೆ. ಸಂಘದ ಸದಸ್ಯರಿಗಾಗಿ ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ 77 ಸದಸ್ಯರಿಗೆ ₹8.82 ಲಕ್ಷ, ಆರೋಗ್ಯ ರಕ್ಷಾ ಯೋಜನೆಯಲ್ಲಿ 111 ಸದಸ್ಯರಿಗೆ ₹8.13 ಲಕ್ಷ ಹಾಗೂ ಪ್ರಗತಿ ರಕ್ಷಾ ಕವಚದಡಿಯಲ್ಲಿ 372 ಸದಸ್ಯರಿಗೆ ₹2.36 ಲಕ್ಷ ವಿನಿಯೋಗಿಸಲಾಗಿದೆ ಎಂದರು.