ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಗೋಣಿಕೊಪ್ಪ ಪಟೇಲ್ ನಗರದಲ್ಲಿರುವ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಗೋಣಿಕೊಪ್ಪಲು ಎಸ್ಎನ್ಡಿಪಿ ಶಾಖ ಯೋಗಂ ಆಯೋಜಿಸಿದ ಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಆಚರಣೆಯಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದರು.
ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ದಾಟಿಸುವ ವ್ಯಕ್ತಿತ್ವ ಉಳ್ಳವರು ಗುರುಗಳಾಗುತ್ತಾರೆ. ಅಂತಹ ಮಹಾನ್ ಗುರು ನಾರಾಯಣ ಗುರುಗಳಾಗಿದ್ದಾರೆ. ಅವರ ಆದರ್ಶ ಪಾಲನೆ, ತತ್ವ, ಚಿಂತನೆಗಳು ನಮ್ಮೆಲ್ಲರ ಬದುಕಿನ ಬೆಳಕಾಗಬೇಕು ಎಂದು ಸಲಹೆ ನೀಡಿದರು.ಜ್ಞಾನಕ್ಕಾಗಿ ಪ್ರಾರ್ಥಿಸುವುದರಿಂದ ಮನುಷ್ಯನಲ್ಲಿ ಶಾಂತಿ ನೆಲೆಸುತ್ತದೆ. ಜೀವನವನ್ನು ಸುಂದರವಾಗಿಸಿಕೊಳ್ಳಲು ಜ್ಞಾನದ ಬೆಳಕಿನಲ್ಲಿ ಹೊತ್ತಿಸಿಕೊಳ್ಳುವ ಪ್ರಾರ್ಥನೆಯಾಗಲಿ ಎಂದು ಅಭಿಪ್ರಾಯ ಮಂಡಿಸಿದರು.
ಎಸ್ಎನ್ಡಿಪಿ ಯೂನಿಯನ್ ಜಿಲ್ಲಾಧ್ಯಕ್ಷ ಲೋಕೇಶ್ ಮಾತನಾಡಿ, ಹಿಂದುಳಿದ ಸಮುದಾಯ ಸಮಾಜದ ಮುಂದುವರಿಕೆಯ ಭಾಗವಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರು ಶಿಕ್ಷಣವಂತರಾಗುವ ಮೂಲಕ ಈ ಸಮಾಜದಲ್ಲಿ ಪ್ರಬಲವಾಗಿ ಉಳಿದುಕೊಳ್ಳಬೇಕು ಎಂದು ತಿಳಿಸಿದರು.
ಮನುಕುಲದ ಏಳಿಗೆಗಾಗಿ ಸರ್ವಸ್ವವನ್ನು ತ್ಯಜಿಸಿ ಸನ್ಯಾಸಿಗಳಾದರು. ಅವರು ಹಾಕಿಕೊಟ್ಟ ಚಿಂತನೆಯ ಮಾರ್ಗ ಇಂದು ನಾವು ಪಾಲಿಸುತ್ತಾ ಬಂದಿದ್ದೇವೆ. ನಾರಾಯಣ ಗುರುಗಳ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಹೊಸ ಯುಗವನ್ನು ನಿರ್ಮಿಸುವಲ್ಲಿ ಸಫಲತೆಯನ್ನು ನಾವುಗಳು ಕಾಣಬೇಕು ಎಂದು ಹೇಳಿದರು.
ಇದೇ ಸಂದರ್ಭ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿರುವ ಸಂಘದ ಸದಸ್ಯರ ಮಕ್ಕಳಾದ ಮೈಸೂರಮ್ಮ ನಗರದ ಕೆ.ಆರ್. ಸುನಿಲ್, ಶಾಲಿನಿ ದಂಪತಿ ಪುತ್ರಿ ಕೆ.ಎಸ್. ಶಿವಾಲಿ, ಎ.ಆರ್. ಸುರೇಶ್, ಪಿ.ಎನ್. ಸಿಂದು ದಂಪತಿಗಳ ಪುತ್ರಿ ಎ.ಎಸ್ ಲಕ್ಷ್ಯ, ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ಅಧಿಕ ಅಂಕ ಪಡೆದು ಸಾಧನೆ ಮಾಡಿರುವ ಗೋಣಿಕೊಪ್ಪಲುವಿನ ಸಂಜಯ್ ಕೆ.ಕೆ, ಅಪರ್ಣ ಸಂಜಯ್ ದಂಪತಿಗಳ ಪುತ್ರಿ ಆದಿತಿ ಸಂಜಯ್, ಜೋಡುಬೀಟಿ ನಿವಾಸಿ ಸಿ.ಕೆ. ದಿನೇಶ್, ಲತಿಕ ಸಿ.ಕೆ ದಂಪತಿ ಪುತ್ರಿ ಸಿ.ಡಿ. ದೀಕ್ಷಿತ ಮತ್ತು ವಿಜ್ಞಾನ ವಿಭಾಗದಲ್ಲಿ ಅಧಿಕ ಅಂಕ ಗಳಿಸಿದ ಗೋಣಿಕೊಪ್ಪಲುವಿನ ವಿ.ವಿ. ಅರುಣ್ಕುಮಾರ್, ಜ್ಯೋತಿ ಅರುಣ್ ದಂಪತಿಗಳ ಪುತ್ರ ಚಿಂತನ್ ವಿ.ಎ, ಬಿ.ಸಿ. ಉಮೇಶ್, ಪವಿತ್ರ ಉಮೇಶ್ ಅವರ ಪುತ್ರಿ ಮೋನಿಕ, ಎಂ.ವಿ. ಮದುಸೂಧನ್, ಪ್ರೀತು. ಎಂ. ದಂಪತಿಗಳ ಪುತ್ರಿ ಆಶ್ವಿನಿ ಎಂ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು. ಆಡಳಿತ ಮಂಡಳಿ ಸದಸ್ಯರು, ಆಚರಣಾ ಸಮಿತಿ ಸದಸ್ಯರು, ಮಹಿಳಾ ಘಟಕ ಸದಸ್ಯರು ಇದ್ದರು.