ಮಲೆನಾಡು ಸಹಕಾರಿ ಸಂಘಕ್ಕೆ ₹೪೦.೩೨ ಲಕ್ಷ ಲಾಭ: ಎಂ.ಆರ್. ಹೆಗಡೆ

KannadaprabhaNewsNetwork |  
Published : Aug 30, 2026, 02:00 AM IST
ಫೋಟೋ ಆ.೨೯ ವೈ.ಎಲ್.ಪಿ. ೦೧ | Kannada Prabha

ಸಾರಾಂಶ

ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ ₹೪೦.೩೨ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಕೇವಲ ೧೦೯೩ ಸದಸ್ಯರನ್ನು ಹೊಂದಿದ ನಮ್ಮ ಸಂಸ್ಥೆ ೬,೨೫,೦೦೦ ಶೇರು ಬಂಡವಾಳ ಸಂಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ ₹೪೦.೩೨ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಕೇವಲ ೧೦೯೩ ಸದಸ್ಯರನ್ನು ಹೊಂದಿದ ನಮ್ಮ ಸಂಸ್ಥೆ ೬,೨೫,೦೦೦ ಶೇರು ಬಂಡವಾಳ ಸಂಗ್ರಹಿಸಿದೆ. ನಿರಂತರ ಅ ವರ್ಗೀಕರಣದಲ್ಲೇ ಮುನ್ನಡೆದಿದೆ. ಯಲ್ಲಾಪುರ ತಾಲೂಕಿನ ಸುತ್ತಮುತ್ತಲಿನ ಅಂಕೋಲಾ, ಮುಂಡಗೋಡು, ಜೋಯಿಡಾ ಸೇರಿದಂತೆ ಉಳಿದ ತಾಲೂಕುಗಳಲ್ಲೂ ನಮ್ಮ ಸಂಸ್ಥೆ ಗುಣಮಟ್ಟದ ಸೇವೆಗಾಗಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೇವಲ ೨೭ ವರ್ಷದಲ್ಲಿ ಅಪೂರ್ವ ಸಾಧನೆ ಮಾಡಿದೆ ಎಂದು ಸಂಸ್ಥಾಪಕ ಅಧ್ಯಕ್ಷರೂ ಆದ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.

ಶನಿವಾರ ಅಡಕೆ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಮ್ಮ ಸಂಸ್ಥೆಯಲ್ಲಿ ₹೧೦.೮ ಲಕ್ಷ ಕಾಯ್ದಿಟ್ಟ ನಿಧಿಗಾಗಿ ತೆಗೆದಿರಿಸಲಾಗಿದೆ. ಶಿಕ್ಷಣ ನಿಧಿಗೆ ₹೬೦.೪೮ ಸಾವಿರ ಇಡಲಾಗಿದೆ. ಈ ವರ್ಷವೂ ನಮ್ಮ ಸದಸ್ಯರಿಗೆ ಶೇ.೧೨ ಡಿವಿಡೆಂಡ್ ನೀಡುತ್ತಿದ್ದೇವೆ. ಕಟ್ಟಡ ನಿಧಿಗಾಗಿ ₹೧೦.೬೪ ಲಕ್ಷ ತೆಗೆದಿರಿಸಲಾಗಿದೆ. ಮಹೋತ್ಸವ ನಿಧಿಗಾಗಿ ₹೧ ಲಕ್ಷ, ಧರ್ಮಾರ್ಥ ನಿಧಿಗೆ ₹೬೦ ಸಾವಿರ, ಪ್ರಚಾರ ನಿಧಿಗೆ ₹೧ ಲಕ್ಷ, ಬೆಲೆ ಏರಿಳಿತ ನಿಧಿಗೆ ₹೩.೬೫ ಲಕ್ಷ, ಬ್ಯಾಡ್ ಡೆಡ್ ಪ್ರೊವಿಶನ್‌ಗೆ ₹೧೨ ಲಕ್ಷ ತೆಗೆದಿರಿಸಲಾಗಿದೆ ಎಂದು ವಿವರಿಸಿದರು.

ಸೆ.೧೦ರಂದು ಮಧ್ಯಾಹ್ನ ೩.೩೦ಕ್ಕೆ ಅಡಕೆ ಭವನದಲ್ಲಿ ಪ್ರಸಕ್ತ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ನಡೆಸಲಾಗುವುದು. ಆ ಸಂದರ್ಭದಲ್ಲಿ ಯುವ ಸಾಧಕ ಕೃಷಿಕರಿಗೆ ಸನ್ಮಾನ ಕೂಡ ನಡೆಯಲಿದೆ ಎಂದು ವಿವರಿಸಿದರು.

ಸಂಘದ ಉಪಾಧ್ಯಕ್ಷ ಎಂ.ಜಿ. ಭಟ್ಟ ಶೀಗೆಪಾಲ, ನಿರ್ದೇಶಕರಾದ ಎಂ.ಆರ್. ಹೆಗಡೆ ತಾರೇಹಳ್ಳಿ, ಮಧುಕೇಶ್ವರ ಭಟ್ಟ, ಗೋಪಾಲಕೃಷ್ಣ ಹೆಗಡೆ ನಂದಿಸರ, ಜಿ.ಆರ್. ಹೆಗಡೆ, ಗಜಾನನ ಭಟ್ಟ ಹಿತ್ಲಳ್ಳಿ, ಎಂ.ಪಿ. ಹೆಗಡೆ ಚವತ್ತಿ, ರವೀಂದ್ರ ಗೌಡ ಕುಂದರಗಿ, ಜಾನು ಘಾಡಿ ಸೋಮನಳ್ಳಿ, ಮುಖ್ಯಕಾರ್ಯನಿರ್ವಾಹಕ ವಿನಾಯಕ ಹೆಗಡೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ
ಕನಿಷ್ಠ ಕಾನೂನು ಅರಿವು ಇಲ್ಲದವರು ಅಯೋಗ್ಯರು: ಶಾಸಕ ಕೃಷ್ಣನಾಯ್ಕ ಸವಾಲು