ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸೋಮವಾರ ಸಂಜೆ ವೇಳೆ ಕೆಆರ್ಸಾಗರ ಅಣೆಕಟ್ಟೆಗೆ 120.80 ಅಡಿಗೆ ತಲುಪಿದ್ದು, 13,856 ಸಾವಿರ ಕ್ಯುಸೆಕ್ ಒಳಹರಿವು ಇದ್ದು, ಇನ್ನು ಹೆಚ್ಚಿನ ಒಳಹರಿವು ಬರುವ ಸೂಚನೆಯಲ್ಲಿ ಕೆಆರ್ಎಸ್ ಅಣೆಕಟ್ಟೆಯಿಂದ 106 ಮಟ್ಟದ 2 ಗೇಟುಗಳ ಮೂಲಕ 5 ಸಾವಿರ ಕ್ಯುಸೆಕ್ ನೀರನ್ನು ನದಿ ಪಾತ್ರಕೆ ಬಿಡಲಾಗಿದೆ.
ಕೆ.ಆರ್.ಸಾಗರ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಅಣೆಕಟ್ಟಿಯಿಂದ 5 ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗಿದೆ. ಪ್ರಸ್ತುತ ಅಣೆಕಟ್ಟೆಯಿಂದ ನದಿಗೆ ಮತ್ತು ನಾಲೆಗಳಿಗೆ ಸೇರಿ ಹೊರಹರಿವು 6 ಸಾವಿರ ಕ್ಯುಸೆಕ್ ಇದ್ದು, 43.298 ಟಿ.ಎಂ.ಸಿ ನೀರಿನ ಸಂಗ್ರಹವಿದೆ.ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 87.62 ಅಡಿ, ಒಳಹರಿವು 1214 ಕ್ಯುಸೆಕ್, ಹೊರಹರಿವು 983 ಕ್ಯೂಸೆಕ್ ದಾಖಲಾಗಿತ್ತು.
ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಂಬಾಡಿ ಜಲಾಶಯದ ಗರಿಷ್ಠ ನೀರಿನ ಮಟ್ಟವು 120.80 ಅಡಿಗಳಾಗಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದ್ದು, ಜಲಾಶಯದ ಭದ್ರತೆ ದೃಷ್ಟಿಯಿಂದ ನದಿಗೆ 5 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ.
ಗರಿಷ್ಠ ಮಟ್ಟ - 124.80 ಅಡಿ
ಒಳ ಹರಿವು – 13,856 ಕ್ಯುಸೆಕ್
ನೀರಿನ ಸಂಗ್ರಹ – 43.298 ಟಿಎಂಸಿ