ಕನ್ನಡಪ್ರಭ ವಾರ್ತೆ ಬೆಂಗಳೂರು
ರಸ್ತೆ ನಿರ್ವಹಣೆಗೆ ಸಂಬಂಧಿಸಿದ ಸುಮಾರು 40 ಕರೆ ಮಾಡಿದ ಸಾರ್ವಜನಿಕರು ಕೂಡಲೆ ಸರಿಪಡಿಸುವಂತೆ ಆಯುಕ್ತರಲ್ಲಿ ಮನವಿ ಮಾಡಿದರು. ಆಯುಕ್ತ ಸುನಿಲ್ ಕುಮಾರ್ ಪಕ್ಕದಲ್ಲಿಯೇ ಇದ್ದ ಎಂಜಿನಿಯರ್ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿ ನಂತರ ವರದಿ ಮಾಡುವುದಲ್ಲದೆ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು (ಗೂಗಲ್ ಲೊಕೇಷನ್ ಸಹಿತ) ಎಂದು ನಿರ್ದೇಶನ ನೀಡಿದರು.
ಫೋನ್-ಇನ್ ಕಾರ್ಯಕ್ರಮದಲ್ಲಿ 47 ಕರೆಗಳು ಸ್ವೀಕರಿಸಿದ್ದು, ಸಾರ್ವಜನಿಕರು ಆಯುಕ್ತರಿಗೆ ನೀಡಿದ ಅರ್ಜಿ ಸೇರಿ ಒಟ್ಟು 67 ಅಹವಾಲುಗಳು ದಾಖಲಾಗಿವೆ. ರಸ್ತೆ ನಿರ್ವಹಣೆ (ಎಂಜಿನಿಯರಿಂಗ್) 40, ಘನ ತ್ಯಾಜ್ಯ ನಿರ್ವಹಣೆ 7, ಅರಣ್ಯ ಇಲಾಖೆ 6, ಇ-ಖಾತಾ, ಖಾತಾ ಸೇವೆಗಳು 4, ವಿದ್ಯುತ್ ಇಲಾಖೆ 2, ಆರೋಗ್ಯ ಇಲಾಖೆ 2, ಉದ್ಯಾನವನ ಮತ್ತು ಆಟದ ಮೈದಾನಗಳು 2, ಇತರೆ 2, ಆಸ್ತಿ ತೆರಿಗೆ ಸೇವೆಗಳು 1, ಪಶುವೈದ್ಯಕೀಯ ಇಲಾಖೆ 1 ದೂರುಗಳು ದಾಖಲಾದವು.ರಸ್ತೆ ನಿರ್ವಹಣೆ ಹಾಗೂ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಅಹವಾಲುಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ, ಪಕ್ಕದಲ್ಲಿಯೇ ಕುಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರು ಸೂಚಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತರು (ಕಂದಾಯ-ಪ್ರಭಾರ)ಪಲ್ಲವಿ, ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಉಪ ಆಯುಕ್ತ ಸೋಮಶೇಖರ್, ಮುಖ್ಯ ಇಂಜಿನಿಯರ್ ರಾಘವೇಂದ್ರ ಪ್ರಸಾದ್, ಯಮುನಾ ಸೇರಿ ನಗರ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳಿದ್ದರು.