- ಕನ್ನಡಪ್ರಭ ವರದಿ ಪ್ರತಿಫಲ । ಹೊನ್ನಾಳಿ ಪುರಸಭೆಯಿಂದ ಬಾಕಿ ಬಿಲ್ ಪಾವತಿ - - - ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ಇಡೀ ಖಾಸಗಿ ಬಸ್ ನಿಲ್ದಾಣ ಮತ್ತು ನಿಲ್ದಾಣ ಸಂಕೀರ್ಣದಲ್ಲಿನ ವಾಣಿಜ್ಯ ಮಳಿಗೆಳಿಗೆ ಎರಡು ದಿನ-ರಾತ್ರಿ ವಿದ್ಯುತ್ ಸಂಪರ್ಕ ತಪ್ಪಿಸಲಾಗಿತ್ತು. ಇದರಿಂದ ಬಸ್ ನಿಲ್ದಾಣ ಸಂಪೂರ್ಣ ಕತ್ತಲಲ್ಲಿ ಮುಳುಗಿಹೋಗಿತ್ತು. ಪರಸ್ಥಳಗಳಿಗೆ ತೆರಳುವ ಪ್ರಯಾಣಿಕರು ಮತ್ತು ವ್ಯಾಪಾರ ವಹಿವಾಟು ಮಾಡಲಾಗದೇ ವಾಣಿಜ್ಯ ಸಂಕೀರ್ಣದಲ್ಲಿನ ಮಳಿಗೆಗಳ ವ್ಯಾಪಾರಸ್ಥರು ಕತ್ತಲಿನಿಂದಾಗಿ ತೀವ್ರ ತೊಂದರೆ ಅನುಭವಿಸುಸುತ್ತಿದ್ದರು. ಈಗ ಈ ಅವ್ಯವಸ್ಥೆ ತಪ್ಪಿದಂತಾಗಿದೆ.
ಕನ್ನಡಪ್ರಭ ಸೋಮವಾರದ ಸಂಚಿಕೆಯಲ್ಲಿ ವಿದ್ಯುತ್ ಅವ್ಯವಸ್ಥೆ ಕುರಿತು ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಸೋಮವಾರ ತಪ್ಪದೇ ವಿದ್ಯುತ್ ಬಿಲ್ ಪಾವತಿಸುವುದಾಗಿ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಬೆಸ್ಕಾಂ ಸಾರ್ವಜನಿಕರಿಗೆ ತೊಂದರೆ ತಪ್ಪಿಸುವ ಉದ್ದೇಶದಿಂದ ಪುನಃ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.ಅನಂತರ ಪುರಸಭೆಯವರು ಸೋಮವಾರ ಬೆಸ್ಕಾಂಗೆ ಚೆಕ್ ಮೂಲಕ ₹83,107.00 ಹಣ ಸಂದಾಯ ಮಾಡಿದ್ದಾರೆಂದು ಬೆಸ್ಕಾಂ ಅಧಿಕಾರಿ ಜಯಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
-2ಎಚ್.ಎಲ್.ಐ2ಃ: