ಜಿಲ್ಲೆಯಲ್ಲಿ ಶೇ.98.16ರಷ್ಟು ಎನುಮೆರೇಶನ್ ಫಾರಂ ವಿತರಣೆ

KannadaprabhaNewsNetwork |  
Published : Jul 16, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರಿನಲ್ಲಿ ಈವರೆಗೆ ಶೇ.98.16 ರಷ್ಟು ಮತದಾರರಿಗೆ ಎನುಮೆರೇಶನ್ ಫಾರಂ (ಗಣತಿ ನಮೂನೆ) ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ತಿಳಿಸಿದರು.

ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ।ಇಂದಿರಾಗಾಂಧಿ ಬಡಾವಣೆ ಹಾಗೂ ಹಕ್ಕಿಪಿಕ್ಕಿ ಜನಾಂಗದ ಕಾಲೋನಿಗೆ ಭೇಟಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈವರೆಗೆ ಶೇ.98.16 ರಷ್ಟು ಮತದಾರರಿಗೆ ಎನುಮೆರೇಶನ್ ಫಾರಂ (ಗಣತಿ ನಮೂನೆ) ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ತಿಳಿಸಿದರು.

ಬುಧವಾರ ಚಿಕ್ಕಮಗಳೂರು ನಗರದ ಇಂದಿರಾಗಾಂಧಿ ಬಡಾವಣೆ ಹಾಗೂ ಹಕ್ಕಿಪಿಕ್ಕಿ ಜನಾಂಗದ ಕಾಲೋನಿಗೆ ಭೇಟಿ ನೀಡಿ ಎಸ್‌ಐಆರ್ ಕಾರ್ಯ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ಒಟ್ಟು 9.60 ಲಕ್ಷ ಮತದಾರರ ಪಟ್ಟಿಯ ಆಧಾರದ ಮೇಲೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಣೆ ನಡೆಯುತ್ತಿದೆ. ಬುಧವಾರದ ಮಾಹಿತಿ ಪ್ರಕಾರ ಈಗಾಗಲೇ ಜಿಲ್ಲೆಯ ಶೇ.98.16ರಷ್ಟು ಮತದಾರರಿಗೆ ಅಂದರೆ ಒಟ್ಟು 9,42,563 ಜನರಿಗೆ ಗಣತಿ ನಮೂನೆ ತಲುಪಿಸಲಾಗಿದೆ. ಇನ್ನುಳಿದ 17,668 ಗಣತಿ ನಮೂನೆ ವಿತರಿಸಲು ಬಿಎಲ್‌ಒಗಳು ಶ್ರಮಿಸುತ್ತಿದ್ದು, ಭೌಗೋಳಿಕ ವಾಗಿ ಅತ್ಯಂತ ದೂರದಲ್ಲಿರುವ ಮನೆಗಳಿಗೂ ಸಹ ಖುದ್ದಾಗಿ ತೆರಳಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರೊಂದಿಗೂ ಸಭೆ ನಡೆಸಿ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ವಿವರಿಸಿದರು.

ಶೇ.54ಕ್ಕೂ ಹೆಚ್ಚು ಡಿಜಿಟಲೀಕರಣ ಪೂರ್ಣ: ಕಳೆದ ಒಂದು ವಾರದಿಂದ ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಗಳನ್ನು ಸಂಗ್ರಹಿಸಿ ಬಿಎಲ್‌ಒ ಆಪ್ ಮೂಲಕ ಡಿಜಿಟಲೀಕರಣಗೊಳಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಇಲ್ಲಿವರೆಗೆ ಶೇ. 54 ರಷ್ಟು ಅಂದರೆ 5,21,412 ಮತದಾರರ ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ತಿಳಿಸಿದರು.

ಹಕ್ಕಿಪಿಕ್ಕಿ ಕಾಲೋನಿಗೆ ಭೇಟಿ:

ಸ್ವೀಪ್ ಚಟುವಟಿಕೆಗಳ ಭಾಗವಾಗಿ ಇಂದಿರಾಗಾಂಧಿ ಬಡಾವಣೆ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ನಿವಾಸಿಗಳ ಮನೆಗಳಿಗೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಭೇಟಿ ನೀಡಿದರು.

ಮತದಾರರಿಗೆ ಗಣತಿ ನಮೂನೆಗಳು (ಎನುಮರೇಶನ್ ಫಾರಂ) ತಲುಪಿರುವುದನ್ನು ಖಚಿತಪಡಿಸಿಕೊಂಡ ಜಿಲ್ಲಾಧಿಕಾರಿ ಕೆಲ ನಿವಾಸಿಗಳಿಗೆ ತಾವೇ ಸ್ವತಃ ಮೊಬೈಲ್ ಮ್ಯಾಪಿಂಗ್ ಗೆ ಎದುರಾಗುತ್ತಿದ್ದ ತಾಂತ್ರಿಕ ತೊಂದರೆ ಬಗೆಹರಿಸಲು ಸ್ಥಳದಲ್ಲೇ ಇದ್ದ ಬಿಎಲ್‌ಒಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜು ಮೊದಲಾದವರಿದ್ದರು.

....ಬಾಕ್ಸ್....

ಡಿಜಿಟಲೀಕರಣ ಪೂರ್ಣಗೊಳಿಸಿದ ಬಿಎಲ್‌ಒಗಳಿಗೆ‌ ಸನ್ಮಾನ

ತರೀಕೆರೆ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 143 ರಲ್ಲಿ ಒಟ್ಟು 1,283 ಮತದಾರರಿದ್ದು, ವಿಶೇಷ ಸಮಗ್ರ ಪರಿಷ್ಕರಣೆ ಯಲ್ಲಿ ಬಹುತೇಕ ಎಲ್ಲ ಮತದಾರರನ್ನು ಸಂಪರ್ಕಿಸಿ ಅವರಿಗೆ ಎನುಮರೇಶನ್ ಫಾರಂಗಳನ್ನು ನಾರಾಯಣಪುರದ ಅಂಗನ ವಾಡಿ ಕೇಂದ್ರದ ಶಿಕ್ಷಕಿ ಶೀಲಾ ಹಾಗೂ ಅವರ ತಂಡ ಎನುಮರೇಶನ್ ಫಾರಂಗಳನ್ನು ಬಿಎಲ್‌ಒ ಆಪ್‌ನಲ್ಲಿ ಯಶಸ್ವಿಯಾಗಿ ಡಿಜಿಟೈಸ್ ಮಾಡಿದ್ದಾರೆ.

ಒಂದು ಸಾವಿರಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಡಿಜಿಟೈಸೇಶನ್ ಕಾರ್ಯ ಪೂರ್ಣ ಗೊಳಿಸಿದ ಬಿಎಲ್‌ಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತರೀಕೆರೆ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 16ರ ವಡ್ಡರಹಟ್ಟಿಯ ಬಿಎಲ್‌ಒ ಆಗಿರುವ ಯಲ್ಲಮ್ಮ ಅವರು ವಿಶೇಷ ಮತ ದಾರರ ಪರಿಷ್ಕರಣೆ ಹಾಗೂ ಮತದಾರರ ಡಿಜಿಟೈಸೇಶನ್ ಕಾರ್ಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಮತಗಟ್ಟೆ ಯಲ್ಲಿ ಒಟ್ಟು 560 ಮತದಾರರು ಇದ್ದು, ಅವರಲ್ಲಿ 537 ಮತದಾರರ ಮಾಹಿತಿ ಯಶಸ್ವಿಯಾಗಿ ಡಿಜಿಟೈಸೇಶನ್ ಮಾಡಿದ್ದಾರೆ. ಉಳಿದ 23 ಮತದಾರರ ಡಿಜಿಟೈಸೇಶನ್ ಮಾತ್ರ ಬಾಕಿ ಇದ್ದು, ಅದಕ್ಕೆ ಮತದಾರರು ಅಗತ್ಯ ಮ್ಯಾಪಿಂಗ್ ಮಾಹಿತಿ ಒದಗಿಸದಿರುವುದೇ ಕಾರಣ.

ವಿಶೇಷ ಚೇತನರಾದ ಯಲ್ಲಮ್ಮ ಅವರಿಗೆ ಹಂಚಿಕೆ ಮಾಡಿದ ಮತಗಟ್ಟೆ ಹಿಂದುಳಿದ ಪ್ರದೇಶ. ಇಂತಹ ಅನೇಕ ಸವಾಲುಗಳ ನಡುವೆಯೂ ಅವರು ಯಾವುದೇ ಹಂತದಲ್ಲೂ ತಾಲೂಕು ಕಚೇರಿ ಸಿಬ್ಬಂದಿಯ ಸಹಾಯ ಅವಲಂಬಿಸದೆ, ಸಂಪೂರ್ಣ ಡಿಜಿಟೈಸೇಶನ್ ಹಾಗೂ ಎಸ್‌ಐಆರ್ ಕಾರ್ಯವನ್ನು ಸ್ವತಃ ಜವಾಬ್ದಾರಿ. ಸಮಯೋಚಿತ ಮತ್ತು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಅವರಿಬ್ಬರ ಕರ್ತವ್ಯ ನಿಷ್ಠೆ, ಆತ್ಮವಿಶ್ವಾಸ, ಸೇವಾ ಮನೋಭಾವ ಇತರರಿಗೂ ಪ್ರೇರಣೆ. ಈ ಇಬ್ಬರು ಬಿಎಲ್‌ಒಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣರದಲ್ಲಿರುವ ಕೆಸ್ವಾನ್‌ನಲ್ಲಿ ಇಂದು ಜಿಲ್ಲಾಧಿಕಾರಿ ಭಂವರ್‌ಸಿಂಗ್ ಮೀನಾ ಸನ್ಮಾನಿಸಿ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ನಟೇಶ್, ತಹಸೀಲ್ದಾರರಾದ ವಿನಾಯಕ ಸಾಗರ್, ರೇಷ್ಮಾ ಶೆಟ್ಟಿ, ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಹೆಸರಿನ ಖಾತೆಯ ಬಹುಕೋಟಿ ಹಗರಣ ತನಿಖೆಗೆ ಆಗ್ರಹ
ಶಾಲಾ ಕಾಲೇಜು ಹಂತದಲ್ಲೇ ಪ್ರತಿಭೆ ಗುರುತಿಸಿ