ಕನ್ನಡಪ್ರಭ ವಾರ್ತೆ ಕಾಳಗಿ
ಕೊಡದೂರಿನ ತೊಗರಿ ರೈತರು ಬೆಳೆ ಹಾಳಾದರೂ ಸಹಿತ ಏನನ್ನೂ ತೋರಗೊಡದೆ ಧೈರ್ಯದಿಂದ ಸವಾಲು ಎದುರಿಸಲು ಸಿದ್ಧರಾಗಿದ್ದಾರೆ.
100 ಚೀಲ ಬರುವ ಜಾಗದಲ್ಲಿ 3 ಚೀಲನೂ ಬರ್ತಾ ಇಲ್ಲವಾದರೂ, ಇವರು ಮುಂದಿನ ಫಸಲಿನ ಕನಸು ಕಂಡು ಏನೇ ಆದರೂ ಸಾಗೋಣ ಎನ್ನತ್ತಿದ್ದಾರೆ. ತೊಗರಿ ನಂಬಿರೋ ರೈತರಿಗೆ ಸರಕಾರ ಕೈ ಹಿಡಿಯಲಿ ಎನ್ನುತ್ತಿದ್ದಾರೆ.ಸತ್ಯಶೇಖರ ಖದ್ದರಗಿ ಕೊಡದೂರ ಸರ್ವೆ ನಂ.135 ಒಟ್ಟು 25 ಏಕರೆ ಜಮೀನಿನಲ್ಲಿ ತೋಗರಿ ಬಿತ್ತನೆಗೆ ಒಟ್ಟು ಖರ್ಚು ₹1.50 ಲಕ್ಷ ರು. ವೆಚ್ಚ ಬರಿಸಲಾಗಿದೆ. ಪ್ರಾರಂಭದಲ್ಲೇ ಹಚ್ಚು ಹಸಿರಾಗಿ ಇರುವ ತೊಗರಿ ಕಂಡರೆ ಮನದಲ್ಲಿ ನೂರಾರು ಆಸೆಗಳನ್ನು ಮೂಡಿದವು. ಇಗಿರುವ ತೊಗರಿ ಬೆಳೆಯ ಪರಿಸ್ಥಿತಿ ನೋಡಿದರೆ ಆತಂಕ ಹೆಚ್ಚಿಸಿದೆ. ರೈತ ಕೈಲಾಸನ್ದು ಇದೇ ಸ್ಥಿತಿಯಾಗಿದೆ. ಈ ರೈತನ ಕಷ್ಟ ದೇವರೆ ಬಲ್ಲ, ಒಟ್ಟು 25 ಏಕರೆ ಹಾಳಾಗಿದೆ. ಬೀಜ ಗೊಬ್ಬರ, ಕೀಟನಾಶಕ, ಕಾರ್ಮಿಕರು, ಬಿತ್ತನೆ ಸೇರಿ ವೆಚ್ಚ ಮಾಡಿದ ವಿವರ ಹೇಳುತ್ತ ಅಲವತ್ತುಕೊಂಡ ರೈತರು ಕನ್ನಡಪ್ರಭ ಜೊತೆ ಮಾತನಾಡುತ್ತ ತಮಗೆ ದೇವರೇ ದಿಕ್ಕೆಂದರು.