ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಧರಿಯಾಪುರ ಕೋಟನೂರ ಬಡಾವಣೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನಿರ್ಮಿಸಲಾಗಿರುವ ಬಾಲಕಿಯರ ಹಾಸ್ಟೆಲ್ ಉದ್ಘಾಟಿಸಿ ಮಾತನಾಡಿದರು.ಕಲಬುರಗಿಯಲ್ಲಿನ ವಸತಿ ನಿಲಯ ನಿರ್ಮಾಣವನ್ನುಮೆಚ್ಚಿಕೊಂಡ ಅವರು ಈಗಾಗಲೇ ಕಲ್ಯಾಣಕರ್ನಾಟಕ ಭಾಗದಎಲ್ಲ ಜಿಲ್ಲೆಗಳಲ್ಲಿ 200 ವಿದ್ಯಾರ್ಥಿನಿಯರಿಗಾಗಿ ಉಳಿಯುವಂತಹ ಸವಲತ್ತಿರುವ ಹಾಸ್ಟೆಲ್ ನಿರ್ಮಾಣದಚಿಂತನೆ ನಡೆದಿದೆ. 20 ಜಿಲ್ಲೆಗಳಲ್ಲಿ ವಿದ್ಯಾರ್ಥಿಹಾಸ್ಟೆಲ್ಗಳ ನಿರ್ಮಾಣಕ್ಕೆಒತ್ತು ನೀಡಲಾಗುತ್ತಿದೆ. ಬೀದರ್ ನಗರದಲ್ಲಿ ವಿದ್ಯಾರ್ಥಿನಿಗಳಿಗಾಗಿ ಹಾಸ್ಟೆಲ್ ನಿರ್ಮಿಸಲು ಸ್ಥಳ ಗುರುತಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.
ಕಲಬುರಗಿ ನಗರದಲ್ಲಿಆರಂಭಿಸಲಾಗಿರುವ ವಿದ್ಯಾರ್ಥಿನಿಯರ ನೂತನ ಹಾಸ್ಟೆಲ್ನಲ್ಲಿಉಚಿತವಾಗಿದಾಸೋಹ ವ್ಯವಸ್ಥೆ ಇರಲಿದೆ. ಇದಕ್ಕಾಗಿ ಬೆಂಗಳೂರಿನ ಸಂಸ್ಥೆಯೊಂದು ಉಚಿತ ಊಟದ ವ್ಯವಸ್ಥೆ ಕಲ್ಪಿಸಲು ಮುಂದೆ ಬಂದಿದೆ. ವೀರಶೈವ ಲಿಂಗಾಯತ ಸಮುದಾಯದಎಲ್ಲ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಲುಎಲ್ಲರೂಒಗ್ಗೂಡಿ ಹೋರಾಡುವ ಮೂಲಕ ತಾರ್ಕಿಕಅಂತ್ಯಕ್ಕೆಕೊಂಡೊಯ್ಯುವಯತ್ನ ಮಾಡಬೇಕಿದೆ ಎಂದು ಒತ್ತಿ ಹೇಳಿದರು.ಸಣ್ಣಕೈಗಾರಿಕಾ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪದರ್ಶನಾಪುರ ಇದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ಹಾಗೂ ನೂತನ ಹಾಸ್ಟೆಲ್ ನಿರ್ಮಾಣದ ಗುತ್ತಿಗೆದಾರ ಅನಿಲ್ ಕುಮಾರ್ ಪಾಂಡೆ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.