ಕಲ್ಲುಶೆಟ್ಟಿಹಳ್ಳಿಯಲ್ಲಿ ಸೂರಿಲ್ಲದೆ ಜೀವನ ಸಾಗಿಸುತ್ತಿದ್ದ ಅಣ್ಣೇಗೌಡರು । ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಸೂರು
ಕನ್ನಡಪ್ರಭ ವಾರ್ತೆ ಬೇಲೂರು
ದುಸ್ಥಿತಿಯಲ್ಲಿ ಜೀವಿಸುತ್ತಿರುವ ಅಸಹಾಯಕ ಬಂಧುಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಜೀವಿತಾವಧಿಯ ಕೊನೆಯ ಕ್ಷಣದಲ್ಲಿ ನೆಮ್ಮದಿಯ ಜೀವನವನ್ನು ಕಲ್ಪಿಸುವುದು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಆಶಯವಾಗಿದ್ದು, ತಾಲೂಕಿನ ಕಲ್ಲುಶೆಟ್ಟಿಹಳ್ಳಿ ಗ್ರಾಮದಲ್ಲಿ ಸೂರಿಲ್ಲದೆ ಅನಾಥರಾಗಿ ಜೀವನ ಸಾಗಿಸುತ್ತಿದ್ದ ಜನ್ಮತಃ ಕುರುಡರಾಗಿದ್ದ ಅಣ್ಣೇಗೌಡರಿಗೆ ಪುಟ್ಟದೊಂದು ಮನೆ ಕಟ್ಟಿಕೊಟ್ಟು ಅವರ ಜೀವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ವಾತ್ಸಲ್ಯ ಯೋಜನೆ ಬೆಳಕು ಮೂಡಿಸಿದೆ.ಜನ್ಮತಃ ಕುರುಡರು:
ಜ್ಞಾನವಿಕಾಸ ಮೇಲ್ವಿಚಾರಕರ ಗಮನಕ್ಕೆ:
ಬೇಲೂರು ತಾಲೂಕಿನ ಜ್ಞಾನನವಿಕಾಸ ಸಮನ್ವಯಾಧಿಕಾರಿ ಮತ್ತು ವಲಯದ ಮೇಲ್ವಿಚಾರಕರು ಕಲ್ಲುಶೆಟ್ಟಿಹಳ್ಳಿ ಗ್ರಾಮದಲ್ಲಿ ಕ್ಷೇತ್ರ ಸಂದರ್ಶನ ಮಾಡುವ ಸಂದರ್ಭ ಬೀದಿ ಬದಿಯಲ್ಲಿ ಮಲಗಿರುವ ಅಣ್ಣೇಗೌಡರನ್ನು ಕಂಡು ವಿಚಾರಿಸಿದರು. ಅಣ್ಣೇಗೌಡರು ಹುಟ್ಟಿನಿಂದಲೇ ಕುರುಡರಾಗಿದ್ದು ಇರಲು ಮನೆಯು ಇಲ್ಲದೆ 15 ವರ್ಷಗಳಿಂದ ಬೀದಿ ಬದಿಯಲ್ಲಿ ಮಲಗಿಕೊಂಡು ಜೀವನ ನಡೆಸುವಂತಹ ಕಷ್ಟಕರ ಪರಿಸ್ಥಿತಿಯಲ್ಲಿರುವುದನ್ನು ಗಮನಿಸಿದರು. ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರಿಂದ ಜಾರಿಗೆ ಬಂದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣ ಮಾಡಬೇಕು ಎಂದು ತೀರ್ಮಾಸಿದರು.
ಈ ಮದ್ಯೆ ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡೆಯಿಂದ ಮಾಸಾಶನ ನೀಡಲು ಶುರು ಮಾಡಿದ ನಂತರ ಇವರ ನಿತ್ಯ ಜೀವನದ ಖರ್ಚು ವೆಚ್ಚಕ್ಕೆ ಸಹಕಾರಿಯಾಯಿತು. ವಾತ್ಸಲ್ಯ ಮನೆ ನಿರ್ಮಾಣ ಬಗ್ಗೆ ಗ್ರಾಮದ ಪ್ರಮುಖರು ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡಿದರು. ಬೆರಳೆಣಿಕೆ ದಿನಗಳಲ್ಲಿ ಗೌಡರಿಗೆ ಮನೆ ಸಿದ್ದವಾಯಿತು. ಈ ಮಧ್ಯೆ ಅಣ್ಣೇಗೌಡರು ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಸಂಸ್ಥೆ ಕಡೆಯಿಂದ ಚಿಕಿತ್ಸೆಯನ್ನು ಕೊಡಿಸಿ ಪೂರ್ಣ ವೆಚ್ಚವನ್ನು ಸಂಸ್ಥೆಯಿಂದಲೇ ಭರಿಸಲಾಯಿತು. ಮಳೆಗಾಲದ ರಸ್ತೆ ಬದಿಯಲ್ಲಿನ ಹಾಗೂ ದೇವಸ್ಥಾನ ವಾಸಕ್ಕೂ ಮುಕ್ತಿ ದೊರೆತಂತಾಗಿದೆ.
ವಾತ್ಸಲ್ಯ ಮನೆ ಹಸ್ತಾಂತರ ಸಂದರ್ಭ ತಾಲೂಕು ದಂಡಾಧಿಕಾರಿ ಮಮತ ಎಂ. ಮಾತನಾಡಿ ಸರ್ಕಾರ ಮಾಡಬೇಕಾದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡಿ ತೋರಿಸಿರುವುದು ಶ್ಲಾಘನೀಯ. ಇಂದಿನಿಂದ ಇವರ ಜೀವನ ನಿರ್ವಹಣೆಗಾಗಿ ಸರ್ಕಾರದಿಂದ ವೃದ್ಧಾಪ್ಯ ವೇತನವನ್ನು ಮಂಜೂರು ಮಾಡುವಂತೆ ಇಲಾಖೆ ಸಿಬ್ಬಂದಿಗೆ ಆದೇಶ ಮಾಡಿದರು. ಮಾತೃಶ್ರೀಯವರ ಆಶಯದಂತೆ ಇಂತಹ ಕಾರ್ಯಕ್ರಮಗಳಿಗೆ ದೇಶದ ಸಹೃದಯಿಗಳು ತಮ್ಮನ್ನ ತಾವು ತೊಡಗಿಸಿಕೊಂಡಲ್ಲಿ ಶೋಚನೀಯ ಸ್ಥಿತಿಯಲ್ಲಿ ಬದುಕುವ ವ್ಯಕ್ತಿಗಳಿಗೆ ಆಸರೆಯಾಗಬಹುದು ಎಂಬ ಆಶಯ ವ್ಯಕ್ತಪಡಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ವಾತ್ಸಲ್ಯ ಯೋಜನೆಯಿಂದ ನಿರ್ಮಾಣವಾದ ಮನೆ.